ETV Bharat / bharat

ಲಿಂಗ ಪರಿವರ್ತನೆಗೆ ಲಾಡ್ಜ್​​ನಲ್ಲೇ ಶಸ್ತ್ರಚಿಕಿತ್ಸೆ.. ತೀವ್ರ ರಕ್ತಸ್ರಾವದಿಂದ ವ್ಯಕ್ತಿ ಸಾವು

author img

By

Published : Feb 26, 2022, 5:31 PM IST

ಬಿ. ಫಾರ್ಮ್​​ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡಿದ್ದ ಶ್ರೀಕಾಂತ್ ಲಿಂಗ ಪರಿವರ್ತನೆಗೊಳಗಾಗಿದ್ದು, ಈ ವೇಳೆ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

Andhra Pradesh crime news
Andhra Pradesh crime news

ನೆಲ್ಲೂರು(ಆಂಧ್ರಪ್ರದೇಶ): ಲಿಂಗ ಪರಿವರ್ತನೆಗೆ ಮುಂದಾಗಿದ್ದ ವ್ಯಕ್ತಿಯೊಬ್ಬನಿಗೆ ಲಾಡ್ಜ್​ನಲ್ಲಿ ಬಿ. ಫಾರ್ಮಸಿ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸೆ ಮಾಡಿದ್ದು, ಈ ವೇಳೆ, ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಈ ಘಟನೆ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಪ್ರಕಾಶಂ ಜಿಲ್ಲೆಯ ಜರುಗುಮಲ್ಲಿ ಮಂಡಲದ ಕಾಮೆಪಲ್ಲಿ ಗ್ರಾಮದ ನಿವಾಸಿ ಶ್ರೀಕಾಂತ್​ ಕಳೆದ ಕೆಲ ವರ್ಷಗಳ ಹಿಂದೆ ಅಮೂಲ್ಯ ಎಂಬ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಕಳೆದ ಆರು ತಿಂಗಳ ಹಿಂದೆ ಅಮೂಲ್ಯಾ ಗಂಡನನ್ನ ಬಿಟ್ಟು ಹೋಗಿದ್ದಳು. ಇದಾದ ಬಳಿಕ ಒಂಗೋಲ್​​ನಲ್ಲಿ ವಾಸ ಮಾಡಲು ಶುರು ಮಾಡಿದ್ದ. ಈತನಿಗೆ ವಿಶಾಖಪಟ್ಟಣಂದ ಅಶೋಕ್ ಎಂಬಾತ ಪರಿಚಯವಾಗಿದ್ದ. ಆರು ತಿಂಗಳ ನಂತರ ಮೊಬೈಲ್ ಆ್ಯಪ್ ಮೂಲಕ ನೆಲ್ಲೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮಸಿಯ 4ನೇ ವರ್ಷದ ವಿದ್ಯಾರ್ಥಿಗಳಾದ ಎ.ಮಸ್ತಾನ್, ಜೀವಾ ಇವರಿಗೆ ಪರಿಚಯವಾಗಿದ್ದರು.

ಇದನ್ನೂ ಓದಿರಿ: ದೇಶ ರಕ್ಷಣೆ ಮೊದಲ ಆದ್ಯತೆ: ಉಕ್ರೇನ್​ ಸೇನೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ವಿಟಾಲಿ!

ಇವರ ನಡುವೆ ಆತ್ಮೀಯತೆ ಬೆಳೆಯುತ್ತಿದ್ದಂತೆ ಶ್ರೀಕಾಂತ್ ಮುಂಬೈಗೆ ಹೋಗಿ ಲಿಂಗ ಪರಿವರ್ತನೆ ಮಾಡಿಸುವ ಶಸ್ತ್ರಚಿಕಿತ್ಸೆಗೊಳಗಾಗುವುದಾಗಿ ಮಸ್ತಾನ್ ಮುಂದೆ ಹೇಳಿದ್ದರು. ಈ ವೇಳೆ, ಅದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆ ಎಂದು ಮಸ್ತಾನ್​, ಜೀವಾ ತಿಳಿಸಿದ್ದರು. ಜೊತೆಗೆ ತಾವು ಬಿ. ಫಾರ್ಮಸಿ ವಿದ್ಯಾರ್ಥಿಗಳಾಗಿದ್ದು, ಕಡಿಮೆ ಹಣದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಭರವಸೆ ನೀಡಿದ್ದರು.

ಲಾಡ್ಜ್​ನಲ್ಲಿ ಶ್ರೀಕಾಂತ್​ಗೆ ಶಸ್ತ್ರಚಿಕಿತ್ಸೆ: ಫೆ. 23ರಂದು ನೆಲ್ಲೂರಿನಲ್ಲಿರುವ ಲಾಡ್ಜ್​​ವೊಂದರಲ್ಲಿ ಬಾಡಿಗೆ ರೂಂ ಮಾಡಿ, ಶ್ರೀಕಾಂತ್​ಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ಜನನಾಂಗ ತೆಗೆದು ಹಾಕುವ ವೇಳೆ ತೀವ್ರ ರಕ್ತಸ್ರಾವವಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಇದರ ಬಗ್ಗೆ ಲಾಡ್ಜ್​ ಸಿಬ್ಬಂದಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ನೆಲ್ಲೂರು(ಆಂಧ್ರಪ್ರದೇಶ): ಲಿಂಗ ಪರಿವರ್ತನೆಗೆ ಮುಂದಾಗಿದ್ದ ವ್ಯಕ್ತಿಯೊಬ್ಬನಿಗೆ ಲಾಡ್ಜ್​ನಲ್ಲಿ ಬಿ. ಫಾರ್ಮಸಿ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸೆ ಮಾಡಿದ್ದು, ಈ ವೇಳೆ, ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಈ ಘಟನೆ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಪ್ರಕಾಶಂ ಜಿಲ್ಲೆಯ ಜರುಗುಮಲ್ಲಿ ಮಂಡಲದ ಕಾಮೆಪಲ್ಲಿ ಗ್ರಾಮದ ನಿವಾಸಿ ಶ್ರೀಕಾಂತ್​ ಕಳೆದ ಕೆಲ ವರ್ಷಗಳ ಹಿಂದೆ ಅಮೂಲ್ಯ ಎಂಬ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಕಳೆದ ಆರು ತಿಂಗಳ ಹಿಂದೆ ಅಮೂಲ್ಯಾ ಗಂಡನನ್ನ ಬಿಟ್ಟು ಹೋಗಿದ್ದಳು. ಇದಾದ ಬಳಿಕ ಒಂಗೋಲ್​​ನಲ್ಲಿ ವಾಸ ಮಾಡಲು ಶುರು ಮಾಡಿದ್ದ. ಈತನಿಗೆ ವಿಶಾಖಪಟ್ಟಣಂದ ಅಶೋಕ್ ಎಂಬಾತ ಪರಿಚಯವಾಗಿದ್ದ. ಆರು ತಿಂಗಳ ನಂತರ ಮೊಬೈಲ್ ಆ್ಯಪ್ ಮೂಲಕ ನೆಲ್ಲೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮಸಿಯ 4ನೇ ವರ್ಷದ ವಿದ್ಯಾರ್ಥಿಗಳಾದ ಎ.ಮಸ್ತಾನ್, ಜೀವಾ ಇವರಿಗೆ ಪರಿಚಯವಾಗಿದ್ದರು.

ಇದನ್ನೂ ಓದಿರಿ: ದೇಶ ರಕ್ಷಣೆ ಮೊದಲ ಆದ್ಯತೆ: ಉಕ್ರೇನ್​ ಸೇನೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ವಿಟಾಲಿ!

ಇವರ ನಡುವೆ ಆತ್ಮೀಯತೆ ಬೆಳೆಯುತ್ತಿದ್ದಂತೆ ಶ್ರೀಕಾಂತ್ ಮುಂಬೈಗೆ ಹೋಗಿ ಲಿಂಗ ಪರಿವರ್ತನೆ ಮಾಡಿಸುವ ಶಸ್ತ್ರಚಿಕಿತ್ಸೆಗೊಳಗಾಗುವುದಾಗಿ ಮಸ್ತಾನ್ ಮುಂದೆ ಹೇಳಿದ್ದರು. ಈ ವೇಳೆ, ಅದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆ ಎಂದು ಮಸ್ತಾನ್​, ಜೀವಾ ತಿಳಿಸಿದ್ದರು. ಜೊತೆಗೆ ತಾವು ಬಿ. ಫಾರ್ಮಸಿ ವಿದ್ಯಾರ್ಥಿಗಳಾಗಿದ್ದು, ಕಡಿಮೆ ಹಣದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಭರವಸೆ ನೀಡಿದ್ದರು.

ಲಾಡ್ಜ್​ನಲ್ಲಿ ಶ್ರೀಕಾಂತ್​ಗೆ ಶಸ್ತ್ರಚಿಕಿತ್ಸೆ: ಫೆ. 23ರಂದು ನೆಲ್ಲೂರಿನಲ್ಲಿರುವ ಲಾಡ್ಜ್​​ವೊಂದರಲ್ಲಿ ಬಾಡಿಗೆ ರೂಂ ಮಾಡಿ, ಶ್ರೀಕಾಂತ್​ಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ಜನನಾಂಗ ತೆಗೆದು ಹಾಕುವ ವೇಳೆ ತೀವ್ರ ರಕ್ತಸ್ರಾವವಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಇದರ ಬಗ್ಗೆ ಲಾಡ್ಜ್​ ಸಿಬ್ಬಂದಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.