ETV Bharat / bharat

Aircel-Maxis case : ಮಾಜಿ ಸಚಿವ ಚಿದಂಬರಂ ಹಾಗೂ ಮಗ ಕಾರ್ತಿಗೆ ಸಮನ್ಸ್​​

author img

By

Published : Nov 27, 2021, 8:07 PM IST

2006ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವಧಿಯಲ್ಲಿ ನಡೆದಿರುವ ಏರ್​ಸೆಲ್​​-ಮ್ಯಾಕ್ಸಿಸ್​​​ ಪ್ರಕರಣದಲ್ಲಿ ಇದೀಗ ಸಮನ್ಸ್​ ಜಾರಿಯಾಗಿದೆ. ಡಿಸೆಂಬರ್​​ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ..

Aircel-Maxis case
Aircel-Maxis case

ನವದೆಹಲಿ : ಏರ್​ಸೆಲ್​​-ಮ್ಯಾಕ್ಸಿಸ್​​ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಈಗಾಗಲೇ ಚಾರ್ಜ್‌ಶೀಟ್​ ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲೇ ದೆಹಲಿ ಕೋರ್ಟ್​​​​ ಮಾಜಿ ಸಚಿವ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ​​​ ಸಮನ್ಸ್ ಜಾರಿ ಮಾಡಿದೆ.

ದೋಷಾರೋಪ ಪಟ್ಟಿ ಪರಿಶೀಲನೆ ಮಾಡಿರುವ ವಿಶೇಷ ನ್ಯಾಯಾಧೀಶರಾದ ಎಂ.ಕೆ ನಾಗ್ಪಾಲ್​,​ ಡಿಸೆಂಬರ್​​ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್​ ಜಾರಿಗೊಳಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಕೆ ಮಾಡಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಹಾಗೂ ಅವರ ಮಗ ಕಾರ್ತಿ ವಿರುದ್ಧ ಸಮರ್ಪಕ ಸಾಕ್ಷಿ ಲಭ್ಯವಾಗಿರುವ ಕಾರಣ ಇದೀಗ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಯುನೈಟೆಡ್​ ಕಿಂಗ್​ಡಮ್ ಹಾಗೂ ಸಿಂಗಪೂರ್​ನಿಂದಲೂ ಅಗತ್ಯ ಮಾಹಿತಿ ಪೂರೈಕೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. 2006ರಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದ ವೇಳೆ ನಡೆದಿರುವ ಪ್ರಕರಣ ಇದಾಗಿದೆ.

ಏರ್​ಸೆಲ್​​-ಮ್ಯಾಕ್ಸಿಸ್​ ಒಪ್ಪಂದಕ್ಕಾಗಿ ವಿದೇಶಿ ಹೂಡಿಕೆಗೆ 3,500 ಕೋಟಿ ಮೊತ್ತದ ಹಗರಣವಾಗಿದೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ಚಿದಂಬರಂ ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.

ಜೊತೆಗೆ ಪುತ್ರ ಕಾರ್ತಿ ಮಾಲೀಕತ್ವದ ಕಂಪನಿಯಲ್ಲಿ ಶೇ.5ರಷ್ಟು ಪಾಲು ಪಡೆಯಲು ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಒಪ್ಪಂದದ ಅನುಮತಿ ನೀಡಿದ್ದರು ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?: ಏರ್​​ಸೆಲ್​ ಕಂಪನಿ 2006ರಲ್ಲಿ 3,500 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೇಳಿ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈ ವೇಳೆ ಟೆಲಿಕಾಂ ಕಂಪನಿ 180 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮತಿ ನೀಡಿತ್ತು. ಈ ವೇಳೆ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದರಿಂದ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾರೆ.

ನವದೆಹಲಿ : ಏರ್​ಸೆಲ್​​-ಮ್ಯಾಕ್ಸಿಸ್​​ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಈಗಾಗಲೇ ಚಾರ್ಜ್‌ಶೀಟ್​ ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲೇ ದೆಹಲಿ ಕೋರ್ಟ್​​​​ ಮಾಜಿ ಸಚಿವ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ​​​ ಸಮನ್ಸ್ ಜಾರಿ ಮಾಡಿದೆ.

ದೋಷಾರೋಪ ಪಟ್ಟಿ ಪರಿಶೀಲನೆ ಮಾಡಿರುವ ವಿಶೇಷ ನ್ಯಾಯಾಧೀಶರಾದ ಎಂ.ಕೆ ನಾಗ್ಪಾಲ್​,​ ಡಿಸೆಂಬರ್​​ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್​ ಜಾರಿಗೊಳಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಕೆ ಮಾಡಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಹಾಗೂ ಅವರ ಮಗ ಕಾರ್ತಿ ವಿರುದ್ಧ ಸಮರ್ಪಕ ಸಾಕ್ಷಿ ಲಭ್ಯವಾಗಿರುವ ಕಾರಣ ಇದೀಗ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಯುನೈಟೆಡ್​ ಕಿಂಗ್​ಡಮ್ ಹಾಗೂ ಸಿಂಗಪೂರ್​ನಿಂದಲೂ ಅಗತ್ಯ ಮಾಹಿತಿ ಪೂರೈಕೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. 2006ರಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದ ವೇಳೆ ನಡೆದಿರುವ ಪ್ರಕರಣ ಇದಾಗಿದೆ.

ಏರ್​ಸೆಲ್​​-ಮ್ಯಾಕ್ಸಿಸ್​ ಒಪ್ಪಂದಕ್ಕಾಗಿ ವಿದೇಶಿ ಹೂಡಿಕೆಗೆ 3,500 ಕೋಟಿ ಮೊತ್ತದ ಹಗರಣವಾಗಿದೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ಚಿದಂಬರಂ ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.

ಜೊತೆಗೆ ಪುತ್ರ ಕಾರ್ತಿ ಮಾಲೀಕತ್ವದ ಕಂಪನಿಯಲ್ಲಿ ಶೇ.5ರಷ್ಟು ಪಾಲು ಪಡೆಯಲು ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಒಪ್ಪಂದದ ಅನುಮತಿ ನೀಡಿದ್ದರು ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?: ಏರ್​​ಸೆಲ್​ ಕಂಪನಿ 2006ರಲ್ಲಿ 3,500 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೇಳಿ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈ ವೇಳೆ ಟೆಲಿಕಾಂ ಕಂಪನಿ 180 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮತಿ ನೀಡಿತ್ತು. ಈ ವೇಳೆ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದರಿಂದ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.