ETV Bharat / bharat

9 ಗಂಟೆಗಳ ಕಾಲ ಟ್ರಾಫಿಕ್​ ಜಾಮ್‌: 300 ವಕೀಲರ ವಿರುದ್ಧ ಪ್ರಕರಣ ದಾಖಲು

ಅಪಘಾತ ಪ್ರಕರಣದಲ್ಲಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕೊಪಗೊಂಡ ವಕೀಲರು ಲಕ್ನೋದ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿದ್ದರು. ಇದರಿಂದ ಸುಮಾರು 9 ತಾಸು ಸಂಚಾರ ದಟ್ಟನೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗಿತ್ತು.

author img

By

Published : Jan 2, 2023, 12:50 PM IST

File a case against 300 lawyers who caused the traffic
ಟ್ರಾಫಿಕ್​ಗೆ ಕಾರಣರಾದ 300 ವಕೀಲರ ವಿರುದ್ಧ ಪ್ರಕರಣ ದಾಖಲು

ಲಕ್ನೋ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲೆತ್ನಿಸಿ ಸುಮಾರು 9 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು 300 ವಕೀಲರ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ವಕೀಲರೊಬ್ಬರು ಮನೆಗೆ ತೆರಳುತ್ತಿದ್ದಾಗ ಅವರ ಕಾರು ಹಾಗು ಬೈಕ್‌ ನಡುವೆ ಅಪಘಾತ ನಡೆದಿತ್ತು. ಇದರಿಂದ ಬೈಕ್​ ಸವಾರನಿಗೆ ಗಾಯಗಳಾಗಿತ್ತು. ಸ್ಥಳೀಯರು ವಕೀಲರ ಕಾರು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ವಕೀಲರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.

ಠಾಣೆಯಲ್ಲಿ ಪೊಲೀಸರು ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಉಳಿದ ವಕೀಲರು ಕೂಡಲೇ ಜಮಾಯಿಸಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಪ್ರತಿಭಟನೆ ಆರಂಭಿಸಿದ್ದರು. ಇದರಿಂದ ಸತತ 9 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಘಟನೆಗೆ ಕಾರಣರಾದ ಎಲ್ಲಾ ವಕೀಲರ ವಿರುದ್ಧವೂ ಪೊಲೀಸರು ಕೇಸು ಹಾಕಿದ್ದಾರೆ.

ವಕೀಲರ ಪ್ರತಿಭಟನೆಯಿಂದ ಆಂಬ್ಯುಲೆನ್ಸ್‌ ಸಹಿತ ಪ್ರಯಾಣಿಕರು ಹಲವು ಗಂಟೆಗಳ ಕಾಲ ರಸ್ತೆಯಲ್ಲಿ ಸಿಲುಕಿಕೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಗುಂಪು ಚದುರಿಸಲು ಕೆಲಸ ಮಾಡಿದ್ದರು. ಆದರೆ ವಕೀಲರು ಇದಕ್ಕೆ ಜಗ್ಗಲಿಲ್ಲ. ಕೂಡಲೇ ಸಬ್ ಇನ್ಸ್‌ಪೆಕ್ಟರ್‌ರನ್ನು ಅಮಾನತುಗೊಳಿಸಬೇಕು. ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಹೀಗಾಗಿ, ಅಪರಿಚಿತ ವಕೀಲರ ವಿರುದ್ಧ ಗಲಭೆ, ಸಾರ್ವಜನಿಕ ಶಾಂತಿ ಭಂಗ ಮತ್ತು ಇತರ ಸಂಬಂಧಿತ ಆರೋಪಗಳಿಗೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಹುಲ್ ರಾಜ್ ಹೇಳಿದ್ದಾರೆ. ವಕೀಲರನ್ನು ಬಂಧಿಸಿದ ಆರೋಪ ಹೊತ್ತಿದ್ದ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಮೋಹನ್‌ಲಾಲ್‌ಗಂಜ್ ಪೊಲೀಸ್ ಠಾಣೆಯಿಂದ ಗೋಮತಿ ನಗರಕ್ಕೆ ವರ್ಗಾಯಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ವಿವಾದ.. ಮಥುರಾ ಶಾಹಿ ಸಂಬಂಧಿತ ಸಮಗ್ರ ವರದಿ ತಯಾರಿಕೆ ಪ್ರಕ್ರಿಯೆ ಇಂದಿನಿಂದ ಆರಂಭ

ಲಕ್ನೋ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲೆತ್ನಿಸಿ ಸುಮಾರು 9 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು 300 ವಕೀಲರ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ವಕೀಲರೊಬ್ಬರು ಮನೆಗೆ ತೆರಳುತ್ತಿದ್ದಾಗ ಅವರ ಕಾರು ಹಾಗು ಬೈಕ್‌ ನಡುವೆ ಅಪಘಾತ ನಡೆದಿತ್ತು. ಇದರಿಂದ ಬೈಕ್​ ಸವಾರನಿಗೆ ಗಾಯಗಳಾಗಿತ್ತು. ಸ್ಥಳೀಯರು ವಕೀಲರ ಕಾರು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ವಕೀಲರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.

ಠಾಣೆಯಲ್ಲಿ ಪೊಲೀಸರು ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಉಳಿದ ವಕೀಲರು ಕೂಡಲೇ ಜಮಾಯಿಸಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಪ್ರತಿಭಟನೆ ಆರಂಭಿಸಿದ್ದರು. ಇದರಿಂದ ಸತತ 9 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಘಟನೆಗೆ ಕಾರಣರಾದ ಎಲ್ಲಾ ವಕೀಲರ ವಿರುದ್ಧವೂ ಪೊಲೀಸರು ಕೇಸು ಹಾಕಿದ್ದಾರೆ.

ವಕೀಲರ ಪ್ರತಿಭಟನೆಯಿಂದ ಆಂಬ್ಯುಲೆನ್ಸ್‌ ಸಹಿತ ಪ್ರಯಾಣಿಕರು ಹಲವು ಗಂಟೆಗಳ ಕಾಲ ರಸ್ತೆಯಲ್ಲಿ ಸಿಲುಕಿಕೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಗುಂಪು ಚದುರಿಸಲು ಕೆಲಸ ಮಾಡಿದ್ದರು. ಆದರೆ ವಕೀಲರು ಇದಕ್ಕೆ ಜಗ್ಗಲಿಲ್ಲ. ಕೂಡಲೇ ಸಬ್ ಇನ್ಸ್‌ಪೆಕ್ಟರ್‌ರನ್ನು ಅಮಾನತುಗೊಳಿಸಬೇಕು. ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಹೀಗಾಗಿ, ಅಪರಿಚಿತ ವಕೀಲರ ವಿರುದ್ಧ ಗಲಭೆ, ಸಾರ್ವಜನಿಕ ಶಾಂತಿ ಭಂಗ ಮತ್ತು ಇತರ ಸಂಬಂಧಿತ ಆರೋಪಗಳಿಗೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಹುಲ್ ರಾಜ್ ಹೇಳಿದ್ದಾರೆ. ವಕೀಲರನ್ನು ಬಂಧಿಸಿದ ಆರೋಪ ಹೊತ್ತಿದ್ದ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಮೋಹನ್‌ಲಾಲ್‌ಗಂಜ್ ಪೊಲೀಸ್ ಠಾಣೆಯಿಂದ ಗೋಮತಿ ನಗರಕ್ಕೆ ವರ್ಗಾಯಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ವಿವಾದ.. ಮಥುರಾ ಶಾಹಿ ಸಂಬಂಧಿತ ಸಮಗ್ರ ವರದಿ ತಯಾರಿಕೆ ಪ್ರಕ್ರಿಯೆ ಇಂದಿನಿಂದ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.