ETV Bharat / bharat

ಕಾರು ಮಿನಿ ಟ್ರಕ್ ಮುಖಾಮುಖಿ ಡಿಕ್ಕಿ: ಆರು ಮಂದಿ ಸಾವು, ನಾಲ್ವರಿಗೆ ಗಾಯ

author img

By

Published : Mar 10, 2022, 8:01 AM IST

ಕಾರೊಂದು ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮೈನ್‌ಪುರಿ - ಇಟಾವಾದ ಹೆದ್ದಾರಿಯ ಸೆಫಾಯಿ ಪೊಲೀಸ್ ವೃತ್ತದ ಬಳಿ ನಡೆದಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಂತ್ವನ ಹೇಳಿದ್ದಾರೆ.

6-killed-4-injured-in-road-mishap-in-ups-etawah
ಕಾರು ಮಿನಿ ಟ್ರಕ್ ಮುಖಾಮುಖಿ ಡಿಕ್ಕಿ : ಆರು ಮಂದಿ ಸಾವು, ನಾಲ್ವರಿಗೆ ಗಾಯ

ಇಟಾವಾ(ಉತ್ತರಪ್ರದೇಶ): ಕಾರೊಂದು ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮೈನ್‌ಪುರಿ - ಇಟಾವಾದ ಹೆದ್ದಾರಿಯ ಸೆಫಾಯಿ ಪೊಲೀಸ್ ವೃತ್ತದ ಬಳಿ ನಡೆದಿದೆ. ಮೃತರನ್ನು ಮಂಜಿತ್ (27), ಸದಾನ್ (23), ಬ್ರಜ್ಮೋಹನ್( 23), ವಿಶೇಷ್( 25) ಕರಣ್ (29), ಮತ್ತು ವಿಪಿನ್ (24) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸೆಫಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಮೃತರೆಲ್ಲರೂ ಜಸ್ವಂತನಗರ ಪೊಲೀಸ್ ವೃತ್ತದ ನಿವಾಸಿಗಳಾಗಿದ್ದು, ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯ ಫೋಟೋ ತೆಗೆಯಲು ಕಾರಿನಲ್ಲಿ ತೆರಳುತ್ತಿದ್ದರು. ಕಾರಿನ ಟೈರ್ ಸವೆದಿದ್ದರಿಂದ, ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ತಿರದ ಪೊಲೀಸ್ ಠಾಣೆಗಳ ಪೊಲೀಸ್ ಪಡೆಗಳು ಸ್ಥಳಕ್ಕೆ ತಲುಪಿದ್ದು, ಮೃತ ವ್ಯಕ್ತಿಗಳ ಶವಗಳನ್ನು ಆ್ಯಂಬುಲೆನ್ಸ್‌ನಲ್ಲಿ ಸೆಫಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಂತ್ವನ ಹೇಳಿದ್ದಾರೆ.

ಓದಿ : ಕ್ಯಾಂಪ್ಕೋಗೆ 9.71 ಕೋಟಿ ರೂ. ವಂಚನೆ: ಮುಂಬೈನಲ್ಲಿ ಆರೋಪಿ ಬಂಧನ

ಇಟಾವಾ(ಉತ್ತರಪ್ರದೇಶ): ಕಾರೊಂದು ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮೈನ್‌ಪುರಿ - ಇಟಾವಾದ ಹೆದ್ದಾರಿಯ ಸೆಫಾಯಿ ಪೊಲೀಸ್ ವೃತ್ತದ ಬಳಿ ನಡೆದಿದೆ. ಮೃತರನ್ನು ಮಂಜಿತ್ (27), ಸದಾನ್ (23), ಬ್ರಜ್ಮೋಹನ್( 23), ವಿಶೇಷ್( 25) ಕರಣ್ (29), ಮತ್ತು ವಿಪಿನ್ (24) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸೆಫಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಮೃತರೆಲ್ಲರೂ ಜಸ್ವಂತನಗರ ಪೊಲೀಸ್ ವೃತ್ತದ ನಿವಾಸಿಗಳಾಗಿದ್ದು, ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯ ಫೋಟೋ ತೆಗೆಯಲು ಕಾರಿನಲ್ಲಿ ತೆರಳುತ್ತಿದ್ದರು. ಕಾರಿನ ಟೈರ್ ಸವೆದಿದ್ದರಿಂದ, ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ತಿರದ ಪೊಲೀಸ್ ಠಾಣೆಗಳ ಪೊಲೀಸ್ ಪಡೆಗಳು ಸ್ಥಳಕ್ಕೆ ತಲುಪಿದ್ದು, ಮೃತ ವ್ಯಕ್ತಿಗಳ ಶವಗಳನ್ನು ಆ್ಯಂಬುಲೆನ್ಸ್‌ನಲ್ಲಿ ಸೆಫಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಂತ್ವನ ಹೇಳಿದ್ದಾರೆ.

ಓದಿ : ಕ್ಯಾಂಪ್ಕೋಗೆ 9.71 ಕೋಟಿ ರೂ. ವಂಚನೆ: ಮುಂಬೈನಲ್ಲಿ ಆರೋಪಿ ಬಂಧನ

For All Latest Updates

TAGGED:

6 killed
ETV Bharat Logo

Copyright © 2024 Ushodaya Enterprises Pvt. Ltd., All Rights Reserved.