ETV Bharat / bharat

ಗುಜರಾತ್​ನಲ್ಲಿ ತೌಕ್ತೆ ಅಬ್ಬರಕ್ಕೆ ಇದುವರೆಗೆ 45 ಮಂದಿ ಬಲಿ

author img

By

Published : May 19, 2021, 1:19 PM IST

Updated : May 19, 2021, 1:28 PM IST

ಕೇರಳದ ಮೂಲಕ ಪ್ರವೇಶಿಸಿದ ತೌಕ್ತೆ ಚಂಡಮಾರುತ ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ತೀವ್ರ ಹಾನಿಯುಂಟು ಮಾಡಿದ ಬಳಿಕ ಇದೀಗ ಗುಜರಾತ್​ನಲ್ಲಿ ಅಬ್ಬರಿಸಿದೆ.

Tauktae Cyclone in Gujarat
ಗುಜರಾತ್ ಚಂಡಮಾರುತ

ಅಹಮದಾಬಾದ್: ಕರ್ನಾಟಕ, ಕೇರಳದ ಕರಾವಳಿಗಳಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತ ಗುಜರಾತಿಗೆ ತಲುಪಿದ್ದು, ಸುಮಾರು 45 ಜನರನ್ನು ಬಲಿ ಪಡೆದಿದೆ.

ಅಮ್ರೇಲಿ ನಗರವೊಂದಲ್ಲೇ ವಿವಿಧ ಕಾರಣಗಳಿಂದ 15 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಐದು ಮಂದಿ ಭಾವ್​ನಗರ್ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಚಂಡಮಾರುತದಿಂದ ಎರಡು ಪ್ರಮುಖ ಸೋಲಾರ್ ವಿದ್ಯುತ್ ಸ್ಥಾವರಗಳಿಗೆ ಹಾನಿಯಾಗಿದೆ. ಹಾನಿಯಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಗಂಟೆಗೆ 165 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ ಸೋಮವಾರ ರಾತ್ರಿ ದಿಯು ಮತ್ತು ಉನಾ ಕಡಲ ತೀರಗಳಿಗೆ ಅಪ್ಪಳಿಸಿದ್ದು, ಬಳಿಕ ಸೌರಾಷ್ಟ್ರ ಜಿಲ್ಲೆಯಲ್ಲಿ ಭಾರೀ ಹಾನಿಯುಂಟು ಮಾಡಿದೆ.

ಅಹಮದಾಬಾದ್: ಕರ್ನಾಟಕ, ಕೇರಳದ ಕರಾವಳಿಗಳಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತ ಗುಜರಾತಿಗೆ ತಲುಪಿದ್ದು, ಸುಮಾರು 45 ಜನರನ್ನು ಬಲಿ ಪಡೆದಿದೆ.

ಅಮ್ರೇಲಿ ನಗರವೊಂದಲ್ಲೇ ವಿವಿಧ ಕಾರಣಗಳಿಂದ 15 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಐದು ಮಂದಿ ಭಾವ್​ನಗರ್ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಚಂಡಮಾರುತದಿಂದ ಎರಡು ಪ್ರಮುಖ ಸೋಲಾರ್ ವಿದ್ಯುತ್ ಸ್ಥಾವರಗಳಿಗೆ ಹಾನಿಯಾಗಿದೆ. ಹಾನಿಯಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಗಂಟೆಗೆ 165 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ ಸೋಮವಾರ ರಾತ್ರಿ ದಿಯು ಮತ್ತು ಉನಾ ಕಡಲ ತೀರಗಳಿಗೆ ಅಪ್ಪಳಿಸಿದ್ದು, ಬಳಿಕ ಸೌರಾಷ್ಟ್ರ ಜಿಲ್ಲೆಯಲ್ಲಿ ಭಾರೀ ಹಾನಿಯುಂಟು ಮಾಡಿದೆ.

Last Updated : May 19, 2021, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.