ರಾಯಗಢ( ಮಹಾರಾಷ್ಟ್ರ): ಉರಾನ್ ತಾಲೂಕಿನ ಕಾರಂಜಾ ದ್ವೀಪದಲ್ಲಿರುವ ನೌಕಾಪಡೆಯ ಬೇಸ್ ಕ್ಯಾಂಪ್ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ವಿಶಾಲ್ ಮಹೇಶಕುಮಾರ್ ಎಂಬ ಅಧಿಕಾರಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಆಗ್ರಹ ಅವರ ಕುಟುಂಬದಿಂದ ವ್ಯಕ್ತವಾಗಿದೆ.
ನ.3 ರಂದು ನೌಕಾಪಡೆಯ ಬೇಸ್ ಕ್ಯಾಂಪ್ನಿಂದ ಉರಾನ್ ನಗರದ ಈಜುಕೊಳಕ್ಕೆ ಬಂದಿದ್ದ 22 ವರ್ಷದ ವಿಶಾಲ್ ಮಹೇಶ್ ಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಆದರೆ ನೌಕಾಪಡೆಯಿಂದ ಈ ಬಗ್ಗೆ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ವಿಶಾಲ್ ಮಹೇಶ್ ಕುಮಾರ್ ಕುಟುಂಬದವರು ಹೇಳುತ್ತಿದ್ದಾರೆ.
ವಿಶಾಲ್ ನಾಪತ್ತೆ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ. ಇಡೀ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕುಟುಂಬದವರು ಒತ್ತಾಯಿಸಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ 22 ವರ್ಷದ ವಿಶಾಲ್ ನವೆಂಬರ್ 3 ರಂದು ನೇವಿ ಬೇಸ್ ಕ್ಯಾಂಪ್ನಿಂದ ಉರಾನ್ ನಗರದ ಈಜುಕೊಳಕ್ಕೆ ಈಜಲು ಬಂದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ನೌಕಾಪಡೆ ಸರಿಯಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ ಎನ್ನುವುದು ವಿಶಾಲ್ ಪೋಷಕರ ಆರೋಪವಾಗಿದೆ.
ಇನ್ನು ನೌಕಾಪಡೆಯಿಂದ ಕಾಣೆಯಾದ ದೂರು ದಾಖಲಾಗಿಲ್ಲ ಎನ್ನಲಾಗುತ್ತಿದೆ. ಈಜುಕೊಳದಲ್ಲಿ ವಿಶಾಲ್ ಅವರ ಮೋಟಾರ್ ಸೈಕಲ್ ಅನ್ನು ನೌಕಾಪಡೆ ತೆಗೆದುಕೊಂಡು ಹೋಗಿದ್ದು ಏಕೆ ಎಂದು ಪ್ರಶ್ನಿಸುತ್ತಿರುವ ವಿಶಾಲ್ ಕುಟುಂಬಸ್ಥರು, ವಿಶಾಲ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಕೆ ಏಕೆ ಎಂದು ಕೇಳುತ್ತಿದ್ದಾರೆ.
ಆತ್ಮಾಹುತಿ ಎಚ್ಚರಿಕೆ: ವಿಶಾಲ್ ನಾಪತ್ತೆಯಾಗಿ ನಾಲ್ಕು ದಿನಗಳು ಕಳೆದಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ವಿಶಾಲ್ ವಿಳಾಸ ಪತ್ತೆ ಮಾಡಿಕೊಡಿ ಎಂದು ಪಾಲಕರು ಆಗ್ರಹಿಸುತ್ತಿದ್ದಾರೆ. ವಿಶಾಲ್ ಬಗ್ಗೆ ಮಾಹಿತಿ ಸಿಗದಿದ್ದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಇದೇ ವೇಳೆ ಪೋಷಕರು ಎಚ್ಚರಿಕೆ ಕೂಡಾ ನೀಡಿದ್ದಾರೆ.
ಇದನ್ನು ಓದಿ: ನಪುಂಸಕಳೆಂದು ಟೀಕೆ, ಮಗುವಾಗಿದ್ದರೂ ಲಿಂಗ ಪರೀಕ್ಷೆ ಮಾಡಿಸಿದ ಪತಿ ವಿರುದ್ಧ ಪತ್ನಿ ದೂರು