ETV Bharat / bharat

ಶಾಲಾ - ಕಾಲೇಜ್​ ಫೀಸ್​ನಲ್ಲಿ ಶೇ.15ರಷ್ಟು ಕಡಿತ.. ಈ ಸರ್ಕಾರದಿಂದ ಮಹತ್ವದ ಆದೇಶ - ಮಹಾರಾಷ್ಟ್ರ ಸರ್ಕಾರ

ಕೋವಿಡ್​ ಸಂಕಷ್ಟ ಕಾಲದಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಖಾಸಗಿ ಶಾಲೆಗಳಲ್ಲಿ ಶೇ. 15ರಷ್ಟು ಫೀಸ್​ ರಿಯಾಯತಿ ನೀಡಿ ಆದೇಶ ಹೊರಡಿಸಿದೆ.

maharashtra private schools
maharashtra private schools
author img

By

Published : Aug 12, 2021, 9:49 PM IST

ಮುಂಬೈ(ಮಹಾರಾಷ್ಟ್ರ): ಕೋವಿಡ್​​ ಸಂಕಷ್ಟದಿಂದ ಜನಸಾಮಾನ್ಯ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಸರಿಯಾಗಿ ವ್ಯಾಪಾರ ಹಾಗೂ ಕೆಲಸವಿಲ್ಲದೇ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಶಾಲಾ-ಕಾಲೇಜ್​ ಫೀಸ್​ನಲ್ಲಿ ಶೇ. 15ರಷ್ಟು ಕಡಿತಗೊಳಿಸಿ ಮಹತ್ವದ ಆದೇಶ ಜಾರಿಗೊಳಿಸಲಾಗಿದ್ದು, ಪ್ರಸಕ್ತ ಸಾಲಿನ ಶ್ರೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಗೊಳ್ಳಲಿದೆ. ಒಂದು ವೇಳೆ ವಿದ್ಯಾರ್ಥಿಗಳು ಈಗಾಗಲೇ ಫೀಸ್​​ ಕಟ್ಟಿದ್ದರೇ, ಮುಂದಿನ ತಿಂಗಳು ಆಡಳಿತ ವಿಭಾಗ ಹಣ ವಾಪಸ್​ ಮಾಡಬೇಕು. ಇಲ್ಲವೇ ಮುಂದಿನ ವರ್ಷ ಹಣ ಪಾವತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇ. 15ರಷ್ಟು ರಿಯಾಯತಿ ನೀಡಬೇಕು ಎಂದು ತಿಳಿಸಿದೆ.

ಇದೇ ವಿಚಾರವಾಗಿ ಮಾತನಾಡಿರುವ ರಾಜ್ಯ ಶಿಕ್ಷಣ ಸಚಿವ ವರ್ಷಾ ಗಾಯ್ಕವಾಡ, ಪ್ರಸಕ್ತ ಶ್ರೈಕ್ಷಣಿಕ ವರ್ಷದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪೋಷಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ವಿವಿಧ ರಾಜ್ಯಗಳಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿರುವ ಕಾರಣ ಶಾಲಾ - ಕಾಲೇಜ್​ಗಳು ಪುನಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣ ಕೇಂದ್ರಗಳತ್ತ ದಾಪುಗಾಲು ಹಾಕುತ್ತಿದ್ದಾರೆ.

ಮಹಾರಾಷ್ಟ್ರದ ಖಾಸಗಿ ಶಾಲೆಗಳು ಮತ್ತು ಸರ್ಕಾರದ ಅನುದಾನ ರಹಿತ ಶಾಲೆಗಳು ಕೂಡ ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದ್ದು, ಈಗಾಗಲೇ ಪ್ರಕಟಣೆ ಸಹ ಹೊರಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದ್ದ ಕಾರಣ ಆಗಸ್ಟ್​​ 17ರಿಂದ ಶಾಲೆಗಳನ್ನ ಪುನಾರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇದೀಗ ಸೋಂಕು ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಬಿಡಲಾಗಿದೆ.

ಮುಂಬೈ(ಮಹಾರಾಷ್ಟ್ರ): ಕೋವಿಡ್​​ ಸಂಕಷ್ಟದಿಂದ ಜನಸಾಮಾನ್ಯ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಸರಿಯಾಗಿ ವ್ಯಾಪಾರ ಹಾಗೂ ಕೆಲಸವಿಲ್ಲದೇ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಶಾಲಾ-ಕಾಲೇಜ್​ ಫೀಸ್​ನಲ್ಲಿ ಶೇ. 15ರಷ್ಟು ಕಡಿತಗೊಳಿಸಿ ಮಹತ್ವದ ಆದೇಶ ಜಾರಿಗೊಳಿಸಲಾಗಿದ್ದು, ಪ್ರಸಕ್ತ ಸಾಲಿನ ಶ್ರೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಗೊಳ್ಳಲಿದೆ. ಒಂದು ವೇಳೆ ವಿದ್ಯಾರ್ಥಿಗಳು ಈಗಾಗಲೇ ಫೀಸ್​​ ಕಟ್ಟಿದ್ದರೇ, ಮುಂದಿನ ತಿಂಗಳು ಆಡಳಿತ ವಿಭಾಗ ಹಣ ವಾಪಸ್​ ಮಾಡಬೇಕು. ಇಲ್ಲವೇ ಮುಂದಿನ ವರ್ಷ ಹಣ ಪಾವತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇ. 15ರಷ್ಟು ರಿಯಾಯತಿ ನೀಡಬೇಕು ಎಂದು ತಿಳಿಸಿದೆ.

ಇದೇ ವಿಚಾರವಾಗಿ ಮಾತನಾಡಿರುವ ರಾಜ್ಯ ಶಿಕ್ಷಣ ಸಚಿವ ವರ್ಷಾ ಗಾಯ್ಕವಾಡ, ಪ್ರಸಕ್ತ ಶ್ರೈಕ್ಷಣಿಕ ವರ್ಷದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪೋಷಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ವಿವಿಧ ರಾಜ್ಯಗಳಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿರುವ ಕಾರಣ ಶಾಲಾ - ಕಾಲೇಜ್​ಗಳು ಪುನಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣ ಕೇಂದ್ರಗಳತ್ತ ದಾಪುಗಾಲು ಹಾಕುತ್ತಿದ್ದಾರೆ.

ಮಹಾರಾಷ್ಟ್ರದ ಖಾಸಗಿ ಶಾಲೆಗಳು ಮತ್ತು ಸರ್ಕಾರದ ಅನುದಾನ ರಹಿತ ಶಾಲೆಗಳು ಕೂಡ ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದ್ದು, ಈಗಾಗಲೇ ಪ್ರಕಟಣೆ ಸಹ ಹೊರಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದ್ದ ಕಾರಣ ಆಗಸ್ಟ್​​ 17ರಿಂದ ಶಾಲೆಗಳನ್ನ ಪುನಾರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇದೀಗ ಸೋಂಕು ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಬಿಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.