ETV Bharat / bharat

ಕೃಷ್ಣಾ ನದಿಯಲ್ಲಿ ದಿಢೀರ್ ಪ್ರವಾಹ..​​ಮರಳು ತರಲು ಹೊರಟಿದ್ದ 132 ಲಾರಿಗಳು ನೀರಲ್ಲೇ ಲಾಕ್ - Video​

author img

By

Published : Aug 14, 2021, 2:09 PM IST

Updated : Aug 14, 2021, 2:15 PM IST

ಮರಳು ದಾಸ್ತಾನು ಪ್ರದೇಶಕ್ಕೆ ಮರಳಿಗಾಗಿ ತೆರಳಿದ್ದ ಸುಮಾರು ನೂರಕ್ಕೂ ಹೆಚ್ಚು ಲಾರಿಗಳು ಕೃಷ್ಣಾ ನದಿಯ ಪ್ರವಾಹದಲ್ಲಿ ಸಿಲುಕಿವೆ. ಆಂಧ್ರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

132-lorries-stranded-in-the-flood-in-krishna-district
ಮರಳಿಗಾಗಿ ಹೊರಟು ಕೃಷ್ಣಾ ನದಿಯಲ್ಲಿ ಸಿಕ್ಕಿಕೊಂಡ 132 ಲಾರಿಗಳು

ಕೃಷ್ಣಾ(ಆಂಧ್ರಪ್ರದೇಶ): ಮರಳಿಗಾಗಿ ಹೊರಟಿದ್ದ ಸುಮಾರು 132 ಮರಳಿನ ಲಾರಿಗಳು ಕೃಷ್ಣಾ ನದಿಯ ನೀರಲ್ಲಿ ಸಿಲುಕಿದ್ದು, ಲಾರಿ ಚಾಲಕರು ಮತ್ತು ಕಾರ್ಮಿಕರನ್ನು ಹಡಗುಗಳ ಮೂಲಕ ರಕ್ಷಿಸುವ ಕಾರ್ಯ ನಡೆದಿದೆ.

ಕೃಷ್ಣಾ ಜಿಲ್ಲೆಯ ಕಂಚಿಕಚರ್ಲ ಮಂಡಲಂನಲ್ಲಿರುವ ಮರಳು ದಾಸ್ತಾನು ಪ್ರದೇಶಕ್ಕೆ ಮರಳಿಗಾಗಿ ಸುಮಾರು ನೂರಕ್ಕೂ ಹೆಚ್ಚು ಲಾರಿಗಳು ತೆರಳಿದ್ದವು. ಹಿಂದಿರುಗಿ ಬರುವ ವೇಳೆ ಕೃಷ್ಣಾ ನದಿಯ ನೀರಿನ ಮಟ್ಟ ಏಕಾಏಕಿ ಹೆಚ್ಚಾಗಿದೆ. ಈ ಕಾರಣದಿಂದ ವಾಪಸ್ ಬರಬೇಕಿದ್ದ ಲಾರಿಗಳು ಅಲ್ಲಿಯೇ ಸಿಲುಕಿಕೊಂಡಿವೆ.

ಕೃಷ್ಣಾ ನದಿಯಲ್ಲಿ ಸಿಲುಕಿದ ಲಾರಿಗಳ ದೃಶ್ಯ

ನೀರಿನ ಮಟ್ಟ ಕಡಿಮೆಯಾಗುವವರೆಗೆ ಲಾರಿಗಳು ವಾಪಸ್ ಬರದ ಸ್ಥಿತಿಯಲ್ಲಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಲಾರಿಗಳ ಚಾಲಕರು ಮತ್ತು ಕೂಲಿಯಾಳುಗಳನ್ನು ಬೋಟ್​ಗಳ ಮೂಲಕ ದಡಕ್ಕೆ ತಲುಪಿಸಿದ್ದಾರೆ.

ಪ್ರಸ್ತುತ ಕೃಷ್ಣಾನದಿಗೆ ಪುಲಿಚಿಂತಲ ಡ್ಯಾಮ್​​ನಿಂದ 75 ಸಾವಿರ ಕ್ಯೂಸೆಕ್​​, ಮುನ್ನೇರು, ಕಟ್ಟಲೇರು, ವೈರಾಲಾ ಡ್ಯಾಮ್​ಗಳಿಂದ 5 ಸಾವಿರ ಕ್ಯೂಸೆಕ್​ ನೀರು ಸೇರಿ ಒಟ್ಟು 80 ಕ್ಯೂಸೆಕ್​ ನೀರು ಹರಿದು ಬರುತ್ತಿದೆ.

ಪುಲಿಚಿಂತಲ ಡ್ಯಾಮ್​ನಿಂದ ಬರುವ ನೀರನ್ನು ನಿಲ್ಲಿಸಿ, ಪ್ರಕಾಶಂ ಬ್ಯಾರೇಜ್​​ನ ಗೇಟುಗಳನ್ನು ತೆರೆದರೆ ಮಾತ್ರ ನೀರಿನ ಪ್ರಮಾಣ ಕಡಿಮೆಯಾಗಿ ಲಾರಿಗಳು ಹೊರಗೆ ಬರಲು ಸಾಧ್ಯವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ: ರಾಜ್ಯ ರಾಜಧಾನಿಯಲ್ಲಿ ಬಿಗಿ ಭದ್ರತೆ - ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ

ಕೃಷ್ಣಾ(ಆಂಧ್ರಪ್ರದೇಶ): ಮರಳಿಗಾಗಿ ಹೊರಟಿದ್ದ ಸುಮಾರು 132 ಮರಳಿನ ಲಾರಿಗಳು ಕೃಷ್ಣಾ ನದಿಯ ನೀರಲ್ಲಿ ಸಿಲುಕಿದ್ದು, ಲಾರಿ ಚಾಲಕರು ಮತ್ತು ಕಾರ್ಮಿಕರನ್ನು ಹಡಗುಗಳ ಮೂಲಕ ರಕ್ಷಿಸುವ ಕಾರ್ಯ ನಡೆದಿದೆ.

ಕೃಷ್ಣಾ ಜಿಲ್ಲೆಯ ಕಂಚಿಕಚರ್ಲ ಮಂಡಲಂನಲ್ಲಿರುವ ಮರಳು ದಾಸ್ತಾನು ಪ್ರದೇಶಕ್ಕೆ ಮರಳಿಗಾಗಿ ಸುಮಾರು ನೂರಕ್ಕೂ ಹೆಚ್ಚು ಲಾರಿಗಳು ತೆರಳಿದ್ದವು. ಹಿಂದಿರುಗಿ ಬರುವ ವೇಳೆ ಕೃಷ್ಣಾ ನದಿಯ ನೀರಿನ ಮಟ್ಟ ಏಕಾಏಕಿ ಹೆಚ್ಚಾಗಿದೆ. ಈ ಕಾರಣದಿಂದ ವಾಪಸ್ ಬರಬೇಕಿದ್ದ ಲಾರಿಗಳು ಅಲ್ಲಿಯೇ ಸಿಲುಕಿಕೊಂಡಿವೆ.

ಕೃಷ್ಣಾ ನದಿಯಲ್ಲಿ ಸಿಲುಕಿದ ಲಾರಿಗಳ ದೃಶ್ಯ

ನೀರಿನ ಮಟ್ಟ ಕಡಿಮೆಯಾಗುವವರೆಗೆ ಲಾರಿಗಳು ವಾಪಸ್ ಬರದ ಸ್ಥಿತಿಯಲ್ಲಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಲಾರಿಗಳ ಚಾಲಕರು ಮತ್ತು ಕೂಲಿಯಾಳುಗಳನ್ನು ಬೋಟ್​ಗಳ ಮೂಲಕ ದಡಕ್ಕೆ ತಲುಪಿಸಿದ್ದಾರೆ.

ಪ್ರಸ್ತುತ ಕೃಷ್ಣಾನದಿಗೆ ಪುಲಿಚಿಂತಲ ಡ್ಯಾಮ್​​ನಿಂದ 75 ಸಾವಿರ ಕ್ಯೂಸೆಕ್​​, ಮುನ್ನೇರು, ಕಟ್ಟಲೇರು, ವೈರಾಲಾ ಡ್ಯಾಮ್​ಗಳಿಂದ 5 ಸಾವಿರ ಕ್ಯೂಸೆಕ್​ ನೀರು ಸೇರಿ ಒಟ್ಟು 80 ಕ್ಯೂಸೆಕ್​ ನೀರು ಹರಿದು ಬರುತ್ತಿದೆ.

ಪುಲಿಚಿಂತಲ ಡ್ಯಾಮ್​ನಿಂದ ಬರುವ ನೀರನ್ನು ನಿಲ್ಲಿಸಿ, ಪ್ರಕಾಶಂ ಬ್ಯಾರೇಜ್​​ನ ಗೇಟುಗಳನ್ನು ತೆರೆದರೆ ಮಾತ್ರ ನೀರಿನ ಪ್ರಮಾಣ ಕಡಿಮೆಯಾಗಿ ಲಾರಿಗಳು ಹೊರಗೆ ಬರಲು ಸಾಧ್ಯವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ: ರಾಜ್ಯ ರಾಜಧಾನಿಯಲ್ಲಿ ಬಿಗಿ ಭದ್ರತೆ - ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ

Last Updated : Aug 14, 2021, 2:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.