ETV Bharat / bharat

ಒಂದೇ ರಾತ್ರಿಯಲ್ಲಿ 5 ಗ್ರಾಮಗಳಿಗೆ ನುಗ್ಗಿ 12 ಜನರ ಮೇಲೆ ದಾಳಿ ನಡೆಸಿದ ಪಿಟ್​ಬುಲ್ ಶ್ವಾನ.. - ಈಟಿವಿ ಭಾರತ ಕನ್ನಡ

ಪಿಟ್​ಬುಲ್​ ನಾಯಿಯೊಂದು ತಡರಾತ್ರಿ 5 ಗ್ರಾಮಗಳಿಗೆ ನುಗ್ಗಿ 12 ಜನರನ್ನು ಗಾಯಗೊಳಿಸಿರುವ ಘಟನೆ ಪಂಜಾಬ್​ನ ಗುರುದಾಸ್​ಪುರದಲ್ಲಿ ನಡೆದಿದೆ.

PB_GSP_01_Pitbul
ಪಿಟ್​ಬುಲ್​ ದಾಳಿಯಿಂದ ಗಾಯಗೊಂಡವರು
author img

By

Published : Oct 1, 2022, 4:19 PM IST

ಗುರುದಾಸ್​ಪುರ್​(ಪಂಜಾಬ್​): ಪಿಟ್​ಬುಲ್​ ನಾಯಿಯೊಂದು 12 ಜನರ ಮೇಲೆ ದಾಳಿ ನಡೆಸಿರುವ ಘಟನೆ ಜಿಲ್ಲೆಯ ದೀನಾನಗರ ಎಂಬ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ.

ಕಳೆದ ರಾತ್ರಿ ದೀನಾನಗರದ ಟಂಗೋಶಾ ಎಂಬ ಪ್ರದೇಶದಿಂದ ಚೌಹಣ ಹಳ್ಳಿಯ ವರೆಗೂ ಒಟ್ಟು 5 ಗ್ರಾಮಗಳಲ್ಲಿನ 12 ಜನರ ಮೇಲೆ ಪಿಟ್​ಬುಲ್​ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಮೊದಲಿಗೆ ಟಂಗೋಶಾ ಗ್ರಾಮದ ಇಬ್ಬರು ಕಾರ್ಮಿಕರ ಮೇಲೆ ದಾಳಿ ನಡೆಸಿದ ನಾಯಿ ಬಳಿಕ ಅದೇ ಗ್ರಾಮದ 60 ವರ್ಷದ ದಿಲೀಪ್​ ಕುಮಾರ್​ ಎಂಬುವವರ ಮೇಲೆ ದಾಳಿ ನಡೆಸಿದೆ.

ಇದೇ ವೇಳೆ, ಅಲ್ಲಿದ್ದಂತಹ ಬೀದಿ ನಾಯಿಯೊಂದು ಪಿಟ್​ಬುಲ್​ ಜತೆ ಕಾದಾಟಕ್ಕಿಳಿದಿದ್ದು, ದಿಲೀಪ್​ ಕುಮಾರ್​ ನಾಯಿಯಿಂದ ತಪ್ಪಿಸಿಕೊಂಡು ಮನೆಕಡೆ ಓಡಲು ಪ್ರಾರಂಭಿಸಿದ್ದರಾದರೂ ಅವರನ್ನು ಬೀಡದೇ ನಿರಂತರ ದಾಳಿ ನಡೆಸಿದ್ದು, ಅವರ ತಲೆ ಭಾಗಕ್ಕೆ ಗಂಭೀರ ಗಾಯ ಮಾಡಿದೆ. ಬಳಿಕ ಹೇಗೋ ಅವರ ಸಹೋದರ ಅದನ್ನು ಬೆಧರಿಸಿ ದಿಲೀಪ್​ ಅವರನ್ನ ರಕ್ಷಣೆ ಮಾಡಿದ್ದಾರೆ.

ಇನ್ನು ಅಲ್ಲಿಂದ ಕಾಲ್ಕಿತ್ತ ನಾಯಿ ಅದೇ ಗ್ರಾಮದ ನಿವೃತ ಸೇನಾಧಿಕಾರಿ ಕ್ಯಾಪ್ಟನ್ ಶಕ್ತಿ ಸಿಂಗ್ ಎಂಬುವವರ ಮೇಲೆ ದಾಳಿ ಮಾಡಿ ಅವರ ಕೈಗೆ ತೀವ್ರವಾಗಿ ಗಾಯಗೊಳಿಸಿದೆ. ಇನ್ನು ದಾಳಿಗೊಳಗಾದ ಶಕ್ತಿಸಿಂಗ್​ ಜೋರಾಗಿ ಕಿರುಚಾಡಿದ್ದಾರೆ. ಅವರ ಕೂಗಾಟ ಕೇಳಿದ ಗ್ರಾಮದ ಜನರೆಲ್ಲ ಸೇರಿ ಅದನ್ನ ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ. ಇನ್ನು ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನ ಜಿಲ್ಲಾಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಇದನ್ನೂ ಓದಿ: ಹರಿದ್ವಾರ: ಅರ್ಧ ಗಂಟೆಯಲ್ಲಿ 25 ಜನರಿಗೆ ಕಚ್ಚಿದ ನಾಯಿ, ಹೊಡೆದು ಕೊಂದ ಜನರು

ಗುರುದಾಸ್​ಪುರ್​(ಪಂಜಾಬ್​): ಪಿಟ್​ಬುಲ್​ ನಾಯಿಯೊಂದು 12 ಜನರ ಮೇಲೆ ದಾಳಿ ನಡೆಸಿರುವ ಘಟನೆ ಜಿಲ್ಲೆಯ ದೀನಾನಗರ ಎಂಬ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ.

ಕಳೆದ ರಾತ್ರಿ ದೀನಾನಗರದ ಟಂಗೋಶಾ ಎಂಬ ಪ್ರದೇಶದಿಂದ ಚೌಹಣ ಹಳ್ಳಿಯ ವರೆಗೂ ಒಟ್ಟು 5 ಗ್ರಾಮಗಳಲ್ಲಿನ 12 ಜನರ ಮೇಲೆ ಪಿಟ್​ಬುಲ್​ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಮೊದಲಿಗೆ ಟಂಗೋಶಾ ಗ್ರಾಮದ ಇಬ್ಬರು ಕಾರ್ಮಿಕರ ಮೇಲೆ ದಾಳಿ ನಡೆಸಿದ ನಾಯಿ ಬಳಿಕ ಅದೇ ಗ್ರಾಮದ 60 ವರ್ಷದ ದಿಲೀಪ್​ ಕುಮಾರ್​ ಎಂಬುವವರ ಮೇಲೆ ದಾಳಿ ನಡೆಸಿದೆ.

ಇದೇ ವೇಳೆ, ಅಲ್ಲಿದ್ದಂತಹ ಬೀದಿ ನಾಯಿಯೊಂದು ಪಿಟ್​ಬುಲ್​ ಜತೆ ಕಾದಾಟಕ್ಕಿಳಿದಿದ್ದು, ದಿಲೀಪ್​ ಕುಮಾರ್​ ನಾಯಿಯಿಂದ ತಪ್ಪಿಸಿಕೊಂಡು ಮನೆಕಡೆ ಓಡಲು ಪ್ರಾರಂಭಿಸಿದ್ದರಾದರೂ ಅವರನ್ನು ಬೀಡದೇ ನಿರಂತರ ದಾಳಿ ನಡೆಸಿದ್ದು, ಅವರ ತಲೆ ಭಾಗಕ್ಕೆ ಗಂಭೀರ ಗಾಯ ಮಾಡಿದೆ. ಬಳಿಕ ಹೇಗೋ ಅವರ ಸಹೋದರ ಅದನ್ನು ಬೆಧರಿಸಿ ದಿಲೀಪ್​ ಅವರನ್ನ ರಕ್ಷಣೆ ಮಾಡಿದ್ದಾರೆ.

ಇನ್ನು ಅಲ್ಲಿಂದ ಕಾಲ್ಕಿತ್ತ ನಾಯಿ ಅದೇ ಗ್ರಾಮದ ನಿವೃತ ಸೇನಾಧಿಕಾರಿ ಕ್ಯಾಪ್ಟನ್ ಶಕ್ತಿ ಸಿಂಗ್ ಎಂಬುವವರ ಮೇಲೆ ದಾಳಿ ಮಾಡಿ ಅವರ ಕೈಗೆ ತೀವ್ರವಾಗಿ ಗಾಯಗೊಳಿಸಿದೆ. ಇನ್ನು ದಾಳಿಗೊಳಗಾದ ಶಕ್ತಿಸಿಂಗ್​ ಜೋರಾಗಿ ಕಿರುಚಾಡಿದ್ದಾರೆ. ಅವರ ಕೂಗಾಟ ಕೇಳಿದ ಗ್ರಾಮದ ಜನರೆಲ್ಲ ಸೇರಿ ಅದನ್ನ ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ. ಇನ್ನು ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನ ಜಿಲ್ಲಾಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಇದನ್ನೂ ಓದಿ: ಹರಿದ್ವಾರ: ಅರ್ಧ ಗಂಟೆಯಲ್ಲಿ 25 ಜನರಿಗೆ ಕಚ್ಚಿದ ನಾಯಿ, ಹೊಡೆದು ಕೊಂದ ಜನರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.