ಜಮ್ಮು-ಕಾಶ್ಮೀರ : ಗಡಿಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನಲ್ಲಿ ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರಗಳ ಸಮೇತ ಉಗ್ರ ಸಂಘಟನೆಯ 10 ಜನರನ್ನು ಬಂಧಿಸಿರುವುದಾಗಿ ಹೇಳಿದೆ.
ಭೂಗತ 10 ಉಗ್ರರನ್ನು ಬಂಧಿಸಿರುವ ಪೊಲೀಸರು, ಅವರಿಂದ ಹತ್ತು ಗ್ರೆನೇಡ್, ಹತ್ತು ಬುಲೆಟ್ ಮ್ಯಾಗ್ಸೈನ್ಗಳು, 21 ಲಕ್ಷ ರೂ. ನಗದು ಮತ್ತು ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಹತ್ತು ಉಗ್ರರ ಪೈಕಿ ಮೂವರ ಗುರುತು ಪತ್ತೆ ಹಚ್ಚಲಾಗಿದೆ. ಕುಪ್ವಾರದ ಬಾದ್ಶಾ ಖಾನ್ ಅವರ ಪುತ್ರ ಶರಫತ್ ಖಾನ್, ಲೋಲಾಬ್ ಪ್ರದೇಶದ ಮೊಹಮ್ಮದ್ ಶಾ ಪುತ್ರ ಸಜ್ಜಾದ್ ಶಾ ಮತ್ತು ಟ್ಯಾಂಗ್ಮಾರ್ಗ್ನ ವಾಲಿ ಮೊಹಮ್ಮದ್ ರಾಥರ್ ಮಗ ಶಾಹಿದ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಉರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.