ETV Bharat / bharat

1ರೂ.ಗೆ ಲೀಟರ್ ಪೆಟ್ರೋಲ್.. ಆದಿತ್ಯ ಠಾಕ್ರೆ ಬರ್ತಡೇ ಗಿಫ್ಟ್​!

author img

By

Published : Jun 13, 2021, 6:31 PM IST

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಪುತ್ರ ವಾಹನ ಸವಾರರಿಗೆ ಇಂದು ಬಂಪರ್​ ಆಫರ್​ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ 1ರೂ. ಗೆ ಲೀಟರ್​ ಪೆಟ್ರೋಲ್​ ಕೊಡುತ್ತಿದ್ದಾರೆ. ಹೀಗಾಗಿ ಎರಡು ತಾಸು ಸರತಿಯಲ್ಲಿ ಕಾಯ್ದರೂ ಅಡ್ಡಿಯಿಲ್ಲ, 1 ರೂಪಾಯಿಗೆ ಪೆಟ್ರೋಲ್ ಸಿಗುತ್ತಲ್ಲ ಎಂಬ ಆಸೆಯಿಂದ ಜನತೆ ಪೆಟ್ರೋಲ್ ಪಂಪ್ ಮುಂದೆ ಕ್ಯೂ ನಿಂತಿರುವುದು ಕಂಡುಬಂದಿದೆ.

1 liter petrol for 1 rupee; Aditya Thackeray Birthday Gift!
1 ರೂ.ಗೆ ಲೀಟರ್ ಪೆಟ್ರೋಲ್; ಆದಿತ್ಯ ಠಾಕ್ರೆ ಬರ್ತಡೇ ಗಿಫ್ಟ್​!

ಥಾಣೆ(ಮಹಾರಾಷ್ಟ್ರ): ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಜನ್ಮದಿನಾಚರಣೆಯ ನಿಮಿತ್ತ ಇಂದು ಡೊಂಬಿವಲಿ ಯುವ ಸೇನೆ ವತಿಯಿಂದ ಉಸ್ಮಾ ಪೆಟ್ರೋಲ್ ಪಂಪ್​ನಲ್ಲಿ 1 ರೂಪಾಯಿಗೆ 1 ಲೀಟರ್​ ಪೆಟ್ರೋಲ್ ನೀಡಲಾಯಿತು. 1 ರೂಪಾಯಿಗೆ ಒಂದು ಲೀಟರ್​ ಪೆಟ್ರೋಲ್ ಸಿಗುತ್ತಿರುವುದು ಗೊತ್ತಾಗುತ್ತಿದ್ದಂತೆ ಬೆಳಗ್ಗೆಯಿಂದಲೇ ಪಂಪ್​ ಎದುರು ಭಾರಿ ಉದ್ದನೆಯ ಕ್ಯೂ ನಿರ್ಮಾಣವಾಗಿದೆ.

102 ರೂಪಾಯಿಗೆ ಒಂದು ಲೀಟರ್​ ಬೆಲೆಯ ಪೆಟ್ರೋಲ್ ಕೇವಲ 1 ರೂಪಾಯಿಗ ಸಿಗುತ್ತಿದೆ ಎಂಬ ವಿಷಯ ಈಗ ಇಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಏಟು ನೀಡುವ ಶಿವಸೇನೆಯ ಕ್ರಮ ಇದು ಎನ್ನಲಾಗ್ತಿದೆ.

people waiting for free petrol
ಪೆಟ್ರೋಲಿಗಾಗಿ ಜನರ ಕ್ಯೂ

ಅಂಬರನಾಥದಲ್ಲಿ 50 ರೂಪಾಯಿಗೆ ಲೀಟರ್​

ಅಂಬರನಾಥ ಪ್ರದೇಶದ ವಿಮ್ಕೊ ನಾಕಾ ಬಳಿಯ ಪೆಟ್ರೋಲ್ ಪಂಪ್​ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ 50 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಲಾಯಿತು.

ಪೆಟ್ರೋಲ್ ಹಾಗೂ ಡೀಸೆಲ್​ಗಳ ದರ ಏರಿಕೆ ಕುರಿತು ಶಿವಸೇನೆಯು ಕೇಂದ್ರ ಸರ್ಕಾರದ ವಿರುದ್ಧ ಆಗಾಗ್ಗೆ ವಾಗ್ದಾಳಿ ನಡೆಸುತ್ತಿದೆ. ಈಗ ಸಿಎಂ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹುಟ್ಟುಹಬ್ಬದ ನೆಪದಲ್ಲಿ 1 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡುವ ಮೂಲಕ ಶಿವಸೇನೆ ಬಿಜೆಪಿಗೆ ಟಾಂಗ್ ನೀಡುತ್ತಿದೆ.

ಎರಡು ತಾಸು ಸರತಿಯಲ್ಲಿ ಕಾಯ್ದರೂ ಅಡ್ಡಿಯಿಲ್ಲ, 1 ರೂಪಾಯಿಗೆ ಪೆಟ್ರೋಲ್ ಸಿಗುತ್ತಲ್ಲ ಎಂಬ ಆಸೆಯಿಂದ ಜನತೆ ಪೆಟ್ರೋಲ್ ಪಂಪ್ ಮುಂದೆ ಕ್ಯೂ ಹಚ್ಚಿ ನಿಂತಿರುವುದು ಕಂಡುಬಂದಿದೆ.

ಥಾಣೆ(ಮಹಾರಾಷ್ಟ್ರ): ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಜನ್ಮದಿನಾಚರಣೆಯ ನಿಮಿತ್ತ ಇಂದು ಡೊಂಬಿವಲಿ ಯುವ ಸೇನೆ ವತಿಯಿಂದ ಉಸ್ಮಾ ಪೆಟ್ರೋಲ್ ಪಂಪ್​ನಲ್ಲಿ 1 ರೂಪಾಯಿಗೆ 1 ಲೀಟರ್​ ಪೆಟ್ರೋಲ್ ನೀಡಲಾಯಿತು. 1 ರೂಪಾಯಿಗೆ ಒಂದು ಲೀಟರ್​ ಪೆಟ್ರೋಲ್ ಸಿಗುತ್ತಿರುವುದು ಗೊತ್ತಾಗುತ್ತಿದ್ದಂತೆ ಬೆಳಗ್ಗೆಯಿಂದಲೇ ಪಂಪ್​ ಎದುರು ಭಾರಿ ಉದ್ದನೆಯ ಕ್ಯೂ ನಿರ್ಮಾಣವಾಗಿದೆ.

102 ರೂಪಾಯಿಗೆ ಒಂದು ಲೀಟರ್​ ಬೆಲೆಯ ಪೆಟ್ರೋಲ್ ಕೇವಲ 1 ರೂಪಾಯಿಗ ಸಿಗುತ್ತಿದೆ ಎಂಬ ವಿಷಯ ಈಗ ಇಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಏಟು ನೀಡುವ ಶಿವಸೇನೆಯ ಕ್ರಮ ಇದು ಎನ್ನಲಾಗ್ತಿದೆ.

people waiting for free petrol
ಪೆಟ್ರೋಲಿಗಾಗಿ ಜನರ ಕ್ಯೂ

ಅಂಬರನಾಥದಲ್ಲಿ 50 ರೂಪಾಯಿಗೆ ಲೀಟರ್​

ಅಂಬರನಾಥ ಪ್ರದೇಶದ ವಿಮ್ಕೊ ನಾಕಾ ಬಳಿಯ ಪೆಟ್ರೋಲ್ ಪಂಪ್​ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ 50 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಲಾಯಿತು.

ಪೆಟ್ರೋಲ್ ಹಾಗೂ ಡೀಸೆಲ್​ಗಳ ದರ ಏರಿಕೆ ಕುರಿತು ಶಿವಸೇನೆಯು ಕೇಂದ್ರ ಸರ್ಕಾರದ ವಿರುದ್ಧ ಆಗಾಗ್ಗೆ ವಾಗ್ದಾಳಿ ನಡೆಸುತ್ತಿದೆ. ಈಗ ಸಿಎಂ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹುಟ್ಟುಹಬ್ಬದ ನೆಪದಲ್ಲಿ 1 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡುವ ಮೂಲಕ ಶಿವಸೇನೆ ಬಿಜೆಪಿಗೆ ಟಾಂಗ್ ನೀಡುತ್ತಿದೆ.

ಎರಡು ತಾಸು ಸರತಿಯಲ್ಲಿ ಕಾಯ್ದರೂ ಅಡ್ಡಿಯಿಲ್ಲ, 1 ರೂಪಾಯಿಗೆ ಪೆಟ್ರೋಲ್ ಸಿಗುತ್ತಲ್ಲ ಎಂಬ ಆಸೆಯಿಂದ ಜನತೆ ಪೆಟ್ರೋಲ್ ಪಂಪ್ ಮುಂದೆ ಕ್ಯೂ ಹಚ್ಚಿ ನಿಂತಿರುವುದು ಕಂಡುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.