ಕರ್ನಾಟಕ

karnataka

ವಿಜಯಪುರ: ಕೆರೆಗೆ ಬಿದ್ದ ವಿದ್ಯುತ್ ತಂತಿ, ಮೀನು ಹಿಡಿಯಲು ಹೋಗಿದ್ದ 2 ಬಾಲಕರು ಸಾವು

By ETV Bharat Karnataka Team

Published : Jun 18, 2024, 7:49 PM IST

ಕೆರೆಗೆ ಬಿದ್ದ ವಿದ್ಯುತ್ ತಂತಿ, ಮೀನು ಹಿಡಿಯಲು ಹೋಗಿದ್ದ 2 ಬಾಲಕರು ಸಾವು
ಕೆರೆಗೆ ಬಿದ್ದ ವಿದ್ಯುತ್ ತಂತಿ, ಮೀನು ಹಿಡಿಯಲು ಹೋಗಿದ್ದ 2 ಬಾಲಕರು ಸಾವು (ETV Bharat)

ವಿಜಯಪುರ:ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ನಡೆದಿದೆ. ರೋಹಿತ್​ ಅನೀಲ ಚವ್ಹಾಣ ಹಾಗೂ ವಿಜಯ ಚವ್ಹಾಣ ಮೃತ ಬಾಲಕರು.

ಕರೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ನೀರಿಗಿಳಿದಾಗ ವಿದ್ಯುತ್ ಪ್ರವಹಿಸಿ ಈ ದುರಂತ ಸಂಭವಿಸಿದೆ. ಇಬ್ಬರು ಬಾಲಕರ ಮೃತ ದೇಹಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಬಾಗಲಕೋಟೆ: ಮೀನಿಗೆ ಹಾಕಿದ್ದ ಬಲೆಗೆ ಮೀನುಗಾರ ಬಲಿ; ಮಗಳ ಎದುರಲ್ಲೇ ನೀರಲ್ಲಿ ಮಳುಗಿ ಸಾವು

ABOUT THE AUTHOR

...view details