ಕರ್ನಾಟಕ

karnataka

By ETV Bharat Karnataka Team

Published : Aug 5, 2024, 8:16 PM IST

ETV Bharat / snippets

ತಾವರೆಕೊಪ್ಪ ಹುಲಿ-ಸಿಂಹ ಧಾಮದ 'ಆರ್ಯ' ಇನ್ನಿಲ್ಲ

lion arya
ಆರ್ಯ (ETV Bharat)

ಶಿವಮೊಗ್ಗ:ತಾಲೂಕಿನ ತಾವರೆಕೊಪ್ಪ ಹುಲಿ-ಸಿಂಹ ಧಾಮದ ಸಿಂಹ ಆರ್ಯ ಇಂದು ಮೃತಪಟ್ಟಿದೆ. ಆರ್ಯನಿಗೆ 18 ವರ್ಷ ವಯಸ್ಸಾಗಿತ್ತು. ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿಯೇ ದೀರ್ಘಾವಧಿ ಬದುಕಿದ ಸಿಂಹ ಇದಾಗಿದೆ.

ಬಹು ಅಂಗಾಂಗ ವೈಫಲ್ಯವಾದ ಹಿನ್ನೆಲೆಯಲ್ಲಿ ಸಿಂಹ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಹುಲಿ ಮತ್ತು ಸಿಂಹಧಾಮದ ವೈದ್ಯ ಮುರುಳಿ ಚಿಕಿತ್ಸೆ ನೀಡುತ್ತಿದ್ದರು. ಆರ್ಯನ ಅಂತ್ಯಕ್ರಿಯೆಯನ್ನು ಸಿಂಹಧಾಮದ ಒಳಗಡೆಯೇ ನಡೆಸಲಾಗಿದೆ ಎಂದು ಕಾರ್ಯನಿರ್ವಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ.

ಇದನ್ನೂ ಓದಿ:ಗಾಯಗೊಂಡ ರಾಷ್ಟ್ರೀಯ ಪಕ್ಷಿ ರಕ್ಷಿಸಿದ ಗಂಗಾವತಿ ಯುವಕರು

ABOUT THE AUTHOR

...view details