ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ಜಿ.ಎಸ್.ಸಂಗ್ರೇಶಿ ಅವರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಸಂಗ್ರೇಶಿ ಅವರನ್ನು ಇದೀಗ ಕರ್ನಾಟಕ ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸಿ ಸರ್ಕಾರದ ಶಿಫಾರಿಸಿನ ಮೇರೆಗೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ಜಿ.ಎಸ್.ಸಂಗ್ರೇಶಿ ನೇಮಕ
Published : Jun 28, 2024, 10:12 PM IST
![ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ಜಿ.ಎಸ್.ಸಂಗ್ರೇಶಿ ನೇಮಕ ಜಿ.ಎಸ್.ಸಂಗ್ರೇಶಿ](https://etvbharatimages.akamaized.net/etvbharat/prod-images/28-06-2024/1200-675-21821726-thumbnail-16x9-ck.jpg)
ಜಿ.ಎಸ್.ಸಂಗ್ರೇಶಿ (ETV Bharat)
ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಅವರು ಪ್ರಸ್ತುತ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಹಲ್ಲೆ ಆರೋಪ: ಪಿಎಸ್ಐ ವೇತನದಿಂದ ₹2 ಲಕ್ಷ ವಸೂಲಿ ಮಾಡಿ ವಿಚಾರಣೆಗೊಳಪಡಿಸಲು ಶಿಫಾರಸು - Human Rights Commission