ಕರ್ನಾಟಕ

karnataka

ETV Bharat / videos

ತೋಟದಲ್ಲಿ ಬೀಡುಬಿಟ್ಟ ಕಾಳಿಂಗ ಸರ್ಪ: ಕಾರ್ಯಾಚರಣೆ ವೇಳೆ ಎಸ್ಕೇಪ್ - King Cobra Video - KING COBRA VIDEO

By ETV Bharat Karnataka Team

Published : Jun 29, 2024, 10:15 PM IST

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಕಾಫಿ ತೋಟದಲ್ಲಿ ಕೆಲ ದಿನಗಳಿಂದ ಬೀಡುಬಿಟ್ಟಿರುವ ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. 

ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಬಳಿಕ ಅದು ಬೇರೆ ಕಡೆ ಹೋಗಿರಬಹುದೆಂದು ಸ್ಥಳೀಯರು ಮತ್ತು ಕಾರ್ಮಿಕರು ತಿಳಿದುಕೊಂಡಿದ್ದರು. ಆದರೆ ಅದು ತೋಟದಲ್ಲೇ ಬೀಟುಬಿಟ್ಟು, ಆಗಾಗ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಸುತ್ತಲಿನ ಜನರು ಮತ್ತು ಕಾರ್ಮಿಕರು ಹೆದರಿದ್ದರು. ಅಂತೆಯೇ ಸ್ಥಳೀಯರು ಸ್ಥಳೀಯ ಉರಗ ತಜ್ಞ ರಿಜ್ವಾನ್ ಅವರಿಗೆ ಫೋನ್ ಮಾಡಿ ಕಾಳಿಂಗ ಸರ್ಪದ ವಿಚಾರ ಹಾಗೂ ವಿವರವನ್ನು ನೀಡಿದ್ದರು. ಸ್ಥಳಕ್ಕೆ ಬಂದ ಉರಗ ತಜ್ಞ, ಸತತ ಒಂದು ಗಂಟೆ ಕಾಲ ಕಾರ್ಯಚರಣೆ ನಡೆಸಿದ್ರು ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ. ಕಿಂಗ್​ ಕೋಬ್ರಾ ಎಸ್ಕೇಪ್ ಆಗಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಭಯ ಉಂಟಾಗಿದೆ. 

ಕಾರ್ಯಾಚರಣೆ ವೇಳೆ ಉರಗ ತಜ್ಞನ ಮೇಲೆ ದಾಳಿಗೂ ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸುತ್ತಮುತ್ತಲಿನ ಜನರು ಇನ್ನಷ್ಟು ಹೆದರಿರುವುದರಿಂದ ಕಾರ್ಯಾಚರಣೆ ಮುಂದುವರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಡಬ: ಸತತ 7 ಗಂಟೆ ಕಾರ್ಯಾಚರಣೆ ಮೂಲಕ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ವಿಡಿಯೋ - KING COBRA CAPTURED

ABOUT THE AUTHOR

...view details