ಕರ್ನಾಟಕ

karnataka

ETV Bharat / state

ಹೊಸನಗರ: ಹಳ್ಳ ದಾಟುವಾಗ ಕಾಲು ಸಂಕದಿಂದ ಬಿದ್ದು ಮಹಿಳೆ ಸಾವು - Woman Falls Off Bridge Died

ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ಮಹಿಳೆಯೊಬ್ಬರು ಹಳ್ಳ ದಾಟುವಾಗ ಕಾಲು ಸಂಕದಿಂದ ಬಿದ್ದು ಸಾವನ್ನಪ್ಪಿದ್ದಾರೆ.

By ETV Bharat Karnataka Team

Published : Jul 4, 2024, 10:20 PM IST

woman-died
ಮಹಿಳೆ ಸಾವನ್ನಪ್ಪಿದ ಸ್ಥಳ (ETV Bharat)

ಶಿವಮೊಗ್ಗ:ಜಮೀನಿಗೆ ಹೋಗಿ ವಾಪಸ್ ಆಗುತ್ತಿದ್ದ ಮಹಿಳೆ ಹಳ್ಳ ದಾಟುತ್ತಿದ್ದಾಗ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕು ಬೈಸೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಶಶಿಕಲಾ (43) ಮೃತರು. ಇವರು ತಮ್ಮ ಜಮೀನಿಗೆ ಅಗೆ ಹಾಕುವುದನ್ನು ನೋಡಿಕೊಂಡು ವಾಪಸ್ ಬರುತ್ತಿದ್ದರು. ಈ ವೇಳೆ ಕಾಲು ಸಂಕ ದಾಟುವಾಗ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಶಶಿಕಲಾ ಬೆಳಗ್ಗೆ 9:30ರ ಸುಮಾರಿಗೆ ತೋಟದಿಂದ ವಾಪಸ್ ಆಗಿದ್ದಾರೆ. ಆದರೆ ಮನೆಗೆ ಬಾರದೇ ಇರುವುದನ್ನು ಕಂಡ ಮಗ ಸುದೀಪ್ ಹುಡುಕಿಕೊಂಡು ಹೋದಾಗ ಕಾಲು ಸಂಕದಿಂದ 1 ಕಿ.ಮೀ ದೂರದಲ್ಲಿ ಅಡಕೆ ದೆಬ್ಬೆಯಲ್ಲಿ ಮೃತದೇಹ ಸಿಕ್ಕಿಹಾಕಿಕೊಂಡಿತ್ತು.

ಬೈಸೆ ಗ್ರಾಮದ ಬಳಿಯ ಜಾಮಿಜೆಡ್ಡು ಗುಡ್ಡದ ಕಡೆಯಿಂದ ರಭಸವಾಗಿ ಮಳೆ ನೀರು ಹಳ್ಳದ ರೀತಿಯಲ್ಲಿ ಹರಿಯುತ್ತದೆ. ಅಕ್ಕಪಕ್ಕದ ರೈತರು ಈ ಹಳ್ಳಕ್ಕೆ ಅಡ್ಡಲಾಗಿ ಅಡಿಕೆ ದಬ್ಬೆ ಬಳಸಿ ಸಂಕ ಕಟ್ಟಿ ತಮ್ಮ ತಮ್ಮ ಹೊಲ, ತೋಟಕ್ಕೆ ಹೋಗುತ್ತಾರೆ. ಅದೇ ರೀತಿ ಶಶಿಕಲಾ ಬೆಳಗ್ಗೆ ಜಮೀನಿನ ಹತ್ತಿರ ಹೋಗಿ ಅಗೆ ಹಾಕಲು ಸಿದ್ಧತೆ ಮಾಡಿರುವುದನ್ನು ನೋಡಿಕೊಂಡು ಬರಲು ಹೊರಟಿದ್ದರು.

ಆ ಬಳಿಕ ವಾಪಾಸ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಮನೆಯವರು ಶಶಿಕಲಾ ಅವರಿಗಾಗಿ ಹುಡುಕಾಟ ನಡೆಸಿದ್ದರು. ಕಾಲು ಸಂಕದಿಂದ ಹಳ್ಳದಲ್ಲಿ ಮುಂದೆ ಹುಡುಕುತ್ತಾ ಹೋದ ಮನೆಯವರಿಗೆ ಒಂದು ಕಿಲೋಮೀಟರ್‌ ದೂರದಲ್ಲಿ ಮೃತದೇಹ ಸಿಕ್ಕಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕರಾವಳಿಗೆ 5 ದಿನ ಭಾರೀ ಮಳೆ ಮುನ್ಸೂಚನೆ; ಹೈ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ - Rain Alert For Coastal Districts

ABOUT THE AUTHOR

...view details