ಕರ್ನಾಟಕ

karnataka

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಹೋಟೆಲ್ ಗೆ ಬಂದ ಗಜರಾಜ, ನಂತರ ಆಗಿದ್ದೇನು? - Wild elephant at hotel

By ETV Bharat Karnataka Team

Published : Sep 8, 2024, 1:16 PM IST

ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವ ಘಟನೆಗಳು ಮರುಕುಳಿಸುತ್ತಿವೆ. ಇದಕ್ಕೆ ಅರಣ್ಯ ಒತ್ತುವರಿ ಸೇರಿದಂತೆ ಇನ್ನಿತರ ಕಾರಣಗಳಿವೆ. ಹೀಗೆಯೇ ಬಿಳಿಗಿರಿರಂಗನ ಬೆಟ್ಟದಲ್ಲಿನ ಹೋಟೆಲ್​ ಮಯೂರದ ಆವರಣದಲ್ಲಿ ಕಾಡಾನೆಯೊಂದು ದಿಢೀರ್​ ಎಂಟ್ರಿಕೊಟ್ಟು ಅಲ್ಲಿದ್ದವರನ್ನು ತಬ್ಬಿಬ್ಬುಗೊಳಿಸಿದೆ.

ಹೋಟೆಲ್​ಗೆ ಎಂಟ್ರಿ ಕೊಟ್ಟ ಒಂಟಿ ಸಲಗ
ಹೋಟೆಲ್​ಗೆ ಎಂಟ್ರಿ ಕೊಟ್ಟ ಒಂಟಿ ಸಲಗ (ETV Bharat)

ಬಿಳಿಗಿರಿರಂಗನ ಬೆಟ್ಟದಲ್ಲಿ ಹೋಟೆಲ್ ಗೆ ಬಂದ ಗಜರಾಜ (ETV Bharat)

ಚಾಮರಾಜನಗರ:ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆಯೊಂದು ಸೀದ ಹೋಟೆಲ್​ಗೆ ಎಂಟ್ರಿ ಕೊಟ್ಟಿದೆ. ಪ್ರಸಿದ್ಧ ಪ್ರವಾಸಿ ತಾಣ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಶನಿವಾರ ರಾತ್ರಿ ಕಾಡಾನೆ ಕಾಣಿಸಿಕೊಂಡಿದೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆಯು ನಡೆಸುತ್ತಿರುವ ಹೋಟೆಲ್​ ಮಯೂರಕ್ಕೆ ಬಂದ ಕಾಡಾನೆಯೊಂದು ಆವರಣದಲ್ಲಿ ಓಡಾಡಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆನೆ ಬಂದದ್ದನ್ನು ಗಮನಿಸಿದ ಸಿಬ್ಬಂದಿ ಶಬ್ಧ ಮಾಡಿ ಓಡಿಸಿ‌ ಹೋಟೆಲ್​ ಗೇಟ್ ಬಂದ್​ ಮಾಡಿದ್ದಾರೆ. ಆನೆ ಓಡಾಟದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಆನೆಯೊಂದು ಬೆಟ್ಟದ ತೇರಿನ ಬೀದಿಗೆ ಅಂಗಡಿಗಳ ಮೇಲೆ ದಾಳಿ ಮಾಡಿತ್ತು.‌ ಹಲಸಿನ ಹಣ್ಣಿನ ಆಸೆಗೆ ಬರುತ್ತಿದ್ದ ಕಾಡಾನೆ ಈಗ ವಸತಿ ಪ್ರದೇಶಗಳಲ್ಲೂ ಓಡಾಡುತ್ತಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ:ಉಡುಪಿಯಲ್ಲಿದೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಕುಂಭಾಸುರನ ನಾಶಕ್ಕಾಗಿ ಭೀಮನಿಗೆ ಖಡ್ಗವನಿಟ್ಟ ಗಣಪ! - Anegudde Sri Vinayaka Temple

ABOUT THE AUTHOR

...view details