ಕರ್ನಾಟಕ

karnataka

By ETV Bharat Karnataka Team

Published : May 12, 2024, 12:41 PM IST

ETV Bharat / state

ತುಮಕೂರಿನಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಮುಖ್ಯ ಶಿಕ್ಷಕರು ಸಾವು, ಮತ್ತಿಬ್ಬರು ಗಂಭೀರ - Tumakuru Car Accident

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮುಖ್ಯ ಶಿಕ್ಷಕರು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅಪಘಾತಗೊಂಡ ಕಾರು, ಮೃತಪಟ್ಟ ಓ. ಧನಂಜಯ ಮತ್ತು ಶ್ರೀ ಕೃಷ್ಣ
ಅಪಘಾತಗೊಂಡ ಕಾರು, ಮೃತಪಟ್ಟ ಓ. ಧನಂಜಯ ಮತ್ತು ಶ್ರೀ ಕೃಷ್ಣ (ETV Bharat)

ತುಮಕೂರು:ನಿಯಂತ್ರಣ ತಪ್ಪಿದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಇಬ್ಬರು ಮುಖ್ಯ ಶಿಕ್ಷಕರು ಸಾವನ್ನಪ್ಪಿದ್ದು, ಇನ್ನಿಬ್ಬರು ಶಿಕ್ಷಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಪಾವಗಡ ತಾಲೂಕಿನ ತುಮಕೂರು ರಸ್ತೆಯ ಕಣಿವೆನಹಳ್ಳಿ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪ ಪ್ರಾಂಶುಪಾಲರಾದ ಓ.ಧನಂಜಯ(58) ಮತ್ತು ಗೌಡೇಟಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶ್ರೀ ಕೃಷ್ಣ(49) ಮೃತರೆಂದು ಗುರುತಿಸಲಾಗಿದೆ.

ತುಮಕೂರಿನಲ್ಲಿ ಶಿಕ್ಷಕರೊಬ್ಬರ ಮಗಳ ಆರತಕ್ಷತೆ ಮುಗಿಸಿ ಮರಳಿ ಪಾವಗಡಕ್ಕೆ ವಾಪಸ್‌ ಬರುತ್ತಿದ್ದ ವೇಳೆ ಪಾವಗಡ-ತುಮಕೂರು ರಸ್ತೆ ಮಾರ್ಗದ ಕಣಿವೆನಹಳ್ಳಿ ಗೇಟ್ ಸಮೀಪ ಕಾರು ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿದೆ. ಈ ರಭಸಕ್ಕೆ ಶ್ರೀ ಕೃಷ್ಣ ಮತ್ತು ಓ.ಧನಂಜಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಶಿಕ್ಷಕರಾದ ಆರ್​.ಎಂ.ನರಸಿಂಹ ಮತ್ತು ವೆಂಕಟಾಚಲಪತಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.

ಇದನ್ನೂ ಓದಿ:ಬಾಗಲಕೋಟೆ: ಕಾರಿಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ - Car Catches Fire

ABOUT THE AUTHOR

...view details