ಮಂಗಳೂರು:ನಗರದ ಕೆಪಿಟಿ ಸರ್ಕಲ್ ಬಳಿ ರಸ್ತೆಯಲ್ಲಿದ್ದ ಹೊಂಡ, ಗುಂಡಿಗಳನ್ನು ಟ್ರಾಫಿಕ್ ಎಸ್ಐ ಸ್ವತಃ ತಾವೇ ಸಲಿಕೆ ಹಿಡಿದು ದುರಸ್ಥಿಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರ್ ಸ್ವಾಮಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವತಃ ಸಲಿಕೆ ಹಿಡಿದು ರಸ್ತೆಹೊಂಡ ಮುಚ್ಚಿದ ಟ್ರಾಫಿಕ್ ಎಸ್ಐ- ವಿಡಿಯೋ ವೈರಲ್ - Traffic SI Fixes Potholes - TRAFFIC SI FIXES POTHOLES
ಟ್ರಾಫಿಕ್ ಎಸ್ಐ ಸ್ವತಃ ತಾವೇ ಸಲಿಕೆ ಹಿಡಿದು ರಸ್ತೆ ಹೊಂಡ ಮುಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
![ಸ್ವತಃ ಸಲಿಕೆ ಹಿಡಿದು ರಸ್ತೆಹೊಂಡ ಮುಚ್ಚಿದ ಟ್ರಾಫಿಕ್ ಎಸ್ಐ- ವಿಡಿಯೋ ವೈರಲ್ - Traffic SI Fixes Potholes Traffic SI fixes potholes and wins praise from public in Mangaluru](https://etvbharatimages.akamaized.net/etvbharat/prod-images/02-07-2024/1200-675-21848594-thumbnail-16x9-meg.jpg)
ಸ್ವತಃ ಗಾರೆ ಹಿಡಿದು ರಸ್ತೆಹೊಂಡ ಮುಚ್ಚಿದ ಟ್ರಾಫಿಕ್ ಎಸ್ಐ (ETV Bharat)
Published : Jul 2, 2024, 2:29 PM IST
ಸ್ವತಃ ಸಲಿಕೆ ಹಿಡಿದು ರಸ್ತೆಹೊಂಡ ಮುಚ್ಚಿದ ಟ್ರಾಫಿಕ್ ಎಸ್ಐ (ETV Bharat)
ಮಳೆಗೆ ಕೆಪಿಟಿ ಸರ್ಕಲ್ ಬಳಿ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈಶ್ವರ್ ಸ್ವಾಮಿ ಅವರು ಕೆಲವರೊಂದಿಗೆ ಸೇರಿಕೊಂಡು ಹಣ ಒಟ್ಟುಗೂಡಿಸಿ ಸಿಮೆಂಟ್, ಜಲ್ಲಿ ತಂದು ರಸ್ತೆಹೊಂಡಗಳನ್ನು ಮುಚ್ಚಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ, 8ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ - Fire Accident