ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಫೆ.29ರಿಂದ ಸರಸ್ ಮೇಳ: ರಾಷ್ಟ್ರೀಯ ಮೇಳದ ಪೋಸ್ಟರ್, ಅಕ್ಕ ಕೆಫೆ ಲಾಂಛನ ಬಿಡುಗಡೆ - ರಾಷ್ಟ್ರೀಯ ವಸ್ತು ಪ್ರದರ್ಶನ

ಬೆಂಗಳೂರು ನಗರದಲ್ಲಿ ಫೆ.29ರಿಂದ ಹತ್ತು ದಿನಗಳ ರಾಷ್ಟ್ರಮಟ್ಟದ ರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

Exhibition and Sales  National Product Exhibition  Bengaluru  ರಾಷ್ಟ್ರೀಯ ವಸ್ತು ಪ್ರದರ್ಶನ  ನಮ್ಮ‌ ಸರಸ್ ಮೇಳ
ಪ್ರದರ್ಶನ ಮತ್ತು ಮಾರಾಟ ಮೇಳದ ಪೋಸ್ಟರ್​ ಬಿಡುಗಡೆ

By ETV Bharat Karnataka Team

Published : Feb 23, 2024, 5:13 PM IST

ಬೆಂಗಳೂರು: ಆರ್ಥಿಕವಾಗಿ ಸಬಲೀಕರಣಗೊಳ್ಳಲು ಮಹಿಳೆಯರು ತಯಾರಿಸಿದ ಗುಣಮಟ್ಟದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕೌಶಲ್ಯಾಭಿವೃದ್ಧಿ ಇಲಾಖೆಯ ಜೀವನೋಪಾಯ ಅಭಿಯಾನದಡಿ ಫೆ.29ರಿಂದ ಹತ್ತು ದಿನಗಳ ರಾಷ್ಟ್ರಮಟ್ಟದ ನಮ್ಮ‌ ಸರಸ್ ಮೇಳವನ್ನ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸರ್ಕಾರ ವತಿಯಿಂದ 3ನೇ ಬೃಹತ್ ರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿದ್ದು, ಈ ಸಂಬಂಧ ಪೋಸ್ಟರ್ ಹಾಗೂ ಅಕ್ಕ ಕೆಫೆ ಲಾಂಛನ ಬಿಡುಗಡೆ ಮಾಡಲಾಯಿತು.‌ ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ನಾವು ಪ್ರಯತ್ನಕ್ಕಾಗಿ ಸರಸ್ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಉದ್ಯೋಗ ಪಡೆಯುವುದಕ್ಕಿಂತ ಬದಲಾಗಿ ಉದ್ಯಮ ವೃತ್ತಿಯನ್ನ ಅಳವಡಿಸಿಕೊಳ್ಳುವುದು ಮುಖ್ಯ. ಸರಸ್ ಅಂದ್ರೆ ಸ್ವಯಂ ಪ್ರೇರಿತರಾಗಿ ಉದ್ಯೋಗ ಅಳವಡಿಸಿಕೊಳ್ಳುವುದು. ಇದು ಕುಂಬಮೇಳದ ರೀತಿ ಈ ಹಿಂದೆ ನಾನು‌ ಸಹಕಾರ ಸಚಿವನಾಗಿದ್ದಾಗ ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದೆ. ಖಾಸಗಿ ಕಂಪನಿಗಳು ಬಂದು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಫೆ.29ರಿಂದ ಹತ್ತು ದಿನಗಳ ರಾಷ್ಟ್ರಮಟ್ಟದ ರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಹೇರ್ ಕಟ್ಟಿಂಗ್‌ ಮಾಡೋಕೆ 1100 ರೂ.ಆಗುತ್ತೆ:ಮಹಿಳೆಯರು ಉದ್ಯಮ ಅರಂಭಿಸುವುದಕ್ಕೆ ಆತ್ಮವಿಶ್ವಾಸ ಇರಬೇಕು. ಬಡ್ಡಿ, ಚಕ್ರಬಡ್ಡಿ ಸಮಸ್ಯೆ ಇರುವುದು ಸಹಜ. ಇದಕ್ಕಾಗಿ ತಲೆ ಕೆಡಿಸಿಕೊಳ್ಳಬಾರದು. ಬ್ಯೂಟಿ ಪಾರ್ಲರ್ ಎಷ್ಟು ಬೆಳೆದಿದೆ ಅಂತ ನಿಮಗೆಲ್ಲ ಗೊತ್ತಿಲ್ಲ. ಹೆಣ್ಣು ಹಣೆಗೆ ಬಿಂದಿ, ಕಿವಿಗೆ ಓಲೆ ಹಾಕಿಕೊಂಡರೇನೆ ಚೆಂದ. ನಾನು ಈ ಹಿಂದೆ‌‌ ಹಳ್ಳಿಯಲ್ಲಿ ಹೇರ್ ಕಟ್ಟಿಂಗ್​ಗೆ 15-20 ರೂಪಾಯಿ ನೀಡುತ್ತಿದ್ದೆ. ಸದಾಶಿವನಗರದಲ್ಲಿ ಇದೀಗ 1100 ಆಗಿದೆ. ಉದ್ಯಮ ಆರಂಭಿಸಿ ಉದ್ಯಮಿಗಳಾಗಿ. ನಿಮ್ಮ ವಸ್ತುಗಳನ್ನು ಬ್ರ್ಯಾಂಡ್ ಮಾಡಿ. ಇದಕ್ಕಾಗಿ ಮಾರ್ಕೆಟಿಂಗ್ ತಂತ್ರವನ್ನ ವಿಭಿನ್ನವಾಗಿ ಪ್ರಚಾರ ಮಾಡಿ ಎಂದ ಸಚಿವರು, ಉದ್ಯೋಗ ಸೃಷ್ಟಿ ಮಾಡುವ ಮಹಿಳೆಯರಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಲಿದೆ ಎಂದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, ಹತ್ತು ದಿನಗಳ ಕಾಲ ನಮ್ಮ ಸರಸ್ ಮೇಳ ನಡೆಯಲಿದೆ. ರಾಷ್ಟ್ರಮಟ್ಟದ ಮೇಳ ಇದಾಗಿರುವುದರಿಂದ ವಿವಿಧ ರಾಜ್ಯಗಳ 100 ಮಳಿಗೆ ಸೇರಿ‌ ಒಟ್ಟು 250 ಮಳಿಗೆಗಳು ತೆರೆಯಲಾಗುತ್ತಿದೆ. ಕಳೆದ ವರ್ಷ ಹಮ್ಮಿಕೊಂಡಿದ್ದ ಮೇಳದಲ್ಲಿ 3.5 ಕೋಟಿ ಆದಾಯ ಬಂದಿತ್ತು. ಈ ಬಾರಿ ಹೆಚ್ಚು ಆದಾಯ ಬರುವ ನಿರೀಕ್ಷೆಯಿದೆ. ಸ್ವಾವಲಂಬಿ ಮಹಿಳಾ‌ ಕುಟುಂಬ ಆದಾಯ ಅಧಿಕ ಮಾಡುವುದಕ್ಕೆ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮೇಳದಲ್ಲಿ ವಿವಿಧ ರಾಜ್ಯಗಳ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮರದ ಗೊಂಬೆಗಳು, ಆಟದ ಸಾಮಾನುಗಳು, ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ಕಸೂತಿ, ನಾರಿನ ಉತ್ಪನ್ನದ ಬ್ಯಾಗ್​ಗಳು, ಮಸಾಲ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಯುತ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ದೊರಯಲಿವೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಪ್ರಮುಖ ಆಕರ್ಷಣೀಯ ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಚನ್ನಪಟ್ಟಣದ ಗೊಂಬೆಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು ಮತ್ತು ಇತರೆ ರಾಜ್ಯಗಳ ಪ್ರಮುಖ ಉತ್ಪನ್ನಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಎಂದರು.

ಓದಿ:ಕನ್ನಡ ನಾಮಫಲಕ ಕಡ್ಡಾಯ, ಬೆಳಗಾವಿಯಲ್ಲಿ ಬೆಂಗಳೂರು ಮಾದರಿ ಹೋರಾಟ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

ABOUT THE AUTHOR

...view details