ಕರ್ನಾಟಕ

karnataka

ETV Bharat / state

ವಿಧಾನಸೌಧದ ಗುಮ್ಮಟದಲ್ಲಿ ಕಿರಿದಾದ ಬಿರುಕು; ಸ್ಪೀಕರ್ ಖಾದರ್​ ಹೇಳಿದ್ದೇನು? - Vidhana Soudha - VIDHANA SOUDHA

ವಿಧಾನಸೌಧದ ಗುಮ್ಮಟದಲ್ಲಿ ಕಿರಿದಾದ ಬಿರುಕು ಕಾಣಿಕೊಂಡಿದೆ. ಈ ಬಗ್ಗೆ ಸಿಎಂ ಗಮನಕ್ಕೆ ತರಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

Vidhana Soudha dome
ವಿಧಾನಸೌಧ (ETV Bharat)

By ETV Bharat Karnataka Team

Published : Jul 20, 2024, 10:30 PM IST

ಬೆಂಗಳೂರು:ವಿಧಾನಸೌಧದ ಗುಮ್ಮಟದ ಒಳಭಾಗದಲ್ಲಿ ಸಣ್ಣದಾಗಿನ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕು ಗುಮ್ಮಟದ ಒಳಭಾಗದ ಸೀಲಿಂಗ್​​ಗೆ ಸೀಮಿತವಾಗಿದೆಯೋ? ಅಥವಾ ಆಳವಾದ ಬಿರುಕೋ ಎಂಬುದು ಸ್ಪಷ್ಟವಾಗಿಲ್ಲ.

ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಇರುವ ಗುಮ್ಮಟದಲ್ಲಿ ಈ ತೆಳ್ಳಗಿನ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕಿನಿಂದ ನೀರು ಸೋರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಈ ಮುಂಚೆಯೇ ಉಂಟಾಗಿದ್ದ ಬಿರುಕೋ ಅಥವಾ ಈಗಷ್ಟೇ ಉಂಟಾಗಿದೆಯೋ ಎಂಬುದೂ ಕೂಡ ತಿಳಿದಿಲ್ಲ.

ಈ ಸಂಬಂಧ ಪರಿಶೀಲನೆ ನಡೆಸಿದ ಸ್ಪೀಕರ್ ಯು.ಟಿ.ಖಾದರ್, ''ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಿಎಂ ಗಮನಕ್ಕೆ ನಾನು ತರುತ್ತೇನೆ. ಇದು ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರಿಗೆ ಬರುತ್ತದೆ. ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ'' ಎಂದರು.

''ಇದು ಬಹಳ ವರ್ಷದ ಕಟ್ಟಡ. ಕೆಲವೊಂದು ಲೋಪದೋಷ ಆಗಿರಬಹುದು. ನಾನು ಆದಷ್ಟು ಬೇಗ ಸಿಎಂಗೆ ಈ ವಿಚಾರ ತಿಳಿಸುತ್ತೇನೆ'' ಎಂದು ಸ್ಪೀಕರ್ ಖಾದರ್ ತಿಳಿಸಿದರು.

ಇದನ್ನೂ ಓದಿ:ಭರ್ತಿಯತ್ತ ಕೆಆರ್​ಎಸ್​ ಜಲಾಶಯ: ಮುಂಜಾಗ್ರತ ಕ್ರಮವಾಗಿ ಕಾವೇರಿ ನದಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - 15 THOUSAND CUSECS WATER RELEASED

ABOUT THE AUTHOR

...view details