ETV Bharat Karnataka

ಕರ್ನಾಟಕ

karnataka

ETV Bharat / state

ಸ್ವೀಕರಿಸುವವರಿಲ್ಲದೇ ಮರಳಿದ ಕೊರಿಯರ್‌ನಿಂದ ಕಳ್ಳತನ ಜಾಲ ಬಯಲು: ₹10.50 ಲಕ್ಷ ಮೌಲ್ಯದ ಮೊಬೈಲ್ ಜಪ್ತಿ - MOBILE PHONES STEALING CASE

ಮೊಬೈಲ್ ಫೋನ್‌ ಕದ್ದು ಅನ್ಯ ರಾಜ್ಯಕ್ಕೆ ಕೊರಿಯರ್ ಮೂಲಕ ಕಳುಹಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

mobile stealing case
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Nov 15, 2024, 3:24 PM IST

ಬೆಂಗಳೂರು:ಮೊಬೈಲ್ ಫೋನ್‌ಗಳನ್ನು ಕಳವು ಮಾಡಿ ಅನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಹಾಗೂ ಸ್ವೀಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ಮೂಲದ ಶ್ರೀನಿವಾಸ್ ಹಾಗೂ ಕೇರಳ ಮೂಲದ ಶಫೀಕ್ ಬಂಧಿತರು. ಆರೋಪಿತರಿಂದ 10.50 ಲಕ್ಷ ರೂ. ಮೌಲ್ಯದ 52 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಜಾತ್ರೆ, ಸಮಾರಂಭಗಳಲ್ಲಿ ಮೊಬೈಲ್ ಫೋನ್ ಎಗರಿಸುತ್ತಿದ್ದ ಶ್ರೀನಿವಾಸ್ ಹಾಗೂ ಆತನ ಸಹಚರರು, ಅವುಗಳನ್ನು ಕೊರಿಯರ್ ಮೂಲಕ ಕೇರಳದ ಶಫೀಕ್‌ಗೆ ತಲುಪಿಸುತ್ತಿದ್ದರು. ಅದೇ ರೀತಿ ಇತ್ತೀಚೆಗೆ ಆರೋಪಿಗಳು ಕೇರಳದ ವಿಳಾಸಕ್ಕೆ ಕಳುಹಿಸಿದ್ದ ಕೊರಿಯರ್ ಬಾಕ್ಸ್​ಗಳನ್ನು ಯಾರೂ ಸ್ವೀಕರಿಸದ ಕಾರಣ ವಾಪಸ್ ಬಂದಿತ್ತು. ಬಾಕ್ಸ್ ಕೊರಿಯರ್ ಮಾಡಿದ್ದ ವ್ಯಕ್ತಿಗೆ ಹಲವು ಬಾರಿ ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲ. ಬಳಿಕ, ಕೊರಿಯರ್ ಕಂಪನಿ ಸಿಬ್ಬಂದಿ ಬಾಕ್ಸ್‌ ಅನ್ನು ಓಪನ್ ಮಾಡಿ ನೋಡಿದಾಗ 12 ಮೊಬೈಲ್ ಫೋನ್‌ಗಳು ಇರುವುದು ಪತ್ತೆಯಾಗಿತ್ತು. ಬಳಿಕ ಕೊರಿಯರ್ ಕಂಪನಿಯವರು ಚಂದ್ರಾಲೇಔಟ್ ಠಾಣೆಗೆ ತಂದುಕೊಟ್ಟು ದೂರು ದಾಖಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಕೊರಿಯರ್ ಕಳಿಸಿದ್ದ ಶ್ರೀನಿವಾಸ್​​ನನ್ನು ಭದ್ರಾವತಿಯಲ್ಲಿ ಬಂಧಿಸಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಮೊಬೈಲ್ ಫೋನ್‌ಗಳನ್ನು ಕದ್ದು ಕೊರಿಯರ್ ಮೂಲಕ ಕೇರಳ ರಾಜ್ಯಕ್ಕೆ ಕಳಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ನಂತರ ಕೇರಳದ ಕೊಂಡುಪರಂಬಿಲ್ ವಿಳಾಸದಲ್ಲಿ ಮೊಬೈಲ್ ಫೋನ್‌ಗಳನ್ನು ಸ್ವೀಕರಿಸುತ್ತಿದ್ದ ಶಫೀಕ್‌ನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರ ಬಳಿ ಒಟ್ಟು 10.50 ಲಕ್ಷ ರೂ. ಮೌಲ್ಯದ 52 ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆ ತೆರೆಸಿ ಸೈಬರ್ ವಂಚನೆಗೆ ಬಳಕೆ: ರಾಜಸ್ಥಾನ ಮೂಲದ ನಾಲ್ವರ ಬಂಧನ

ABOUT THE AUTHOR

...view details