ಕರ್ನಾಟಕ

karnataka

ETV Bharat / state

ಎನ್​ಡಿಎಯಿಂದ ಕಾರ್ಯಕರ್ತನಿಗೆ ಅವಕಾಶ ಕೊಟ್ಟರೆ ಕ್ಷೇತ್ರದ ಜನತೆಗಾಗಿ ನಮ್ಮ ಸಹಕಾರ: ನಿಖಿಲ್​ ಕುಮಾರಸ್ವಾಮಿ

ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿ ನಿನ್ನೆ ನಿಖಿಲ್​ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಇಂದು ಸಂಜೆ ಅಭ್ಯರ್ಥಿ ನಿರ್ಣಯದ ಕುರಿತು ಮೈತ್ರಿ ಪಕ್ಷದ ಹಿರಿಯ ನಾಯಕರು ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

By ETV Bharat Karnataka Team

Published : 4 hours ago

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ (ETV Bharat)

ಮಂಡ್ಯ:ಪಕ್ಷದ ಸಣ್ಣ ಕಾರ್ಯಕರ್ತನಿಗೂ ಅವಕಾಶ ಕೊಟ್ಟು ಎನ್​ಡಿಎಯಿಂದ ಅಭ್ಯರ್ಥಿ ಮಾಡಿದರೂ ಕೂಡ ನಮ್ಮ ಸಹಕಾರ ಸದಾಕಾಲ ಪಕ್ಷದ ಪರವಾಗಿ, ಕ್ಷೇತ್ರದ ಜನತೆಯ ಅಭಿವೃದ್ಧಿಯ ಪರವಾಗಿ ಇರುತ್ತದೆ" ಎಂದು ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಿಖಿಲ್​ ಕುಮಾರಸ್ವಾಮಿ ಅವರು, "ಚನ್ನಪಟ್ಟಣ ಉಪಚುನಾವಣೆ ವಿಚಾರ ಹಲವಾರು ತಿಂಗಳಿನಿಂದ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಳೆ (ಶನಿವಾರ) ಶಿಗ್ಗಾವಿ ಮತ್ತು ಸಂಡೂರಿಗೆ ಕೂಡ ಜನತಾದಳ ಪಕ್ಷ ಹಾಗೂ ಬಿಜೆಪಿ ಸಮನ್ವಯತೆ ಕಾಪಾಡುವ ಹಿತದೃಷ್ಟಿಯಿಂದ ಭೇಟಿ ಕೊಡುತ್ತಿದ್ದೇನೆ. ಈಗಾಗಲೇ ಪಕ್ಷದ ನಮ್ಮ ನಾಯಕರು ನಮ್ಮ ಕಾರ್ಯಕರ್ತರಿಗೆ ಒಂದು ಸಂದೇಶವನ್ನು ಕೊಡಲು ನನ್ನ ಗಮನಕ್ಕೆ ತಂದಿದ್ದಾರೆ".

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ (ETV Bharat)

"ಚನ್ನಪಟ್ಟಣ ಉಪಚುನಾವಣೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇವೆಲ್ಲದಕ್ಕೂ ಸಂಬಂಧಿಸಿದಂತೆ ನಾನು ಅನೇಕ ಬಾರಿ ತಿಳಿಸಿದ್ದೇನೆ. ರಾಷ್ಟ್ರೀಯ ಮಟ್ಟದ ನಮ್ಮ ನಾಯಕರಾದಂತಹ ಸನ್ಮಾನ್ಯ ಹೆಚ್​.ಡಿ. ಕುಮಾರಸ್ವಾಮಿ ಅವರ ಜೊತೆಯಲ್ಲಿ ಸ್ಥಳೀಯವಾಗಿ ರಾಜ್ಯಮಟ್ಟದ ಬಿಜೆಪಿ ನಾಯಕರು ಇರುತ್ತಾರೆ. ಬಹುಶಃ ಹೆಚ್​.ಡಿ. ಕುಮಾರಸ್ವಾಮಿ ಅವರು ಬಿ.ಎಸ್​. ಯಡಿಯೂರಪ್ಪ ಅವರ ಜೊತೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜೊತೆ ನಾಳೆ ಸಂಜೆ(ಶನಿವಾರ) ಚರ್ಚೆ ಮಾಡುವ ಸಾಧ್ಯತೆ ಇದೆ. ಎರಡೂ ಪಕ್ಷಗಳಲ್ಲಿ ಒಂದು ಸೂಕ್ತವಾದ ನಿರ್ಣಯವಾದ ಮೇಲೆ ಎನ್​ಡಿಎ ಅಂತಿಮ ಅಭ್ಯರ್ಥಿ ಘೋಷಣೆಯಾಗುತ್ತದೆ" ಎಂದು ತಿಳಿಸಿದ್ದಾರೆ.

ಈ ವೇಳೆ ಮಾಧ್ಯಮ ಮಿತ್ರರು 'ಅರವಿಂದ್​ ಬೆಲ್ಲದ್​ ಅವರು ಸಿ.ಪಿ. ಯೋಗೇಶ್ವರ್​ ಮಾತ್ರ ಮೈತ್ರಿ ಪಕ್ಷದಿಂದ ಚುನಾವಣೆಗೆ ನಿಂತರೆ ಗೆಲ್ಲಲು ಸಾಧ್ಯ' ಎಂದು ಹೇಳಿದ್ದಾರೆ ಎಂದು ತಿಳಿಸಿದಾಗ ನಿಖಿಲ್​, "ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಅಧಿಕಾರವಿದೆ. ಆದರೆ ಅಂತಿಮವಾಗಿ ತೀರ್ಮಾನಗಳು, ನಿರ್ಣಯಗಳು ಜೆಡಿಎಸ್​ ಮತ್ತು ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಆಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

'ಕಾರ್ಯಕರ್ತನಿಗೆ ಟಿಕೆಟ್​ ಕೊಟ್ಟರೂ ಸರಕಾರ'- ನಿಖಿಲ್​:ಚನ್ನಪಟ್ಟಣ ಉಪಚುನಾವಣೆಗೆ ಒಮ್ಮತದ ಅಭ್ಯರ್ಥಿ ನೀವಾದರೆ ನೀವು ಚುನಾವಣೆಗೆ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ನಿಖಿಲ್​ ಅವರು, "ಅದರ ಬಗ್ಗೆ ಮಾತನಾಡೋಣ. ಈಗ ಪಕ್ಷಕ್ಕೋಸ್ಕರ ನಾವು ತೀರ್ಮಾನ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ನಿಖಿಲ್​ ಕುಮಾರಸ್ವಾಮಿಯಂತಲ್ಲ, ಯಾರೇ ಒಬ್ಬ ಸಣ್ಣ ಕಾರ್ಯಕರ್ತನಿಗೂ ಅವಕಾಶ ಕೊಟ್ಟು ಎನ್​ಡಿಎಯಿಂದ ಅಭ್ಯರ್ಥಿ ಮಾಡಿದರೂ ಕೂಡ ನಮ್ಮ ಸಹಕಾರ ಸದಾಕಾಲ ಪಕ್ಷದ ಪರವಾಗಿ, ಕ್ಷೇತ್ರದ ಜನತೆಯ ಅಭಿವೃದ್ಧಿಯ ಪರವಾಗಿ ಇರುತ್ತದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಫಲಿಸದ ಜೆಡಿಎಸ್ ನಾಯಕರ ಮನವೊಲಿಕೆ?: 'ಜನರ ಭಾವನೆಗೆ ತಕ್ಕಂತೆ ಟಿಕೆಟ್​ ಕೇಳುತ್ತಿದ್ದೇನೆ' ಎಂದ ಯೋಗೇಶ್ವರ್‌

ABOUT THE AUTHOR

...view details