ಕರ್ನಾಟಕ

karnataka

ಚಿಕ್ಕಮಗಳೂರು: ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಬೀದಿಗೆ ಬಿದ್ದ ನೂರಾರು ಕುಟುಂಬಗಳು - 190 houses were damaged due to rain

By ETV Bharat Karnataka Team

Published : Jul 19, 2024, 11:00 PM IST

Updated : Jul 19, 2024, 11:05 PM IST

ಚಿಕ್ಕಮಗಳೂರು ಜಿಲ್ಲಾದ್ಯಂತ ಮಳೆಗೆ ಇಲ್ಲಿಯವರೆಗೆ ಸುಮಾರು 190 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

more-than-190-houses-were-damaged
ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿ (ETV Bharat)

ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿ (ETV Bharat)

ಚಿಕ್ಕಮಗಳೂರು :ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಸುಂದರ್ ಎಂಬುವವರ ಮನೆ ನಾಶವಾಗಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ಆಹಾರ ಪದಾರ್ಥಗಳು ಸಂಪೂರ್ಣ ನಾಶವಾಗಿದ್ದು, ಮಳೆಯ ನಡುವೆ ಕುಟುಂಬ ಸದಸ್ಯರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ, ಒಡೆಯರಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿರುವ ಘಟನೆ ಜರುಗಿದೆ. ಗ್ರಾಮದ ದ್ಯಾವಯ್ಯ, ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಹಾನಿಯಾಗಿದ್ದು, ಜಿಲ್ಲಾದ್ಯಂತ ಮಳೆಗೆ ಈವರೆಗೂ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಕೊಪ್ಪ ತಾಲೂಕಿನ ಮೇಗೂರು ಗ್ರಾಮದ ಪ್ರೇಮ ಬಾಬು ಗೌಡ ಎಂಬುವವರ ಮನೆ ಮುಂದೆ ದೊಡ್ಡ ಪ್ರಮಾಣದಲ್ಲಿ ಕಂದಕ ನಿರ್ಮಾಣವಾಗಿದೆ. ಮಳೆಯಿಂದಾಗಿ ಸೃಷ್ಠಿಯಾಗಿರುವ ವಿಚಿತ್ರ ಕಂದಕ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಕಂದಕದ ಒಳಗಿಂದ ಭೂಮಿ ಒಳಗೆ ಹರಿಯುತ್ತಿರುವ ನೀರಿನ ಬುಗ್ಗೆ ನೋಡಿ ಕುಟುಂಬ ಸದಸ್ಯರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ, ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮುಳ್ಳಯ್ಯನಗಿರಿ ರಸ್ತೆಯ ಮೂರನೇ ತಿರುವಿನಲ್ಲಿ ಮರವೊಂದು ಬಿದ್ದಿದೆ. ರಸ್ತೆಯಲ್ಲಿ ವಾಹನಗಳು ಇಲ್ಲದಿದ್ದರಿಂದ ಅನಾಹುತ ತಪ್ಪಿದಂತಾಗಿದೆ. ಈ ದುರಂತ ಘಟನೆಯಿಂದ ರಸ್ತೆಯಲ್ಲಿ ಸ್ಥಳೀಯ ಗ್ರಾಮಸ್ಥರು ಓಡಾಡಲು ಪರದಾಟ ನಡೆಸಿದ್ದಾರೆ.

ಗುಡ್ಡದ ಮಣ್ಣಿನ ಸಮೇತ ಮರ ಕೆಳಗೆ ಬಿದ್ದಿದೆ. ಅರಣ್ಯ ಸಿಬ್ಬಂದಿಗಳಿಂದ ಮರ ತೆರವು ಕಾರ್ಯ ಮುಂದುವರಿದಿದೆ. ಗಿರಿ ಭಾಗದ ರಸ್ತೆಯಲ್ಲಿ ಪದೇ ಪದೆ ಕುಸಿಯುತ್ತಿರುವ ಗುಡ್ಡದಿಂದ ಈ ಭಾಗದ ಜನರಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೂಡಿಗೆರೆ ತಾಲೂಕು ಕೋಗಿಲೆ ಗ್ರಾಮದ ಹಬ್ಬಿ ಹಳ್ಳ ಜಲಪಾತದ ರೂಪವನ್ನು ಪಡೆದುಕೊಂಡಿದೆ. ಸಾಧಾರಣವಾಗಿ ಹರಿಯುತ್ತಿದ್ದ ಹಳ್ಳಕ್ಕೆ ಹೊಸ ರೂಪ ಸಿಕ್ಕಿದೆ. ಹಾಲ್ನೊರೆಯೇ ಧುಮ್ಮಿಕ್ಕುತ್ತಿರುವಂತೆ ಭಾಸವಾಗುತ್ತಿದೆ. ಹಳ್ಳಕ್ಕೆಲ್ಲ ಜಲಪಾತದ ರೂಪ ಕೊಟ್ಟು ಅನಾಹುತವನ್ನು ವರುಣದೇವ ಸೃಷ್ಟಿ ಮಾಡುತ್ತಿದ್ದಾನೆ. ಕಾಫಿನಾಡ ಮಳೆ ಅಬ್ಬರಕ್ಕೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಆರು ದಿನದಿಂದ ಎಡಬಿಡದೆ ಸುರಿಯುತ್ತಿರುವ ಮಳೆರಾಯ ಜನರ ನಿದ್ದೆಗೆಡಿಸಿದ್ದಾನೆ.

ಕೊಪ್ಪ ತಾಲೂಕಿನ ಬಸರಿಕಟ್ಟೆ ಸುತ್ತಮುತ್ತ ಅಪಾಯದ ಮಟ್ಟ ಮೀರಿ ಹಳ್ಳ ಕೊಳ್ಳಗಳು ಹರಿಯುತ್ತಿದ್ದು, ಬೆಳಗ್ಗೆ, ರಾತ್ರಿಯಿಡಿ ಮಳೆಯಿಂದಾಗಿ ಜಿಲ್ಲೆಯ ಜನರನ್ನ ಕಂಗಾಲಾಗುವಂತೆ ಮಾಡಿದೆ.

ಇದನ್ನೂ ಓದಿ :ಜನರ ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಜಾನುವಾರು: ವಿಡಿಯೋ - Cattle washed away

Last Updated : Jul 19, 2024, 11:05 PM IST

ABOUT THE AUTHOR

...view details