ಹಾವೇರಿ:''ಕಾಂಗ್ರೆಸ್ನವರು ಮೊದಲು ಪೂರ್ಣ ಬಜೆಟ್ ಓದಲಿ ನಂತರ ಆರೋಪ ಮಾಡಲಿ. ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ ಎಂಬುದನ್ನು ತಿಳಿದಕೊಳ್ಳಲಿ. ಅದೇ ಅಕೌಂಟ್ಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಬಂದಿತ್ತು? ಕಾಂಗ್ರೆಸ್ನವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ'' ಎಂದು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್ನವರು ಅನುದಾನ ಬಂದೇ ಇಲ್ಲ ಅಂತಾರೆ'' ಎಂದ ಅವರು, ''44,870 ಕೋಟಿ ಹಣವನ್ನು ಡೆವಲ್ಯೂಷನ್ ಆಪ್ ಫಂಡ್ನಲ್ಲಿ ಕರ್ನಾಟಕಕ್ಕೆ ಕೊಟ್ಟಿದಾರೆ. ಈ ಬಗ್ಗೆ ಸೋಮವಾರ ಎಲ್ಲಾ ಮಾಹಿತಿ ಬಿಡುಗಡೆ ಮಾಡುವೆ'' ಎಂದು ತಿಳಿಸಿದರು.
''ಕೇಂದ್ರ ಸರ್ಕಾರದಿಂದ ಕರ್ನಾಟಕದ ಪ್ರಗತಿಗೆ ಎಲ್ಲ ರೀತಿಯ ನೆರವು ನೀಡಲಾಗಿದೆ. ಜೊತೆಗೆ ಇನ್ನಷ್ಟು ಅನುದಾನ ಕೊಡಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ಬಾಕಿ ಅನುದಾನ ಕೇಳಿದ್ದೇವೆ. ಕಾಂಗ್ರೆಸ್ನವರು ಸುಮ್ಮನೆ ಆರೋಪ ಮಾಡಿಕೊಂಡು ಕೂತಿದ್ದಾರೆ. ಅನುದಾನ ಹರಿಯಲು ಪ್ರಾರಂಭ ಆಗಿದೆ, ಇನ್ಮುಂದೆ ಹೆಚ್ಚಿನ ಅನುದಾನ ಹರಿಯುತ್ತಲೇ ಇರುತ್ತೆ'' ಎಂದರು.