ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಚಾಲನೆ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ಹಲಾಲ್ ಜಿಹಾದ್ ಒಂದು ಆರ್ಥಿಕ ಯುದ್ಧವಾಗಿದೆ. ಹೀಗಾಗಿ ಹಿಂದೂ ಸಂಘಟನೆಗಳು ಒಟ್ಟಾಗಿ ದೀಪಾವಳಿಯನ್ನು ಹಲಾಲ್ ರಹಿತ ದೀಪಾವಳಿಯಾಗಿ ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದು ಹಿಂದೂ ಸಂಘಟನೆ ಮುಖಂಡ ಗುರುಪ್ರಸಾದ ಗೌಡ ತಿಳಿಸಿದ್ದಾರೆ.

ಹಲಾಲ್ ಮುಕ್ತ ದೀಪಾವಳಿ ಅಭಿಯಾನ
ಹಲಾಲ್ ಮುಕ್ತ ದೀಪಾವಳಿ ಅಭಿಯಾನ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು: "ರಾಜ್ಯಾದ್ಯಂತ ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ" ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಂಯೋಜಕ ಗುರುಪ್ರಸಾದ ಗೌಡ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಮೊದಲು ಹಲಾಲ್ ಪರಿಕಲ್ಪನೆಯು ಕೇವಲ ಮಾಂಸದ ಉತ್ಪನ್ನಗಳು ಮತ್ತು ಮುಸ್ಲಿಂ ದೇಶಗಳಿಗೆ ರಫ್ತಿಗೆ ಸೀಮಿತವಾಗಿತ್ತು. ಆದರೆ ಈಗ ಭಾರತದಲ್ಲಿ ಅಕ್ಕಿಹಿಟ್ಟು, ಸಕ್ಕರೆ, ಚಾಕೊಲೇಟ್​, ಬಿಸ್ಕೆಟ್ ಇತರೆ ದಿನನಿತ್ಯದ ಉತ್ಪನ್ನ, ಔಷಧಿಗಳು, ಸೌಂದರ್ಯವರ್ಧಕಗಳು, ಹೀಗೆ ವಿವಿಧ ಉತ್ಪನ್ನಗಳು ಹಲಾಲ್ ಪ್ರಮಾಣಿಕೃತ ಆಗತೊಡಗಿದೆ. ಆದ್ದರಿಂದ ಹಿಂದೂಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವಾಗ ಹಲಾಲ್ ಪ್ರಮಾಣಿತ ವಸ್ತು ನಾವು ಖರೀದಿಸುತ್ತಿಲ್ಲವಲ್ಲ ಎಂದು ಪರಿಶೀಲಿಸಿಯೇ ಕೊಳ್ಳಬೇಕು" ಎಂದಿದ್ದಾರೆ.

"ಭಾರತ ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇರುವಾಗ ಹಲಾಲ್ ಪ್ರಮಾಣಿಕೃತ ವ್ಯವಸ್ಥೆಯ ಅವಶ್ಯಕತೆ ಕಾಣುವುದಿಲ್ಲ. ಆದರೆ ಭಾರತದಲ್ಲಿ ಇಂದು ತುಂಬಾ ವ್ಯಾಪಕ ಪ್ರಮಾಣದಲ್ಲಿ ಹಲಾಲ್ ವ್ಯವಸ್ಥೆ ಜಾರಿಯಲ್ಲಿರುವುದು ಗಮನಕ್ಕೆ ಬರುತ್ತಿದೆ. ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಅಧಿಕೃತವಾಗಿ ನಿರ್ಬಂಧಿಸಲಾಗಿದೆ. ಹಲಾಲ್ ಜಿಹಾದ್ ಒಂದು ಆರ್ಥಿಕ ಯುದ್ಧವಾಗಿದೆ. ಇದು ಭಾರತೀಯರಿಗೆ ಗಂಭೀರ ಸಮಸ್ಯೆಯಾಗಿದೆ" ಎಂದು ಹೇಳಿದ್ದಾರೆ.

"ಒಂದು ವೇಳೆ ಈ ಅರ್ಥವ್ಯವಸ್ಥೆಯು ಜಗತ್ತನ್ನು ಅಸ್ಥಿರಗೊಳಿಸಲು ಬಯಸುವ ಜಿಹಾದಿಗಳ ಪಾಲಾದರೆ, ಇದರ ಪರಿಣಾಮಗಳು ಭೀಕರವಾಗಬಹುದು. ಹೀಗಾಗಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸೇರಿದಂತೆ ಸಮಸ್ತ ಹಿಂದೂ ಸಂಘಟನೆಗಳು ಒಟ್ಟಾಗಿ ಈ ಬಾರಿಯ ದೀಪಾವಳಿಯನ್ನು ಹಲಾಲ್ ರಹಿತ ದೀಪಾವಳಿಯಾಗಿ ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಭಿಯಾನದ ಅಂತರ್ಗತ ಇದುವರೆಗೆ ಮಂಗಳೂರಿನಲ್ಲಿ ಜಾಗೃತಿ ಆಂದೋಲನ ನಡೆಸಲಾಗಿದೆ. ಇನ್ನು ಧಾರವಾಡ, ಉಡುಪಿ, ತುಮಕೂರು, ಬೆಂಗಳೂರು ಹೀಗೆ ರಾಜ್ಯಾದ್ಯಂತ ಈ ಅಭಿಯಾನ ನಡೆಯಲಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನಂಬಿ ಬಂದವರಿಗೆ ಸುಖ, ಸಮೃದ್ಧಿ ಕರುಣಿಸುವ ಹಾಸನಾಂಬೆ; ಇಲ್ಲಿದೆ ದೇವಿಯ ಇತಿಹಾಸ!

ABOUT THE AUTHOR

...view details