ಬೆಂಗಳೂರು: 'ಹೆಚ್.ಡಿ. ಕುಮಾರಸ್ವಾಮಿ ಫಿಲ್ಮ್ ಸ್ಟೈಲ್ನಲ್ಲಿ ಮಾತಾನಾಡುತ್ತಾರೆ. ಗೋಡಂಬಿ ದ್ರಾಕ್ಷಿಗೆ ಕರಿತೀವಾ ಅವರನ್ನು' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಸರ್ವಪಕ್ಷ ಸಭೆಗೆ 'ದ್ರಾಕ್ಷಿ ಗೋಡಂಬಿ ತಿನ್ನೋಕೆ ಬರಬೇಕಿತ್ತಾ' ಎಂಬ ಹೆಚ್.ಡಿ.ಕೆ. ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, "ಹಾಗಾದರೆ ಸರ್ವಪಕ್ಷ ಸಭೆಗೆ ಅವರ ಪಕ್ಷದವರನ್ನು ಯಾಕೆ ಕಳಿಸಿದ್ದರು. ಅವರಿಗೆ ರಾಜಕಾರಣ ಬಿಟ್ಟರೆ ರಾಜ್ಯದ ಹಿತದ ಬಗ್ಗೆ, ಕಾವೇರಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬರೀ ಟೀಕೆ ಮಾಡೋವುದು ಆರೋಪ ಮಾಡೋದು, ಹಿಟ್ ಅಂಡ್ ರನ್ ಮಾಡೋದು ಅಷ್ಟೇ ಅವರ ಕೆಲಸ. ನನ್ನ ಮೇಲೆ ಅಸೂಯೆ ಅಷ್ಟೇ, ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಅದು. ಅದಕ್ಕೆ ನಾನು ಅಸೆಂಬ್ಲಿಯಲ್ಲೋ ಡಿಬೇಟ್ ಮಾಡೋಣ ಅಂತ ಕರಿಯುತ್ತಿದ್ದೆ. ಈ ಸಲವಾದರು ಸಿಗುತ್ತಾರಾ ಎಂದು ಕಾದುಕೊಂಡಿದ್ದೆ. ಆದರೆ ಈ ಸಲವೂ ಸಿಗಲಿಲ್ಲ. ಹೋದ ಸಲವೂ ಬರಲಿಲ್ಲ" ಎಂದು ವ್ಯಂಗ್ಯವಾಡಿದರು.