ಕರ್ನಾಟಕ

karnataka

ETV Bharat / state

ಮಹಾಕುಂಭ ಮೇಳದಲ್ಲಿ ಬೆಳಗಾವಿಯ ತಾಯಿ-ಮಗಳು ಸಾವು: ಮಧ್ಯರಾತ್ರಿ ಮೃತದೇಹಗಳ ಆಗಮನ, ಡಿಸಿ ನಮನ - MOTHER AND DAUGHTER DEAD BODY

ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನಕ್ಕೂ ಮುನ್ನ ಸಂಭವಿಸಿದ ಭಾರಿ ಕಾಲ್ತುಳಿತದಲ್ಲಿ ಮೃತಪಟ್ಟ ತಾಯಿ ಮತ್ತು ಮಗಳ ಮೃತದೇಹ ಕಳೆದ ರಾತ್ರಿ ಬೆಳಗಾವಿಗೆ ಬಂದಿದ್ದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

PRAYAGRAJ STAMPEDE DEATH RATE  BELAGAVI  MAHAKUMBH 2025  PRAYAGRAJ STAMPEDE BELAGAVI VICTIMS
ಮೃತದೇಹಗಳಿಗೆ ಅಂತಿಮ ಗೌರವ ಸಲ್ಲಿಸಿದ ಡಿಸಿ (ETV Bharat)

By ETV Bharat Karnataka Team

Published : Jan 31, 2025, 9:11 AM IST

ಬೆಳಗಾವಿ: ಪ್ರಯಾಗ್​ರಾಜ್​ ಮಹಾಕುಂಭ ಮೇಳದಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿ ವಡಗಾವಿಯ ಜ್ಯೋತಿ ಹತ್ತರವಾಟ ಮತ್ತು ಅವರ ಪುತ್ರಿ ಮೇಘಾ ಅವರ ಮೃತದೇಹಗಳನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಳೆದ ರಾತ್ರಿ ಬರಮಾಡಿಕೊಂಡರು.

ಬೆಳಗಾವಿಯ ತಾಯಿ-ಮಗಳ ಮೃತದೇಹಗಳಿಗೆ ಡಿಸಿ ನಮನ (ETV Bharat)

ಮಧ್ಯರಾತ್ರಿ ಆಗಮಿಸಿದ ತಾಯಿ-ಮಗಳ ಪಾರ್ಥಿವ ಶರೀರಗಳಿಗೆ ಜಿಲ್ಲಾಧಿಕಾರಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶೇಷ ಜಿಲ್ಲಾಧಿಕಾರಿ ಹರ್ಷಾ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಉಪಸ್ಥಿತರಿದ್ದು, ಗೌರವ ಸಲ್ಲಿಸಿದರು.

ದೆಹಲಿಯಿಂದ ಗೋವಾಗೆ ವಿಮಾನದಲ್ಲಿ ಪಾರ್ಥಿವ ಶರೀರಗಳನ್ನು ತರಲಾಯಿತು. ಬಳಿಕ ಗೋವಾದಿಂದ ಬೆಳಗಾವಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು. ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಜಿಲ್ಲಾಡಳಿತ ಶವಗಳನ್ನು ಹಸ್ತಾಂತರಿಸಿತು.

ಇದನ್ನೂ ಓದಿ:ಮಹಾಕುಂಭ ಮೇಳ ಕಾಲ್ತುಳಿತ : ಇಬ್ಬರ ಮೃತದೇಹ ನೇರವಾಗಿ, ಇನ್ನಿಬ್ಬರ ಶವ ಗೋವಾ ಮೂಲಕ‌ ಬೆಳಗಾವಿಗೆ : ಜಿಲ್ಲಾಧಿಕಾರಿ

ABOUT THE AUTHOR

...view details