ಕರ್ನಾಟಕ

karnataka

ETV Bharat / state

ದಾವಣಗೆರೆ ಅಭಿವೃದ್ಧಿ ವಿಚಾರ: ಬಿಜೆಪಿ ಕಾಂಗ್ರೆಸ್ ನಡುವೆ ವಾಕ್ಸಮರ - Lok Sabha Election 2024 - LOK SABHA ELECTION 2024

ದಾವಣಗೆರೆ ಲೋಕಸಭಾ ಚುನಾವಣೆ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ನಡುವೆ ಅಭಿವೃದ್ಧಿ ವಿಚಾರವಾಗಿ ಆರೋಪ ಪ್ರತ್ಯಾರೋಪ ನಡೆದಿದೆ.

Congress candidate Prabha Mallikarjun, BJP candidate Gayatri Siddeshwar
ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌, ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್

By ETV Bharat Karnataka Team

Published : May 2, 2024, 1:20 PM IST

Updated : May 2, 2024, 1:40 PM IST

ಬಿಜೆಪಿ ಕಾಂಗ್ರೆಸ್ ನಡುವೆ ವಾಕ್ಸಮರ

ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಖಾಡ ರಂಗೇರುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದಾವಣಗೆರೆ ಅಭಿವೃದ್ಧಿ ಬಗ್ಗೆ ಸವಾಲಿಗೆ ಪ್ರತಿ ಸವಾಲ್ ರಾಜಕೀಯ ಶುರುವಾಗಿದೆ. ಉಸ್ತುವಾರಿ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್‌ ಅವರು ದಾವಣಗೆರೆಗೆ ಏನು ಕೊಡುಗೆ ಕೊಟ್ಟಿದ್ದಾರೆ, ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಎಂಎಲ್​​​​​​ಸಿ ರವಿಕುಮಾರ್ ಸವಾಲು ಹಾಕಿದ್ದಾರೆ.

ಇದೀಗ ಕಾಂಗ್ರೆಸ್​​​ನ ಕಲಿಗಳು ಬಿಜೆಪಿ ಮೇಲೆ ಮುಗಿಬಿದ್ದಿದ್ದಾರೆ. ಕುಂದವಾಡ ಕೆರೆ, ಟಿವಿ ಸ್ಟೇಷನ್ ಕೆರೆ ಕಟ್ಟಿಸಿ ನೀರು ನೀಡಿದ ಜಲದಾತ, ಇಡೀ ದಾವಣಗೆರೆಯನ್ನು ಅಭಿವೃದ್ಧಿ ಪಡಿಸಿದ್ದು ಮಲ್ಲಿಕಾರ್ಜುನ್​​ ಅವರು ಎಂದು ಕಾಂಗ್ರೆಸ್​​​ನವರು ಕುಟುಕುತ್ತಿದ್ದಾರೆ. ಇದಲ್ಲದೇ ಸವಾಲು ಹಾಕಿದ್ದ ಎಂಎಲ್​​ಸಿ ರವಿಕುಮಾರ್​ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ್‌ ಕೂಡ ತಿರುಗೇಟು ನೀಡಿದ್ದಾರೆ. ದಾವಣಗೆರೆಗೆ ನಿಮ್ಮ ಸಂಸದರ ಕೊಡುಗೆ ಏನೂ ಎಂದು ಪ್ರಶ್ನಿಸಿದ್ದಾರೆ.

ಜಿಎಂ ಸಿದ್ದೇಶ್ವರ್ ಮಾಡಿದ ಅಭಿವೃದ್ಧಿ ಏನು?: ಪ್ರಭಾ ಮಲ್ಲಿಕಾರ್ಜುನ್‌;ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರು ಹಲವು ಬಾರಿ ಆಯ್ಕೆಯಾಗಿದ್ದಾರೆ, ಇಪ್ಪತ್ತೈದು ವರ್ಷಗಳಿಂದ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಆರೋಪಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮೆಲೇಬೆನ್ನೂರು ಬಳಿಯ ಕೋಮಾರನಹಳ್ಳಿಯಲ್ಲಿ ಮತಪ್ರಚಾರ ಮಾಡಿದರು. ಪ್ರಚಾರದ ವೇಳೆ ಅಂಗಡಿಯೊಂದರಲ್ಲಿ ಮಿರ್ಚಿ ಮಂಡಕ್ಕಿ ಸವಿದರು. ಅಲ್ಲದೇ ಜನಸಾಮಾನ್ಯರಂತೆ ಮತದಾರರೊಂದಿಗೆ ಕುಳಿತು ಮಿರ್ಚಿ ಮಂಡಕ್ಕಿ ಸವಿಯುತ್ತಾ ಮತ ಪ್ರಚಾರ ನಡೆಸಿದರು.

ಸಚಿವರ ವಿರುದ್ಧ ಗಾಯಿತ್ರಿ ಸಿದ್ದೇಶ್ವರ್ ವಾಗ್ದಾಳಿ:ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಕೂಡ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಜನ ನೋಡೇ ಇಲ್ಲ, ಉತ್ತರ ದಕ್ಷಿಣ ಮತ ಕ್ಷೇತ್ರಕ್ಕೆ ಮಾತ್ರ ಸೀಮಿತ ಆಗಿದ್ದಾರೆ. ಇಡೀ ಕ್ಷೇತ್ರದಲ್ಲಿ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಹುಡುಕಬೇಕು? ಅದ್ರೇ ಅವರನ್ನು ಜನರು ಮರೆತು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂಓದಿ:ಪ್ರಜ್ವಲ್ ಪರಾರಿ ಆಗುವರೆಗೆ ರಾಜ್ಯ ಸರ್ಕಾರ ಮಲಗಿತ್ತಾ? ಈ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ: ಬಸವನಗೌಡ ಯತ್ನಾಳ್ - Lok Sabha Election 2024

Last Updated : May 2, 2024, 1:40 PM IST

ABOUT THE AUTHOR

...view details