ದಾವಣಗೆರೆ:ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮಾಡಲಾಯಿತು. ಹರಿಹರ ತಾಲೂಕಿನ ಸಾಕಷ್ಟು ಕಡೆ ಒಳ್ಳೆಯ ಮಳೆಯಾಗಿದೆ. ಅದರೆ, ಹೊಳೆಸಿರಿಗೆರೆ ಗ್ರಾಮದಲ್ಲಿ ಈವರೆಗೂ ಸಮರ್ಪಕ ಮಳೆಯಾಗಿಲ್ಲ. ಭೀಕರ ಬರಗಾಲ ಆವರಿಸಿದೆ. ಹೀಗೆ ಮಾಡಿದರೆ ಮಳೆ ಬರುತ್ತದೆಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಆ ನಂಬಿಕೆಯಿಂದ ಕತ್ತೆಗಳ ಮದುವೆ ಮಾಡುದ್ದೇವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಲೇಶ್ ಕಣೇಕಲ್.
ಬರಗಾಲದಿಂದ ಬೇಸತ್ತ ರೈತರು: ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು - Donkeys Marriage
Published : May 13, 2024, 1:49 PM IST
ಬರಗಾಲದಿಂದ ಬೇಸತ್ತ ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದ ರೈತರು, ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದರು.
![ಬರಗಾಲದಿಂದ ಬೇಸತ್ತ ರೈತರು: ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು - Donkeys Marriage DONKEYS MARRIAGE](https://etvbharatimages.akamaized.net/etvbharat/prod-images/13-05-2024/1200-675-21457099-thumbnail-16x9-etvbharat.jpg)
ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು (ETV Bharat)
ಮದುವೆಗೂ ಮುನ್ನ ಕತ್ತೆಗಳನ್ನು ಮದುಮಕ್ಕಳಂತೆ ಶೃಂಗಾರ ಮಾಡಿದ್ದ ಗ್ರಾಮಸ್ಥರು, ಅವುಗಳಿಗೆ ಬಾಸಿಂಗ ಕಟ್ಟಿ, ಕೊರಳಿಗೆ ಹೂಮಾಲೆ ಹಾಕುವ ಮೂಲಕ ಗ್ರಾಮದಲ್ಲಿ ಮೆರವಣಿಗೆ ಸಹ ಮಾಡಿದರು. ಬಳಿಕ ಶ್ರೀಯೋಗಿ ನಾರಾಯಾಣ ದೇವಸ್ಥಾನದಲ್ಲಿ ಶಾಸ್ರೋಕ್ತವಾಗಿ ಮದುವೆ ಮಾಡಿಸಿದರು. ಬಳಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಮಳೆಗಾಗಿ ಪ್ರಾರ್ಥಿಸಿದರು.