ಕರ್ನಾಟಕ

karnataka

ETV Bharat / state

ದಾವಣಗೆರೆ: ಬಿಡಿಎ ಮಾದರಿಯಲ್ಲೇ ಅಪಾರ್ಟ್​ಮೆಂಟ್ ನಿರ್ಮಿಸಲು ಮುಂದಾದ ದುಡಾ

ದಾವಣಗೆರೆಯಲ್ಲಿ ಬಿಡಿಎ ಮಾದರಿಯಲ್ಲಿ ಅಪಾರ್ಟ್​ಮೆಂಟ್ ನಿರ್ಮಿಸಲು ನಿರ್ಧರಿಸಿರುವುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ETV Bharat)

By ETV Bharat Karnataka Team

Published : 4 hours ago

ದಾವಣಗೆರೆ:ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ(ದುಡಾ) ಲೇಔಟ್ ಮಾಡಲು ಜಮೀನಿಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಸೂಕ್ತ ಬೆಲೆಯಲ್ಲಿ ಜಮೀನು ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿರ್ಮಿಸಿವ ಅಪಾರ್ಟ್​ಮೆಂಟ್​ಗಳಂತೆಯೇ ದಾವಣಗೆರೆಯಲ್ಲಿ ದುಡಾ ವತಿಯಿಂದ ಅಪಾರ್ಟ್​ಮೆಂಟ್​ಗಳನ್ನು ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿರ್ಧಾರ ಕೈಗೊಂಡಿದ್ದಾರೆ.

ಇದರಿಂದ ಕಡಿಮೆ ದರದಲ್ಲಿ ಸೂರು ಸಿಗುವಂತಾಗಬೇಕು ಎಂಬ ಮಧ್ಯಮ ವರ್ಗದವರ ಆಸೆ ಈಡೇರುವ ಕಾಲ ಹತ್ತರ ಬಂದಂತಾಗಿದೆ. ಈ ಕುರಿತು ಇತ್ತೀಚೆಗೆ ದೂಡಾ ಕಚೇರಿಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ದುಡಾ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿಕೆ (ETV Bharat)

ಈ ಕುರಿತು ಮಾತನಾಡಿರುವ ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ್, "ಅಪಾರ್ಟ್​ಮೆಂಟ್ ನಿರ್ಮಾಣ ಮಾಡಲು ದುಡಾ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಅಪಾರ್ಟ್​ಮೆಂಟ್​ಗಳು ದಾವಣಗೆರೆ ನಗರದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಿಸಲು ಆದೇಶಿಸಲಾಗಿದೆ. ಅಪಾರ್ಟ್​ಮೆಂಟ್ ನಿರ್ಮಾಣ ಮಾಡಿ ಕೈಗೆಟುಕುವ ದರದಲ್ಲಿ ದೂಡದಿಂದಲೇ ಮಾಧ್ಯಮ ವರ್ಗದ ಜನರಿಗೆ ಮಾರಾಟ ಮಾಡಬೇಕು" ಎಂದು ತಿಳಿಸಿದರು.

ಹೊಸ ಬಡಾವಣೆ ನಿರ್ಮಿಸಲು ಚಿಂತನೆ:ಸರ್ಕಾರಿ ಅಪಾರ್ಟ್​ಮೆಂಟ್ ಅಲ್ಲದೆ ದಾವಣಗೆರೆ ನಗರದಲ್ಲಿ ದೂಡದಿಂದ ನೂತನ ಬಡಾವಣೆಗಳನ್ನು ನಿರ್ಮಾಣ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಇದರಿಂದ ಬಡವರಿಗೆ ಕೈಗೆಟುಕುವ ದರದಲ್ಲಿ ನಿವೇಶನಗಳು ಸಿಗಲಿವೆ.‌ ಹರಿಹರ ಭಾಗದಲ್ಲೂ ಹೆಚ್ಚು ಅಭಿವೃದ್ಧಿ ಆಗಬೇಕು ಎಂದು ಅಧಿಕಾರಿಗಳಿಗೆ ಸಚಿವ ಎಸ್​.ಎಸ್​. ಮಲ್ಲಿಕಾರ್ಜುನ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ದಾವಣಗೆರೆ - ತುಮಕೂರು ನೇರ ಮಾರ್ಗ: ರೈಲು ನೋಡದವರಿಗೂ ಟ್ರೈನ್ ಭಾಗ್ಯ, ಮೂರು ಜಿಲ್ಲೆಗಳ ಈ ಊರುಗಳಿಗೆ ಹೊಸ ನಿಲ್ದಾಣಗಳಿವು

ABOUT THE AUTHOR

...view details