ಕರ್ನಾಟಕ

karnataka

ದದ್ದಲ್‌ ಮಾಜಿ ಪಿಎ ಪಂಪಣ್ಣ ಮನೆ ತಪಾಸಣೆ ಮುಕ್ತಾಯ: ಹೆಚ್ಚಿನ ವಿಚಾರಣೆಗಾಗಿ ಇಡಿ ವಶಕ್ಕೆ - ED Raid

By ETV Bharat Karnataka Team

Published : Jul 11, 2024, 3:54 PM IST

Updated : Jul 11, 2024, 5:14 PM IST

ಬಸನಗೌಡ ದದ್ದಲ್‌ ಅವರ ಮಾಜಿ ಪಿಎ ಪಂಪಣ್ಣ ಮನೆ ತಪಾಸಣೆ ಮುಕ್ತಾಯಗೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ಇಡಿ ವಶಕ್ಕೆ ಪಡೆದಿದೆ.

ED RAID
ಮಾಜಿ ಪಿಎ ಪಂಪಣ್ಣ (ETV Bharat)

ಇಡಿ ಅಧಿಕಾರಿಗಳ ತಪಾಸಣೆ (ETV Bharat)

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಮಾಜಿ ಪಿಎ ಪಂಪಣ್ಣನ ಮನೆಯಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನಡೆಸಿದ ತಪಾಸಣೆ ಇದೀಗ ಮುಕ್ತಾಯಗೊಂಡಿದೆ.

ತಪಾಸಣೆ ಬಳಿಕ ಪಂಪಣ್ಣನನ್ನ ವಶಕ್ಕೆ ಪಡೆದ ಇಡಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಅವರೊಂದಿಗೆ ಕರೆದುಕೊಂಡು ಹೋದರು. ಫ್ಲ್ಯಾಟ್​ನ ಬೀಗ ಹಾಕಿದ ಪಂಪಣ್ಣ, ಇಡಿ ಅಧಿಕಾರಿಗಳ ಜೊತೆಗೆ ಹೊರಟು ಹೋದರು. ಸ್ಕ್ಯಾನರ್, ಪ್ರಿಂಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನ ಸಹ ಅಧಿಕಾರಿಗಳು ತೆಗೆದುಕೊಂಡ ಹೋದರು.

ಇನ್ನೂ ಜಾರಿ ನಿರ್ದೇಶನಾಲಯದ ದಾಳಿಯ ಬಿಸಿ ದದ್ದಲ್ ಪತ್ನಿಯ ಸಂಬಂಧಿಗಳಿಗೂ ತಟ್ಟಿದೆ. ದದ್ದಲ್ ಪತ್ನಿಯ ಸಹೋದರಿಯನ್ನು ಹೆಚ್ಚಿನ ವಿಚಾರಣೆಗಾಗಿ ಜಿಲ್ಲೆಯ ದೇವದುರ್ಗದ ಗಲಗ ಗ್ರಾಮದಿಂದ ರಾಯಚೂರಿಗೆ ಕರೆ ತಂದಿದ್ದಾರೆ. ಸುಮಾರು 140 ಕಿ.ಮೀ ದೂರ ಪ್ರಯಾಣಿಸಿ ದದ್ದಲ್ ಸಂಬಂಧಿಗಳನ್ನು ಕರೆ ತಂದು ವಿಚಾರಣೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಅಧಿಕಾರಿಗಳು, ಇಂಜಿನಿಯರ್‌ಗಳ ಮನೆಗಳ ಮೇಲೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ - Lokayukta Raid

Last Updated : Jul 11, 2024, 5:14 PM IST

ABOUT THE AUTHOR

...view details