ಕರ್ನಾಟಕ

karnataka

ETV Bharat / state

ಉಪಚುನಾವಣೆ ಪ್ರಚಾರಕ್ಕಾಗಿ: ಸಂಡೂರಲ್ಲಿ ಜನಾರ್ದನ ರೆಡ್ಡಿ ಗೃಹ ಪ್ರವೇಶ

ಸಂಡೂರು ಉಪಚುನಾವಣಾ ಕಣ ರಂಗೇರುತ್ತಿದೆ. ಜನಾರ್ದನ ರೆಡ್ಡಿ ಸಂಡೂರಲ್ಲೇ ನೂತನ ಮನೆ ಮಾಡಿ, ಇಂದು ಗೃಹ ಪ್ರವೇಶ ನೆರವೇರಿಸಿದರು.

By ETV Bharat Karnataka Team

Published : 4 hours ago

ಸಂಡೂರಲ್ಲಿ ಜನಾರ್ದನ ರೆಡ್ಡಿ ನೂತನ ಮನೆಯಲ್ಲಿ ಪೂಜೆ
ಸಂಡೂರಲ್ಲಿ ಜನಾರ್ದನ ರೆಡ್ಡಿ ನೂತನ ಮನೆಯಲ್ಲಿ ಪೂಜೆ (ETV Bharat)

ಬಳ್ಳಾರಿ:ಕಾಂಗ್ರೆಸ್​ನಈ.ತುಕಾರಾಂ ರಾಜೀನಾಮೆಯಿಂದ ತೆರವಾದ ಸಂಡೂರು ವಿಧಾಸನಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ಎನ್‌ಡಿಎ ಮೈತ್ರಿ ಮತ್ತು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿವೆ.

ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರಲ್ಲಿ ಈ ಬಾರಿ ಕಮಲ ಅರಳಿಸಲು ಬಿಜೆಪಿ ನಾಯಕರು ರಣತಂತ್ರ ಹೆಣೆದಿದ್ದಾರೆ. ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲು ಸಂಡೂರಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ತಾತ್ಕಾಲಿಕವಾಗಿ ಮನೆ ಮಾಡಿದ್ದಾರೆ. ಈ ನೂತನ ಮನೆಗೆ ಇಂದು ಗೃಹ ಪ್ರವೇಶ ಕೂಡ ಮಾಡಿದ್ದಾರೆ.

ಸಂಡೂರಲ್ಲಿ ಜನಾರ್ದನ ರೆಡ್ಡಿ ನೂತನ ಮನೆಯಲ್ಲಿ ಪೂಜೆ (ETV Bharat)

ಪತ್ನಿ ಅರುಣಾಲಕ್ಷ್ಮೀ, ಸಹೋದರ ಸೋಮಶೇಖರ್ ರೆಡ್ಡಿ ಸೇರಿದಂತೆ ಪಕ್ಷದ ಬೆಂಬಲಿಗರ ಜೊತೆ ಸೇರಿ ನೂತನ ಮನೆಯಲ್ಲಿ ರೆಡ್ಡಿ ವಿಶೇಷ ಪೂಜೆ ಮಾಡಿಸಿದರು. ಈ ಮೂಲಕ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಯಾರಿಗೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಹಾಗೆಯೇ ಕಾಂಗ್ರೆಸ್ ಕೂಡಾ ಅಭ್ಯರ್ಥಿಯನ್ನು ಈವರೆಗೆ ಘೋಷಿಸಿಲ್ಲ. ಆದರೂ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಈ ಬಾರಿ ರೆಡ್ಡಿ ಸಹೋದರರು ಒಂದಾಗಿ ಪ್ರಚಾರದಲ್ಲಿ ಭಾಗಿಯಾಗುವುದರಿಂದ ಚುನಾವಣಾ ಕಣ ರಂಗೇರಲಿದೆ. ಈ ಮೂಲಕ ಕಾಂಗ್ರೆಸ್​ಗೆ ಠಕ್ಕರ್ ನೀಡಲು ಬಿಜೆಪಿ ಮುಂದಾಗಿದೆ.

ಇದನ್ನೂ ಓದಿ:ಉಪಚುನಾವಣೆ: ಎನ್​ಡಿಎ ನಾಯಕರಿಗೆ ಸವಾಲಾದ ಅಭ್ಯರ್ಥಿಗಳ ಆಯ್ಕೆ, ಹೇಗಿದೆ ಪೈಪೋಟಿ?

ABOUT THE AUTHOR

...view details