ಕರ್ನಾಟಕ

karnataka

ETV Bharat / state

ಬೆಂಗಳೂರು ಓಪನ್‌ ಟೆನಿಸ್‌ ಇಂದಿನಿಂದ : ಪ್ರಜ್ವಲ್‌, ರಾಮಕುಮಾರ್‌, ಮಾನಸ್ ಧಾಮನೆ ಮೇಲೆ ನಿರೀಕ್ಷೆ - OPEN TENNIS TOURNAMENT

ಕೆಎಸ್‌ಎಲ್‌ಟಿಎನಲ್ಲಿ 9ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಆರಂಭವಾಗಲಿದ್ದು, ಭಾರತದ ರಾಮಕುಮಾ‌ರ್ ರಾಮನಾಥನ್‌, ಎಸ್.ಡಿ. ಪ್ರಜ್ವಲ್, ಮಾನಸ್ ಧಾಮನೆ ಅವರು ಟೂರ್ನಿಯಲ್ಲಿ ಸುಧಾರಿತ ಆಟ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

TENNIS TOURNAMENT
ಸಂಗ್ರಹ ಚಿತ್ರ (IANS)

By ETV Bharat Karnataka Team

Published : Feb 24, 2025, 12:30 PM IST

ಬೆಂಗಳೂರು : ಇಂದಿನಿಂದ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ)ನಲ್ಲಿ 9ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಆರಂಭವಾಗಲಿದೆ. ಮಾರ್ಚ್ 2ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಭಾರತದ ರಾಮಕುಮಾ‌ರ್ ರಾಮನಾಥನ್‌, ಎಸ್.ಡಿ. ಪ್ರಜ್ವಲ್, ಮಾನಸ್ ಧಾಮನೆ ಮತ್ತಿತರ ಪ್ರಮುಖ ಆಟಗಾರರು ಕಣದಲ್ಲಿದ್ದಾರೆ.

ಜಪಾನಿನ 7ನೇ ಶ್ರೇಯಾಂಕದ ಶಿಂಟರೊ ಮೊಚಿಜುಕಿ ಅವರನ್ನು ರಾಮಕುಮಾರ್ ರಾಮನಾಥನ್ ಎದುರಿಸಲಿದ್ದಾರೆ. ಎಸ್.ಡಿ. ಪ್ರಜ್ವಲ್ ದೇವ್ ಅವರು ಜೆಕ್ ರಿಪಬ್ಲಿಕ್‌ನ ಮರೆಕ್ ಗೆಂಗೆಲ್ ಅವರನ್ನು ಹಾಗೂ ಮತ್ತೋರ್ವ ಉದಯೋನ್ಮುಖ ಆಟಗಾರ ಮಾನಸ್ ಧಾಮನೆ ಅರ್ಹತಾ ಸುತ್ತಿನಿಂದ ಬರಲಿರುವ ಆಟಗಾರನನ್ನು ಎದುರಿಸಲಿದ್ದಾರೆ.

ಬೆಂಗಳೂರಿನ ರಿಷಿ ರೆಡ್ಡಿ ಅವರು ಶಶಿಕುಮಾರ್ ಮುಕುಂದ್‌ ಅವರ ಸವಾಲಿಗೆ ಸಿದ್ಧರಾಗಿದ್ದಾರೆ. ಕೂಟದ ಅಗ್ರ ಶ್ರೇಯಾಂಕಿತ ವಿಕ್ಟ‌ರ್ ಕೊಪ್ರಿವಾ ಅರ್ಹತಾ ಸುತ್ತಿನಲ್ಲಿ ಗೆದ್ದು ಮೇಲೇರಿದ ಆಟಗಾರನನ್ನು ಎದುರಿಸಲಿದ್ದಾರೆ. 2ನೇ ಶ್ರೇಯಾಂಕಿತ ಟ್ರಿಸ್ಟನ್ ಶೂಲ್‌ಕೇಟ್ ಕುಮೊಯೂನ್ ಸುಲ್ತಾನೊವ್ ವಿರುದ್ಧ ಸೆಣಸಾಡಲಿದ್ದಾರೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿ 51ನೇ ಶತಕ: ಪಾಕ್​ ಮಣಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಭಾರತ - INDIA BEAT PAKISTAN

ABOUT THE AUTHOR

...view details