ಕರ್ನಾಟಕ

karnataka

ETV Bharat / state

ನೇರಳೆ ಮಾರ್ಗದ ಮೇಲೆ ಬಿದ್ದ ಮರ, ಈಗ ಸಂಚಾರಕ್ಕೆ ಮುಕ್ತ: ಮರ ತೆರವು ಯಶಸ್ವಿ ಎಂದ ಬಿಎಂಆರ್​ಸಿಎಲ್​

ನೇರಳೆ ಮಾರ್ಗದಲ್ಲಿ ಉಂಟಾಗಿದ್ದ ಅಡಚಣೆ ಶಮನವಾಗಿದ್ದು, ಮರ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ. ಬೆಳಗ್ಗೆ 8.05ರಿಂದ ಈ ಮಾರ್ಗವೂ ಸಂಚಾರಕ್ಕೆ ಮುಕ್ತವಾಗಿದೆ

By ANI

Published : 10 hours ago

bengaluru-metro-services-on-purple-line-restored-after-brief-disruption
ನೇರಳೆ ಮಾರ್ಗದಲ್ಲಿ ಬಿದ್ದ ಮರ (ANI)

ಬೆಂಗಳೂರು:ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸಿಲಿಕಾನ್​ ಸಿಟಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಈ ನಡುವೆ ಮರವೊಂದು ಉರುಳಿ ಬಿದ್ದ ಪರಿಣಾಮ ಮೆಟ್ರೋ ನೆರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿತ್ತು. ತಕ್ಷಣಕ್ಕೆ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಇದರ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು,ಈಗ ಸಂಚಾರಕ್ಕೆ ಮುಕ್ತವಾಗಿದೆ.

ಬಿಎಂಆರ್​ಸಿಎಲ್​ ಮೊದಲ ಪೋಸ್ಟ್​ನಲ್ಲಿ ಏನಿತ್ತು:ಈ ಕುರಿತು ಬಿಎಂಆರ್​ಸಿಎಲ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ನೆರಳೆ ಮಾರ್ಗದ ಜಳಿ ಮೇಲೆ ಮರ ಬಿದ್ದ ಪರಿಣಾಮ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿತ್ತು. ಇಂದು 6.15ಕ್ಕೆ ಮೆಟ್ರೋ ರೈಲುಗಳು ಕೇವಲ ಇಂದಿರಾನಗರ - ಚಲ್ಲಘಟ್ಟ ಮತ್ತು ಬೈಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​​ವರೆಗೆ ಸಾಗಲಿದೆ. ಎಸ್​ವಿ ರೋಡ್​ ಮತ್ತು ಇಂದಿರಾನಗರ ಸಂಪರ್ಕದ ಸಂಚಾರ ಇರುವುದಿಲ್ಲ. ಈ ಮಾರ್ಗದಲ್ಲಿ ಮರ ಬಿದ್ದ ಕಾರಣ ತಾತ್ಕಲಿಕ ಸಂಚಾರ ನಿಲ್ಲಿಸಲಾಗಿದ್ದು, ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಎಂಆರ್​ಸಿಎಲ್ ಈ ಮೊದಲು​ ತಿಳಿಸಿತ್ತು.

ಸಂಚಾರಕ್ಕೆ ಮುಕ್ತ ಎಂದು 2ನೇ ಪೋಸ್ಟ್​:ಇದಾದ ಎರಡು ಗಂಟೆ ಬಳಿಕ ಮತ್ತೊಂದು ಪೋಸ್ಟ್​ ಮಾಡಿರುವ ಬಿಎಂಆರ್​ಸಿಎಲ್​, ನೇರಳೆ ಮಾರ್ಗದಲ್ಲಿ ಉಂಟಾಗಿದ್ದ ಅಡಚಣೆ ಶಮನವಾಗಿದ್ದು, ಮರ ತೆರವುಗೊಳಿಸಲಾಗಿದೆ. ಬೆಳಗ್ಗೆ 8.05ರಿಂದ ಈ ಮಾರ್ಗವೂ ಸಂಚಾರಕ್ಕೆ ಮುಕ್ತವಾಗಿದೆ ಎಂದು ಎಕ್ಸ್​ ಪೋಸ್ಟ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ:ಎಡೆಬಿಡದೆ ಸುರಿಯುತ್ತಿರುವ ಮಳೆ: ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ಇಂದು ರಜೆ

ABOUT THE AUTHOR

...view details