ಕರ್ನಾಟಕ

karnataka

ETV Bharat / sports

'ಕೊಹ್ಲಿ ಬ್ಯಾಟ್ ನನ್ನ ಇಮೇಜ್ ಡ್ಯಾಮೇಜ್ ಮಾಡಿತು, ಇನ್ಮುಂದೆ ಯಾರಿಗೂ ಬ್ಯಾಟ್ ಕೇಳಲ್ಲ': ರಿಂಕು ಹೀಗೆ ಹೇಳಿದ್ದು ಏಕೆ?​

ಕೊಹ್ಲಿ ಬ್ಯಾಟ್​ನಿಂದಾಗಿ ನನ್ನ ಇಮೇಜ್ ಡ್ಯಾಮೇಜ್​ ಆಗಿದೆ. ಇನ್ಮೇಲೆ ಯಾರ ಬಳಿಯೂ ಬ್ಯಾಟ್​ ಕೇಳಲ್ಲ ಎಂದು ರಿಂಕು ಸಿಂಗ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ​

By ETV Bharat Sports Team

Published : 4 hours ago

ರಿಂಕು ಸಿಂಗ್​
ರಿಂಕು ಸಿಂಗ್​ (AP)

Rinku Singh Virat Kohli Bat Incident:ಟೀಂ ಇಂಡಿಯಾದ ಯುವ ಬ್ಯಾಟರ್​ ರಿಂಕು ಸಿಂಗ್ ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದಲೇ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾರೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ20ಯಲ್ಲಿ ಇದು ಸಾಬೀತಾಗಿದೆ. ಈ ಪಂದ್ಯದಲ್ಲಿ ರಿಂಕು 29 ಎಸೆತಗಳಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದ 53ರನ್ ಚಚ್ಚಿದ್ದರು. ಇದರಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು. ಆದರೇ ಈ ಪಂದ್ಯದ ಬಳಿಕ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಿಂಕು ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

'ನನ್ನ ಇಮೇಜ್ ಹಾಳಾಗಿದೆ':ಸಂದರ್ಶನ ವೇಳೆ ಪ್ರತ್ರಕರ್ತರೊಬ್ಬರು, ಹಿಂದೊಮ್ಮೆ ನೀವು ವಿರಾಟ್ ಕೊಹ್ಲಿ ಅವರಿಗೆ ಬ್ಯಾಟ್​ ಕೇಳಿದ್ದೀರಿ, ಅಲ್ಲವೇ ಅದೇ ರೀತಿ ಯಾರದಾರು ನಿಮಗೆ ಬ್ಯಾಟ್​ಕೊಡುವಂತೆ ಕೇಳಿದ್ದಾರೆಯೇ? ಎಂದು ಪ್ರಶ್ನಿಸಿದ್ದರು. ಅದಕ್ಕೆ ರಿಂಕು ಆಸಕ್ತಿಕರವಾಗಿ ಪ್ರತಿಕ್ರಿಯೆ ನೀಡಿದ್ದು, "ಬ್ಯಾಟ್‌ ಕೇಳುವುದರಿಂದಾಗಿ ನನ್ನ ಇಮೇಜ್ ಹಾಳಾಗಿದೆ! ಅಲ್ಲದೇ ಈತ ಯಾವಗಲೂ ಪ್ರತಿಯೊಬ್ಬರ ಬಳಿ ಬ್ಯಾಟ್​ ಕೇಳುತ್ತಿರುತ್ತಾನೆ ಎಂದು ಎಲ್ಲರೂ ಮಾಡನಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾನು ಇನ್ನು ಮುಂದೆ ಯಾರ ಬಳಿಯೂ ಬ್ಯಾಟ್ ಕೇಳಲ್ಲ. ಬ್ಯಾಟ್ ಕೇಳುವುದರಿಂದಾಗಿ ನನ್ನ ಇಮೇಜ್‌ ಹಾಳಾಗಿದೆ." ಎಂದು ರಿಂಕು ಹೇಳಿದರು. ಏತನ್ಮಧ್ಯೆ, ಈ ಹಿಂದೆ ರಿಂಕು ಸಿಂಗ್, ಕೊಹ್ಲಿ ಮತ್ತು ನಿತೀಶ್ ರಾಣಾ ಅವರ ಬ್ಯಾಟ್‌ನೊಂದಿಗೆ ಪಂದ್ಯವನ್ನು ಆಡಿದ್ದರು.

ಆ ವಿಷಯ ಸೂರ್ಯಕುಮಾರ್​ಗೆ ಗೊತ್ತು:ಬಳಿಕ ಟಿ20 ನಾಯಕ ಸೂರ್ಯ ಕುಮಾರ್​ ನಿಮ್ಮನ್ನು ಬೌಲರ್ ಆಗಿಯೂ ಬಳಸಿಕೊಳ್ಳಬಹುದು ಅಲ್ಲವೇ? ಎಂದು ಕೇಳಿದ ಮತ್ತೊಂದು ಪ್ರಶ್ನೆಗೆ, "ಹೌದು. ನಾನು ಏಳು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿದ್ದೇನೆ ಮತ್ತು ಶ್ರೀಲಂಕಾ ಸರಣಿಯಲ್ಲೂ ಬೌಲಿಂಗ್ ಮಾಡಿದ್ದೇನೆ. ಇದು ಸೂರ್ಯ ಅವರಿಗೆ ತಿಳಿದಿದೆ. ವಿಕೆಟ್​ ಪಡೆಯುವ ಪರಿಸ್ಥಿತಿ ಮತ್ತು ಸಂದರ್ಭ ಎದುರಾದರೇ ನನಗೆ ಖಂಡಿತವಾಗಿ ಬಾಲಿಂಗ್​ ನೀಡುತ್ತಾರೆ." ಎಂದು ರಿಂಕು ಉತ್ತರಿಸಿದರು.

ನಂತರ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, "ನಾನು ಯಾವಾಗಲು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತೇನೆ. ಈ ವೇಳೆ ಯಾವುದೇ ಬ್ಯಾಟರ್​ ಆಗಿದ್ದರು ಅವರ ಮೇಲೆ ಸಹಜವಾಗಿ ಒತ್ತಡ ಇದ್ದೇ ಇರುತ್ತದೆ. ಸಮಯ ಮತ್ತು ಸಂದರ್ಭ ನೋಡಿ ಸಮಯಕ್ಕೆ ಅನುಗುಣವಾಗಿ ನಾನು ಬ್ಯಾಟಿಂಗ್​​ ಮಾಡುತ್ತೇನೆ. ಬಾಂಗ್ಲಾ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ದೊಡ್ಡ ಮೊತ್ತವನ್ನು ಕಲೆ ಹಾಕಬೇಕೆಂದು ಯೋಚಿಸಿರಲಿಲ್ಲ. ಸಿಂಗಲ್ಸ್​, ಡಬಲ್ಸ್​ ಮೂಲಕ ತಂಡದ ಸ್ಕೋರ್​ ಹೆಚ್ಚಿಸಬೇಕೆಂದು ಕಣಕ್ಕಿಳಿದಿದ್ದೆ. ಅಲ್ಲದೇ ನಾವು ಕೋಚ್​ ಗಂಭೀರ್​ ಅವರ ಬಳಿಯೂ ಹೇಗೆ ಬ್ಯಾಟಿಂಗ್​ ಮಾಡಬೇಕೆಂದು ಚರ್ಚೆ ಮಾಡಲ್ಲ. ಅವರು ನನ್ನ ಶೈಲಿಯಲ್ಲಿ ಆಡುವಂತೆ ಸ್ವತಂತ್ರ್ಯ ನೀಡಿದ್ದಾರೆ" ಎಂದು ರಿಂಕು ತಿಳಿಸಿದರು.

ಇದನ್ನೂ ಓದಿ:ನ್ಯೂಜಿಲೆಂಡ್​ - ಭಾರತ ಟೆಸ್ಟ್​ ಸರಣಿ ತಂಡ ಪ್ರಕಟ: ವೇಗಿ ಜಸ್ಪ್ರೀತ್​​ ಬುಮ್ರಾ ಹೆಗಲಿಗೆ ದೊಡ್ಡ ಜವಾಬ್ದಾರಿ!

ABOUT THE AUTHOR

...view details