ಕರ್ನಾಟಕ

karnataka

ETV Bharat / spiritual

ಭವಿಷ್ಯ, ಪಂಚಾಂಗ: ನಿಮಗಿಂದು ಹೂಡಿಕೆಯಲ್ಲಿ ಭಾರೀ ಲಾಭ, ಕುತಂತ್ರಿಗಳಿಂದ ದೂರವಿರಿ! - TUESDAY HOROSCOPE

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

Horoscope
ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Feb 4, 2025, 5:00 AM IST

ಪಂಚಾಂಗ:

04-02-2025, ಮಂಗಳವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ಉತ್ತರಾಯಣ

ಮಾಸ: ಪುಷ್ಯ

ಪಕ್ಷ: ಶುಕ್ಲ

ತಿಥಿ: ಸಪ್ತಮಿ

ನಕ್ಷತ್ರ: ಅಶ್ವಿನಿ

ಸೂರ್ಯೋದಯ: ಮುಂಜಾನೆ 06:44 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 12:32 ರಿಂದ 01:58 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 09:08 ರಿಂದ 09:56 ಗಂಟೆ ವರೆಗೆ ಹಾಗೂ 12:20 ರಿಂದ 01:08 ಗಂಟೆ ವರೆಗೆ

ರಾಹುಕಾಲ: ಮಧ್ಯಾಹ್ನ 03:25 ರಿಂದ 04:52 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:19 ಗಂಟೆಗೆ

ರಾಶಿ ಭವಿಷ್ಯ:

ಮೇಷ :ಹಳೆಯ, ಆತ್ಮೀಯ ನೆನಪುಗಳು ಇಂದು ನಿಮ್ಮ ಮನಸ್ಥಿತಿಯನ್ನು ನಿರ್ಧರಿಸುತ್ತವೆ, ಅವು ನೀವು ಕೆಲಸದೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂದು ತೋರುತ್ತವೆ, ಅವು ಇತರರಿಗೆ ನಿಮ್ಮ ಮಧುರವಾದ ಭಾಗವನ್ನು ಇತರರಿಗೆ ಕಾಣುವಂತೆ ಮಾಡುತ್ತವೆ. ನೀವು ಹಣದೊಂದಿಗೆ ಜಾಗರೂಕತೆ ವಹಿಸುತ್ತೀರಿ ಮತ್ತು ಅದನ್ನು ಉಳಿಸುವ ಕುರಿತು ಪ್ರಯತ್ನಿಸುತ್ತೀರಿ.

ವೃಷಭ : ಇಂದು ನೀವು ಅತಿಯಾದ ಆಕ್ರಮಣಶೀಲತೆ, ಪ್ರಾಬಲ್ಯದಿಂದ ವರ್ತಿಸುತ್ತೀರಿ. ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿಸುವುದು ಅಗತ್ಯ. ಹೊಸ ಉದ್ಯಮಗಳು ಮತ್ತು ಜವಾಬ್ದಾರಿಗಳಿಗೆ ಇದು ಸೂಕ್ತವಾದ ದಿನವಲ್ಲ. ಆದ್ದರಿಂದ ಯಾವುದೇ ಹೊಸದನ್ನು ಪ್ರಯತ್ನಿಸದಿರಿ. ಸ್ನೇಹಪರವಾಗಿ ಮಾತನಾಡಿ.

ಮಿಥುನ :ನೀವು ಮಾಡುವ ಪ್ರತಿಯೊಂದರಲ್ಲೂ ನೀವು ಪರಿಪೂರ್ಣತೆಯನ್ನು ಬಯಸುತ್ತೀರಿ, ಮತ್ತು ನೀವು ಈ ತತ್ವವನ್ನು ನಿಮ್ಮ ಜೀವನದ ಪ್ರತಿ ಆಯಾಮದಲ್ಲೂ ಅಭ್ಯಾಸ ಮಾಡುತ್ತೀರಿ. ನಿಮ್ಮ ಪ್ರಯತ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಿಮ್ಮ ಎಲ್ಲ ಶಕ್ತಿಗಳನ್ನೂ ಕ್ರೋಢೀಕರಿಸುವುದನ್ನು ದೃಢಪಡಿಸಿಕೊಳ್ಳಿ.

ಕರ್ಕಾಟಕ :ನೀವು ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಅವರೊಂದಿಗೆ ಸಂತೋಷದ ಸಮಯ ನಿಮ್ಮದಾಗುತ್ತದೆ, ಆದರೆ ಕೆಲ ಚಿಂತೆ ಅಥವಾ ಒತ್ತಡ ನಿಮ್ಮನ್ನು ಹಿಂದಕ್ಕೆಳೆಯುತ್ತದೆ. ಆದಾಗ್ಯೂ, ಈ ಎಲ್ಲ ಚಿಂತೆಗಳು ನೀವು ಸಂಜೆ ನಿಮ್ಮ ಮಿತ್ರರೊಂದಿಗೆ ನಿರಾಳತೆ ಅನುಭವಿಸುವಾಗ ದೂರ ಹೋಗುತ್ತವೆ.

ಸಿಂಹಇಂದು ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಿಮ್ಮ ಅಹ‍ಂ ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ. ಪ್ರಣಯರೀತ್ಯಾ ತೊಡಗಿಕೊಳ್ಳಲು ಉತ್ತಮ ದಿನದಂತೆ ಕಾಣುತ್ತಿದೆ ಆದರೆ ನಿಮ್ಮ ಅಹಂ ಪಕ್ಕಕ್ಕೆ ಇರಿಸಿದ ನಂತರ ಮಾತ್ರ ಮುನ್ನಡೆಯಿರಿ.

ಕನ್ಯಾ :ಅಗೋಚರ ಭಯವೊಂದು ನಿಮ್ಮ ಮನಸ್ಸನ್ನು ಇಂದು ಕಾಡುತ್ತಿರುತ್ತದೆ. ದಿನ ಪ್ರಗತಿಯಾದಂತೆ ಈ ನೆರಳು ಮತ್ತಷ್ಟು ಹೆಚ್ಚಾಗಿ ಬೆಳೆಯುತ್ತದೆ. ನಿಮ್ಮ ವಿದೇಶಿ ಮಿತ್ರರಿಗೆ ನೀವು ಅತಿಯಾಗಿ ಖರ್ಚು ಮಾಡುತ್ತಿರುವುದನ್ನು ನೀವು ಕಾಣುತ್ತೀರಿ. ಈ ನಿಟ್ಟಿನಲ್ಲಿ ಇಂದು ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.

ತುಲಾ :ರಿಯಲ್ ಎಸ್ಟೇಟ್ ಗಳು ಮತ್ತು ವಿಮಾ ಪಾಲಿಸಿಗಳಲ್ಲಿ ಹೂಡಿಕೆಗಳು ನಿಮಗೆ ಹಣವನ್ನು ತಂದುಕೊಡಲಿವೆ! ನಿಮ್ಮ ಮಕ್ಕಳು ಹೊಸ ಎತ್ತರಗಳನ್ನು ತಲುಪಲಿದ್ದು ನಿಮ್ಮ ಎದೆ ಹೆಮ್ಮೆಯಿಂದ ಬೀಗುತ್ತದೆ. ಕೆಲಸದ ವಿಷಯದಲ್ಲಿ, ವೇತನ ಹೆಚ್ಚಳ ನಿಮ್ಮ ದಾರಿಯಲ್ಲಿರುವುದನ್ನು ಗಮನಿಸಿ. ನಿಮ್ಮ ಪಿತ್ರಾರ್ಜಿತ ರೂಪದಲ್ಲಿ ಕೂಡಾ ಹಣಕಾಸಿನ ಅನುಕೂಲಗಳು ದೊರೆಯಬಹುದು.

ವೃಶ್ಚಿಕ :ನಿಮ್ಮ ದಿನ ನಿಮಗೆ ಕಿರಿಕಿರಿ ಮತ್ತು ಆಕ್ರಮಣಶೀಲತೆ ತರಬಹುದು, ಅದು ನಿಮ್ಮ ಅದೃಷ್ಟವನ್ನೂ ದೂರ ಮಾಡಬಹುದು. ನಿಮಗೆ ತೊಂದರೆ ಉಂಟು ಮಾಡುವ ಯಾವುದೇ ವಿವಾದಗಳಿಂದ ದೂರವಿರುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನೀವು ಶಾಂತಿ ಮತ್ತು ನಿರಾಳತೆಯನ್ನು ಎದುರು ನೋಡಬಹುದು.

ಧನು :ನೀವು ನಿಮ್ಮ ವಿದೇಶಗಳ ಸಂಪರ್ಕಗಳನ್ನು ಬಳಸಿಕೊಳ್ಳುವುದರಿಂದ ನಿಮ್ಮ ವ್ಯಾಪಾರ ವಿಸ್ತರಿಸಲು ಸಜ್ಜಾಗಿದೆ. ನಿಮ್ಮ ಗುರಿಗಳನ್ನು ಪೂರೈಸಿಕೊಳ್ಳಲು ಪರಿಣಾಮಕಾರಿ ಸಂವಹನ ಕೌಶಲ್ಯಗಳು ನಿಮಗೆ ನೆರವಾಗಲಿದೆ. ಅಲ್ಲದೆ, ನಿಮ್ಮ ತಂಡದ ನಾಯಕನಾಗಲು ನೀವು ಎಲ್ಲ ಸರಿಯಾದ ನಡೆಗಳನ್ನೇ ಅನುಸರಿಸುತ್ತಿದ್ದೀರಿ.

ಮಕರ :ನೀವು ಬಂಧುಮಿತ್ರರೊಂದಿಗೆ ಸಾಕಷ್ಟು ಆನಂದವನ್ನು ತ್ಯಾಗ ಮಾಡಿದ್ದೀರಿ, ಬೆನ್ನುಮೂಳೆ ಮುರಿಯುವಂತಹ ಕೆಲಸ ಮಾಡಿದ್ದೀರಿ ಮತ್ತು ನೀವು ಈಗ ಎಲ್ಲಿದ್ದೀರೋ ಅಲ್ಲಿಗೆ ತಲುಪಲು ನಿಮ್ಮ ಗಮನ ಕೇಂದ್ರೀಕರಿಸಿದ್ದೀರಿ. ನೀವು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದೀರಿ. ಈಗ, ಈ ಹೆಮ್ಮರ ಫಲಗಳನ್ನು ಬಿಡುವ ಸಮಯವಾಗಿದೆ.

ಕುಂಭ :ನೀವು ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಅನಂತ ಸುಲಭವಾಗಿ ಪರಿಹರಿಸುತ್ತೀರಿ! ಆದಾಗ್ಯೂ ಜನರು ನಿಮ್ಮ ಮೇಲೆ ಹೊಣೆಗಾರಿಕೆಯನ್ನು ಎತ್ತಿ ಹಾಕುತ್ತಿದ್ದಾರೆ. ಇತರರ ತಪ್ಪುಗಳಿಗೆ ಹೊಣೆಯಾಗುವ ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.

ಮೀನ :ನೀವು ವಿಶ್ವಾಸದ ಕೊರತೆ ಮತ್ತು ಗೊಂದಲದ ಭಾವನೆ ಹೊಂದಿದ್ದು ಅದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತದೆ. ಇದು ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಿಮಗ ತೊಂದರೆಯನ್ನೂ ಉಂಟು ಮಾಡಬಹುದು. ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮುನ್ನಡೆಯಿರಿ. ಯಾವುದೇ ಬಗೆಯ ವಿವಾದದಲ್ಲಿ ಸಿಲುಕಿಕೊಳ್ಳುವುದು ಅಥವಾ ದೊಡ್ಡ ಯೋಜನೆಗಳನ್ನು ರೂಪಿಸುವುದನ್ನು ತಪ್ಪಿಸಿರಿ.

ABOUT THE AUTHOR

...view details