ಕರ್ನಾಟಕ

karnataka

ಕೇರಳ: ಭೂಕುಸಿತದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ನಟ ಮೋಹನ್​ಲಾಲ್​​ ಭೇಟಿ - Mohanlal Reaches Wayanad

By ETV Bharat Entertainment Team

Published : Aug 3, 2024, 12:22 PM IST

Updated : Aug 3, 2024, 12:53 PM IST

ಭೂಕುಸಿತದಿಂದ ತೀವ್ರ ಹಾನಿಗೊಳಗಾಗಿರುವ ಮುಂಡಕ್ಕೈ ಮತ್ತು ಮೆಪ್ಪಾಡಿ ಪ್ರದೇಶಗಳಿಗೆ ಇಂದು ಜನಪ್ರಿಯ ನಟ ಮೋಹನ್‌ಲಾಲ್ ಭೇಟಿ ಕೊಟ್ಟಿದ್ದಾರೆ. ಇಂತಹ ಕಠಿಣ ಸಂದರ್ಭ ಬಲಶಾಲಿಯಾಗಿರಲು ಮತ್ತು ಒಗ್ಗಟ್ಟಿನಲ್ಲಿ ಕೆಲಸ ಮಾಡಲು ಪ್ರತಿಯೊಬ್ಬರಲ್ಲೂ ಕೇಳಿಕೊಂಡರು.

Mohanlal Reaches Wayanad
ಭೂಕುಸಿತ ಪ್ರದೇಶಗಳಿಗೆ ಮೋಹನ್​ಲಾಲ್​​ ಭೇಟಿ (ETV Bharat)

ಭೂಕುಸಿತ ಪ್ರದೇಶಗಳಿಗೆ ಮೋಹನ್​ಲಾಲ್​​ ಭೇಟಿ (ETV Bharat)

ವಯನಾಡ್ (ಕೇರಳ): ಭೀಕರ ಭೂಕುಸಿತಕ್ಕೆ ದೇವರ ನಾಡಿನ ವಯನಾಡ್​​ ಅಕ್ಷರಶಃ ತತ್ತರಿಸಿದೆ. ದುರಂತಕ್ಕೆ ಜನಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು, ವಿವಿಧ ಕ್ಷೆತ್ರಗಳ ಗಣ್ಯರು ಮರುಗಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಸೌತ್​ ಸೂಪರ್​ ಸ್ಟಾರ್​ ಮೋಹನ್​ಲಾಲ್​​​ ಭೇಟಿ ಕೊಟ್ಟಿದ್ದಾರೆ.

ಭೂಕುಸಿತದಿಂದ ತೀವ್ರ ಹಾನಿಗೊಳಗಾಗಿರುವ ಮುಂಡಕ್ಕೈ ಮತ್ತು ಮೆಪ್ಪಾಡಿ ಪ್ರದೇಶಗಳಿಗೆ ಇಂದು ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಮೋಹನ್‌ಲಾಲ್ ಭೇಟಿ ನೀಡಿ, ಪ್ರಾದೇಶಿಕ ಸೇನಾ ಶಿಬಿರಕ್ಕೆ ಆಗಮಿಸಿದರು. ಮಿಲಿಟರಿ ಸಮವಸ್ತ್ರದಲ್ಲಿ ಸೂಪರ್​ ಸ್ಟಾರ್​ ಕಾಣಿಸಿಕೊಂಡಿದ್ದಾರೆ. ಪ್ರಾದೇಶಿಕ ಸೈನ್ಯದಲ್ಲಿ ಲೆಫ್ಟಿನೆಂಟ್ ಕೊಲೋನಲ್​​​ ಗೌರವ ಶ್ರೇಣಿಯನ್ನು ಹೊಂದಿರುವ ನಟನನ್ನು ಸೇನೆ ಆತ್ಮೀಯವಾಗಿ ಸ್ವಾಗತಿಸಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹನ್ ಲಾಲ್, ಇಂತಹ ಕಠಿಣ ಸ್ಥಿತಿಯಲ್ಲಿ ಒಗ್ಗಟ್ಟು ಮತ್ತು ಸ್ಥಿತಿಸ್ಥಾಪಕತ್ವದ ಮಹತ್ವವನ್ನು ಒತ್ತಿ ಹೇಳಿದರು. "ಕಠಿಣ ಪರಿಸ್ಥಿತಿಯಲ್ಲೂ ಸಹ ನಾವು ಯಾವಾಗಲೂ ಬಲಶಾಲಿಯಾಗಿ ಹೊರಹೊಮ್ಮುತ್ತೇವೆ. ಈ ಸವಾಲಿನ ಸಮಯದಲ್ಲಿ ನಾವು ಒಗ್ಗಟ್ಟಾಗಿರೋಣ ಮತ್ತು ನಮ್ಮ ಸ್ಥೈರ್ಯವನ್ನು ಪ್ರದರ್ಶಿಸೋಣ. ಜೈ ಹಿಂದ್​​​'' ಎಂದು ತಿಳಿಸಿದರು. ಇಂತಹ ಕಠಿಣ ಸನ್ನಿವೇಶದಲ್ಲಿ ಬಲಶಾಲಿಯಾಗಿರಲು ಮತ್ತು ಒಟ್ಟಾಗಿ ಕೆಲಸ ಮಾಡಲು ಪ್ರತಿಯೊಬ್ಬರಲ್ಲೂ ಕೇಳಿಕೊಂಡರು.

ಜನಪ್ರಿಯ ನಟನ ಈ ಭೇಟಿ, ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಹಾಗೂ ದುರಂತ ತಂದೊಡ್ಡಿರುವ ಹಾನಿಯನ್ನು ವೈಯಕ್ತಿಕವಾಗಿ ಗಮನಿಸುವ ಗುರಿಯನ್ನು ಹೊಂದಿತ್ತು. ಅದರಲ್ಲೂ ಮುಂಡಕ್ಕೈನ ಪರಿಸ್ಥಿತಿಯನ್ನು ಗಮನಿಸುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಮುಂಡಕೈ ಭೂಕುಸಿತ ದುರಂತದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದು.

ಇದನ್ನೂ ಓದಿ:ಬೆಂಗಳೂರು: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಅಗತ್ಯವಸ್ತುಗಳು ರವಾನೆ - Humanitarian Aid To Wayanad

ಈ ಹಿಂದೆ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ (ಸಿಎಂಡಿಆರ್‌ಎಫ್) 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇದು ನಟನ ಮಾನವೀಯ ಕಾರ್ಯಗಳನ್ನು ಎತ್ತಿ ಹಿಡಿದಿದೆ. ಭೇಟಿ ಸಂದರ್ಭ, ಸ್ವಯಂಸೇವಕರು, ಪೊಲೀಸರು, ರಕ್ಷಣಾ ತಂಡಗಳು ಮತ್ತು ಸರ್ಕಾರಿ ಅಧಿಕಾರಿಗಳ ಸೇವೆಯನ್ನು ಅವರು ಶ್ಲಾಘಿಸಿದರು. ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ '122 ಇನ್​​ಫ್ಯಾಂಟ್ರಿ ಬೆಟಾಲಿಯನ್ ಟಿಎ ಮದ್ರಾಸ್‌'ಗೆ ಮೋಹನ್​ಲಾಲ್​ ಕೃತಜ್ಞತೆ ಅರ್ಪಿಸಿದರು.

ಇದನ್ನೂ ಓದಿ:ಕನ್ನಡದ ಹಾಡನ್ನು ಕನ್ನಡ ಚಿತ್ರಗಳಲ್ಲಿ ಬಳಸಬಾರದೇ?: ರಕ್ಷಿತ್ ಶೆಟ್ಟಿ - Rakshit Shetty

ಒಗ್ಗಟ್ಟಿನ ಪ್ರದರ್ಶನದ ವಿಚಾರಕ್ಕೆ ಬಂದರೆ, ಮಲಯಾಳಂ ಚಿತ್ರೋದ್ಯಮ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಸೂಪರ್‌ ಸ್ಟಾರ್ ಮಮ್ಮುಟ್ಟಿ ಮತ್ತು ಅವರ ಪುತ್ರ - ಜನಪ್ರಿಯ ನಟ ದುಲ್ಕರ್ ಸಲ್ಮಾನ್, ವಯನಾಡ್ ಭೂಕುಸಿತದಿಂದ ಹಾನಿಗೊಳಗಾದವರ ಪುನರ್ವಸತಿಗಾಗಿ ಸಿಎಂಡಿಆರ್‌ಎಫ್‌ಗೆ 35 ಲಕ್ಷ ರೂ. ನೆರವು ನೀಡಿದ್ದಾರೆ. ನಯನತಾರಾ, ವಿಘ್ನೇಶ್ ಶಿವನ್, ವಿಕ್ರಮ್ ಮತ್ತು ಫಹಾದ್ ಫಾಸಿಲ್ ಸೇರಿದಂತೆ ಇತರ ಸೆಲೆಬ್ರಿಟಿಗಳು ಸಹ ದೇಣಿಗೆ ನೀಡಿದ್ದಾರೆ.

Last Updated : Aug 3, 2024, 12:53 PM IST

ABOUT THE AUTHOR

...view details