ಕರ್ನಾಟಕ

karnataka

ETV Bharat / entertainment

'ದಾನಧರ್ಮ ಇರ್ಲಿ, ದಡ್ಡತನ ಬೇಡ': ಉಗ್ರಂ ಮಂಜು ಪರವಾಗಿ ಸುದೀಪ್​ ಸಮಾಜ ಸೇವೆ - SUDEEP SOCIAL WORK

ಐದನೇ ಸ್ಥಾನ ಪಡೆದುಕೊಂಡ ಉಗ್ರಂ ಮಂಜು ವೇದಿಕೆಯಲ್ಲೇ ಸಮಾಜ ಸೇವೆಗೆ ಮುಂದಾಗಿದ್ದು, ಸುದೀಪ್​​ ಆ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.

Sudeep Social work on behalf of Ugram Manju
ಮಂಜು ಪರವಾಗಿ ಸುದೀಪ್​ ಸಮಾಜ ಸೇವೆ (Photo: ETV Bharat, BBK 11 Team)

By ETV Bharat Entertainment Team

Published : Jan 27, 2025, 2:36 PM IST

'ಬಿಗ್​ ಬಾಸ್​ ಕನ್ನಡ ಸೀಸನ್​ 11'ರ ಗ್ರ್ಯಾಂಡ್​ ಫಿನಾಲೆ ಕಳೆದ ರಾತ್ರಿ ಪ್ರಸಾರ ಕಂಡಿದ್ದು, ಹನುಮಂತು ವಿಜೇತರಾಗಿ ಗೆಲುವಿನ ನಗೆ ಬೀರಿದ್ದಾರೆ. ಟಾಪ್​ 5 ಕಂಟೆಸ್ಟೆಂಟ್​​ಗಳಲ್ಲಿ ಒಬ್ಬರಾಗಿದ್ದ ಉಗ್ರಂ ಮಂಜು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಬಿಗ್​ ಬಾಸ್​​ ಫಿನಾಲೆ ತಲುಪಿದ್ದ ಸ್ಪರ್ಧಿಗಳಿಗೆ ಬಹುಮಾನ ನೀಡಲಾಗಿದೆ. ಅದರಂತೆ ಉಗ್ರಂ ಮಂಜು ಅವರಿಗೂ ಸರ್ಪ್ರೈಸ್ ಸಿಕ್ಕಿದೆ. ಕ್ಯಾಶ್​ಪ್ರೈಸ್​ಗಳು ಅನೌನ್ಸ್​ ಆಗುತ್ತಿದ್ದಂತೆ ಮಂಜಣ್ಣ ದಾನ ಧರ್ಮಕ್ಕೆ ಮುಂದಾಗಿದ್ದಾರೆ. ಮೊದಲು ಸಿಕ್ಕ 2 ಲಕ್ಷ ರೂಪಾಯಿ ವಯೋವೃದ್ಧರ ಸಹಾಯಕ್ಕೆ ಬಳಸಿ ಎಂದು ವೇದಿಕೆ ಮೇಲೆ ಅನೌನ್ಸ್​ ಮಾಡಿದ್ರು. ನಂತರ 1 ಲಕ್ಷ ಸಿಗುತ್ತಿದ್ದಂತೆ, ರೈತರಿಗೆ ಬಳಸಲು ತಮ್ಮ ತಂದೆ ಬಳಿ ಹೇಳುತ್ತಿದ್ದಂತೆ ಸುದೀಪ್​​ ತಡೆದು ವೇದಿಕೆಯಲ್ಲೇ ಬುದ್ಧಿವಾದ ಹೇಳಿದ್ರು.

ದಾನ ಧರ್ಮ ಮಾಡ್ಬೇಕು, ಆದರೆ ದಡ್ಡತನ ಇರಬಾರದು. ಆ ಹಣ ನಿಮಗೆ ಸಿಕ್ಕಿರೋದು. ಇಲ್ಲಿವರೆಗೆ ತಲುಪಿದ್ದಕ್ಕೆ ಗುರುತಿಸಿ ಗೌರವಿಸುತ್ತಿದ್ದಾರೆ. ಆ ಹಣ ನಿಮಗೆ ಸೇರಿದ್ದು, ನೀವೇ ಇಟ್ಟುಕೊಳ್ಳಿ. ನಿಮ್ಮ ಪರವಾಗಿ ನಾನು 2 ಲಕ್ಷ ನೀಡುತ್ತೇನೆ. ಆ 1 ಲಕ್ಷ ನಿಮ್ಮ ತಂದೆಗೆ ಕೊಡಿ. ಅವರೇ ದೊಡ್ಡ ರೈತರು ಎಂದು ತಿಳಿಸಿ ಮಾನವೀಯತೆ ಮೆರೆದರು.

ಬಿಗ್ ಬಾಸ್​ ಕನ್ನಡ ಸೀಸನ್​ 11 ಆರಂಭವಾದಾಗ ಉಗ್ರಂ ಮಂಜು ವಿಭಿನ್ನವಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶ ಕಂಡಿದ್ದರು. ಟಪ್ಫೆಸ್ಟ್​​ ​ ಕಂಟೆಸ್ಟೆಂಟ್​​ ​ ಆಗಿ ಗುರುತಿಸಿಕೊಂಡಿದ್ದ ಅವರು ಟಾಪ್​ 2 ಅಥವಾ 3ರಲ್ಲಿ ಇರುತ್ತಾರೆ ಎಂದೇ ಪ್ರೇಕ್ಷಕರು ನಂಬಿದ್ದರು. ಬಹುತೇಕರು ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದ್ರೆ ಮಂಜು ಐದನೇ ಸ್ಥಾನಕ್ಕೆ ಸಮಾಧಾನಪಡುವಂತಾಗಿದೆ. ಬಿಗ್​ ಬಾಸ್​ ತಂಡಕ್ಕೆ ಧನ್ಯವಾದ ಅರ್ಪಿಸಿದ ಅವರು ಬೆಂಬಲ ತೋರಿದ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದರು. ಜೊತೆಗೆ ನಿರೂಪಕ ಸುದೀಪ್​ ಅವರಿಗೂ ಮನತುಂಬಿ ಧನ್ಯವಾದ ಸಮರ್ಪಿಸಿದರು.

ಬಿಗ್​ ಬಾಸ್​ ಕನ್ನಡ ಸೀಸನ್​ 11ರ ವಿಜೇತರು:

  • ವಿಜೇತ: ಹನುಮಂತು.
  • ರನ್ನರ್​ ಅಪ್​: ತ್ರಿವಿಕ್ರಮ್​.
  • ಮೂರನೇ ಸ್ಥಾನ: ರಜತ್​ ಕಿಶನ್​​.
  • ನಾಲ್ಕನೇ ಸ್ಥಾನ: ಮೋಕ್ಷಿತಾ.
  • ಐದನೇ ಸ್ಥಾನ: ಮಂಜು.
  • ಆರನೇ ಸ್ಥಾನ: ಭವ್ಯಾ.

ಇದನ್ನೂ ಓದಿ:ಬಿಗ್​ ಬಾಸ್​​ ಗೆದ್ದ ಹಳ್ಳಿ ಹೈದ ಹನುಮಂತು: ಸುದೀಪ್​​ ಕೈಯಿಂದ ಟ್ರೋಫಿ ಸ್ವೀಕರಿಸಿದ ಕೊನೆಯ ವಿಜೇತ

ಹನುಮಂತು: ತಮ್ಮ ಸರಳತೆ, ಮುಗ್ಧತೆಯಿಂದಲೇ ಸಖತ್​ ಸದ್ದು ಮಾಡಿದ್ದ ಹನುಮಂತು ಅವರು 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಫಿನಾಲೆಗೆ ತಲುಪಿದ ಮೊದಲ ಸ್ಪರ್ಧಿ ಇದೀಗ ಬಿಗ್ ಬಾಸ್ ಟ್ರೋಫಿ ಹಿಡಿದು ಇತಿಹಾಸ ಸೃಷ್ಟಿಸಿದ್ದಾರೆ.

ಇದನ್ನೂ ಓದಿ:5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್​ಬಾಸ್​ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?

ABOUT THE AUTHOR

...view details