ಕರ್ನಾಟಕ

karnataka

ETV Bharat / bharat

ಅರ್ಥ್​ ಅವರ್ 2024: ಮುತ್ತಿನ ನಗರಿಯಲ್ಲಿಂದು ರಾತ್ರಿ ಒಂದು ತಾಸು ಸಂಪೂರ್ಣ ಲೈಟ್ಸ್​​ ಆಫ್​ - Earth Hour 2024 - EARTH HOUR 2024

Earth Hour to save electricity; ಇಂದು ಹೈದರಾಬಾದ್​ ಅರ್ಥ ಅವರ್​ ಆಚರಣೆ ಮಾಡಲು ಕರೆ ನೀಡಲಾಗಿದೆ.

ಅರ್ಥ್​ ಅವರ್ 2024
ಅರ್ಥ್​ ಅವರ್ 2024

By ETV Bharat Karnataka Team

Published : Mar 23, 2024, 11:52 AM IST

ಹೈದರಾಬಾದ್​: ಹವಾಮಾನ ಬದಲಾವಣೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಅರ್ಥ್ ಅವರ್' ಆಚರಿಸಲಾಗುತ್ತದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಎಂದಿನಂತೆ, ಈ ವರ್ಷವೂ ಮಾರ್ಚ್ 23ಕ್ಕೆ (ಇಂದು) ರಾತ್ರಿ 8:30 ರಿಂದ 9:30ರ ವರೆಗೆ ಅರ್ಥ್ ಅವರ್ ಅನ್ನು ಆಚರಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಲಾಗಿದೆ. ಈ ಸಮಯದಲ್ಲಿ, ಮನೆ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳು ಮತ್ತು ಸಂಸ್ಥೆಗಳಲ್ಲಿ ಒಂದು ಗಂಟೆ ಕಾಲ ವಿದ್ಯುತ್ ಬಳಕೆ ಮಾಡದಂತೆ ತಿಳಿಸಲಾಗಿದೆ. ಅನೇಕ ಸ್ವಯಂಸೇವಾ ಸಂಸ್ಥೆಗಳು ಈಗಾಗಲೇ ರಾತ್ರಿ ಎಂಟೂವರೆಯಿಂದ ಒಂದು ಗಂಟೆ ಕಾಲ ವಿದ್ಯುತ್​ ಬಳಕೆ ಮಾಡದಂತೆ ಕರೆ ನೀಡಿವೆ.

ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. 2007ರಲ್ಲಿ, ಸಾಂಕೇತಿಕವಾಗಿ ಲೈಟ್ಸ್ ಔಟ್ ಎಂಬ ಕಾರ್ಯಕ್ರಮವು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಾರಂಭವಾಯಿತು. ಅಂದಿನಿಂದ, ಈ ಕಾರ್ಯಕ್ರಮವನ್ನು 190ಕ್ಕೂ ಹೆಚ್ಚು ದೇಶಗಳಲ್ಲಿ ಅನುಸರಿಸಲಾಗುತ್ತಿದೆ ಮತ್ತು ಜಾಗತಿಕ ಚಳವಳಿಯಾಗಿ ಮಾರ್ಪಟ್ಟಿದೆ. ಈ ಕ್ರಮದಲ್ಲಿ ಹೈದರಾಬಾದ್ ಕೂಡ ಇದನ್ನು ಅನುಸರಿಸುತ್ತಿದೆ. ಈ ಹಿನ್ನೆಲೆ ಇಂದು ನಗರದ ಎಲ್ಲಾ ಪ್ರವಾಸಿ ತಾಣಗಳು ಮತ್ತು ಕಟ್ಟಡಗಳು 1 ಗಂಟೆ ಕಾಲ ಕತ್ತಲಾಗಲಿವೆ.

ನಗರದ ಪ್ರಮುಖ ಪ್ರವಾಸಿ ತಾಣಗಳಾದ, ಅಂಬೇಡ್ಕರ್​ ಪ್ರತಿಮೆ, ಟ್ಯಾಂಕ್​ ಬಂಡ್​ನ ಬುದ್ಧನ ಪ್ರತಿಮೆ, ಗೋಲ್ಕೊಂಡ ಕೋಟೆ, ದುರ್ಗಮಚೆರುವು (ಕೇಬಲ್​ ಬ್ರಿಡ್ಜ್)​, ಚಾರ್ಮಿನಾರ್​​ ಸೇರಿದಂತೆ ಸರ್ಕಾರಿ ಕಚೇರಿಗಳು, ರಾಜ್ಯ ಕೇಂದ್ರ ಗ್ರಂಥಾಲಯ ಅಪಾರ್ಟ್​ಮೆಂಟ್​ಗಳು ಮತ್ತು ಸಮುದಾಯ ಭವನಗಳಲ್ಲಿ ಒಂದು ಗಂಟೆ ಕಾಲ ವಿದ್ಯುತ್ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಮತ್ತೊಂದೆಡೆ, ನಗರವಾಸಿಗಳಿಗೂ ಸಹ ಈ ಅರ್ಥ್ ಅವರ್‌ನಲ್ಲಿ ಭಾಗವಹಿಸುವಂತೆ ಮತ್ತು ಸ್ವಯಂ ಪ್ರೇರಿತವಾಗಿ ಮನೆಗಳಲ್ಲಿ ವಿದ್ಯುತ್​ ದೀಪಗಳು ಮತ್ತು ವಿದ್ಯುತ್ ಉಪಕರಣಗಳನ್ನು ಬಳಸದಂತೆ ಕರೆ ನೀಡಲಾಗಿದೆ.

ಇದರಿಂದಾಗುವ ಲಾಭ ಏನು?:ಮಾ.2ರಂದು 3137 ಮೆಗಾವ್ಯಾಟ್, ಮಾ.9 ರಂದು 3144 ಮೆಗಾವ್ಯಾಟ್ ಮತ್ತು ಮಾ.16 ರಂದು 3477 ಮೆಗಾವ್ಯಾಟ್ ವಿದ್ಯುತ್​ ಹೈದರಾಬಾದ್​ನಲ್ಲಿ ಬಳಕೆಯಾಗಿದೆ. ಇದೆಲ್ಲವೂ ರಾತ್ರಿ 8 ಗಂಟೆಗೆ ಬಳಕೆಯಾದ ಅತ್ಯಧಿಕ ವಿದ್ಯುತ್​ ಆಗಿದೆ. ಇದೇ ತಿಂಗಳ 23ರಂದು ಕೂಡ ಸುಮಾರು 3500 ಮೆಗಾವ್ಯಾಟ್ ಆಗುವ ಸಾಧ್ಯತೆ ಇದೆ. ಅರ್ಥ ಅವರ್​ ಆಚರಿಸುವುದರಿಂದ 350 ಮೆಗಾವ್ಯಾಟ್ ವಿದ್ಯುತ್​ ಉಳಿತಾಯವಾದಂತಗಾಉತ್ತದೆ. ಜತೆಗೆ ವಿದ್ಯುತ್​ ಉತ್ಪಾದನಾ ಸ್ಥಾವರಗಳು ಹೊರಸೊಸುವ 3.15 ರಿಂದ 3.5 ಲಕ್ಷ ಕೆಜಿ ಕಾರ್ಬನ್​ ವಾತಾವರಣಕ್ಕೆ ಸೇರುವುದನ್ನು ತಡೆಯಬಹುದಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇಂದು ಅರ್ಥ್​ ಅವರ್​ ಆಚರಿಸಲಾಗುತ್ತಿದೆ. ಕಳೆದ ವರ್ಷ ಅರ್ಥ್ ಅವರ್​ನಿಂದ ದೆಹಲಿಯಲ್ಲಿ 279 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಮರಾಠವಾಡಾದಲ್ಲಿ ತೀವ್ರ ಬರಗಾಲ: ಮೋಸಂಬಿ, ದಾಳಿಂಬೆ ಬೆಳೆ ನಾಶಪಡಿಸಿದ ರೈತ - Marathwada facing drought

ABOUT THE AUTHOR

...view details