ಕರ್ನಾಟಕ

karnataka

ಮಹಿಳೆಯರಿಂದ ಮಳೆ ನೀರು ಕೊಯ್ಲು: ಗ್ರಾಮದಲ್ಲಿ ಬತ್ತಿ ಹೋಗಿದ್ದ ಜಲಮೂಲಗಳಿಗೆ ಜೀವಕಳೆ - RAINWATER HARVESTING

By ETV Bharat Karnataka Team

Published : Jul 15, 2024, 3:07 PM IST

Rainwater harvesting by women: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಮಹಿಳೆಯರು ಅರಣ್ಯ ಮತ್ತು ಜಲ ಸಂರಕ್ಷಣೆ ಕಾರ್ಯಕ್ಕೆ ಮಾದರಿಯಾಗಿದ್ದಾರೆ. ಹರಿಯಲಿ ಕಣಿವೆಯ ಕೋಟ್ ಗ್ರಾಮದ ಮಹಿಳೆಯರ ಶ್ರಮಕ್ಕೆ ಇದೀಗ ಫಲ ಲಭಿಸಿದೆ. 30 ಮಹಿಳೆಯರ ಪರಿಶ್ರಮದಿಂದ ಒಂದು ಲಕ್ಷ ಲೀಟರ್ ಮಳೆ ನೀರು ಸಂಗ್ರಹವಾಗಿದೆ. ಇದರಿಂದ ಬತ್ತಿಹೋಗಿದ್ದ ನೈಸರ್ಗಿಕ ನೀರಿನ ಮೂಲಗಳು ಪುನಶ್ಚೇತನಗೊಳ್ಳುತ್ತೀವೆ.

EVIVAL OF WATER SOURCES  SINGLAS DEVTA FOREST  Rainwater harvesting by women
ಉತ್ತರಾಖಂಡದಲ್ಲಿ ಮಹಿಳೆಯರಿಂದ ಮಳೆ ನೀರು ಕೊಯ್ಲು: ಅರಣ್ಯ, ಜಲ ಸಂರಕ್ಷಣೆ ಕಾರ್ಯಕ್ಕೆ ಮಾದರಿಯಾದ ಛಲಗಾತಿಯರು (ETV Bharat)

ರುದ್ರಪ್ರಯಾಗ:ಜಿಲ್ಲೆಯ ರಾಣಿಗಢ ಬೆಲ್ಟ್‌ನ ಸಭಾ ಕೋಟ್‌ನ 30 ಮಹಿಳೆಯರು ಐದು ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಮಳೆ ನೀರು ಸಂರಕ್ಷಣೆಗಾಗಿ ಒಂದು ತಿಂಗಳಿಂದ ನಿರಂತರವಾಗಿ ಶ್ರಮಿಸಿದ ಫಲವಾಗಿ 200 ದೊಡ್ಡ ಹೊಂಡಗಳನ್ನು ನಿರ್ಮಾಣವಾಗಿವೆ. ಮಳೆ ಬಂದರೆ ಈ ಹೊಂಡಗಳಲ್ಲಿ ಅಂದಾಜು ಒಂದು ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತಿದೆ. ಗ್ರಾಮದ ಮೇಲಿರುವ ಅರಣ್ಯ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ, ಸುತ್ತಮುತ್ತ ಬತ್ತಿ ಹೋಗಿದ್ದ ಜಲಮೂಲಗಳಿಗೆ ಜೀವ ಕಳೆ ಬಂದಿದೆ.

ನೀರಿನ ಸಂರಕ್ಷಣೆಗಾಗಿ ಕೋಟ್ ಗ್ರಾಮದ ಮಹಿಳೆಯರು ಮಿಶ್ರ ಗಿಡಗಳನ್ನು ನೆಡಲು ಐದು ನೂರು ಹೊಂಡಗಳನ್ನು ನಿರ್ಮಿಸಿದರು. ಇವುಗಳಲ್ಲಿ ಹರೇಳ ಹಬ್ಬದಂದು ಸಸಿಗಳನ್ನು ನೆಡಲಾಗುವುದು. ಈ ಮಿಶ್ರ ಅರಣ್ಯದಲ್ಲಿ ಆರ್ಥಿಕತೆಯೊಂದಿಗೆ ಸಂಪರ್ಕ ಸಾಧಿಸಲು ಹಾಗೂ ರಿಂಗಲ್ ಸಸಿ ನೆಡುವುದರಿಂದ ಭವಿಷ್ಯದಲ್ಲಿ ಸಣ್ಣ ಕರಕುಶಲ ಉದ್ಯಮ ವೃದ್ಧಿಗೆ ಸಹಾಯವಾಗುತ್ತದೆ. ಅಲ್ಲದೆ ಜಲ ಸಂರಕ್ಷಣೆಯ ಜೊತೆಗೆ ಅರಣ್ಯ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದ್ದು, ಇದರಲ್ಲಿ 50 ಜಾತಿಯ ಹಿಮಾಲಯದ ಗಿಡಗಳನ್ನು ನೆಡಲಾಗುತ್ತದೆ.

ಉತ್ತರಾಖಂಡದಲ್ಲಿ ಮಹಿಳೆಯರಿಂದ ಮಳೆ ನೀರು ಕೊಯ್ಲು (ETV Bharat)

ಈ ಸಸ್ಯಗಳಲ್ಲಿ ಓಕ್, ಬುರಾನ್ಶ್, ಕಫಲ್, ದೇವದಾರ್, ಭಮೋರ್, ಚಮ್ಖಾಡಿ ಪ್ರಮುಖವಾಗಿವೆ. ಪರಿಸರ ತಜ್ಞ ದೇವರಾಘವೇಂದ್ರ ಸಿಂಗ್ ಅವರು, ಈ ಕಾರ್ಯದಲ್ಲಿ ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮಹಿಳೆಯರು ಮತ್ತು ಗ್ರಾಮದ ಮುಖಂಡರ ಸಹಕಾರದೊಂದಿಗೆ ಸಿಂಗಲಾಸ್ ದೇವತಾ ಮಿಶ್ರ ಅರಣ್ಯವನ್ನು ವಿಶ್ವಾದ್ಯಂತ ಪರಿಸರ ಸಂರಕ್ಷಣೆಯ ಮಾದರಿಯನ್ನಾಗಿ ಮಾಡಲಾಗುವುದು. ಇದರಲ್ಲಿ ಒಂದು ಸಾವಿರ ಮಿಶ್ರ ಸಸಿಗಳನ್ನು ನೆಡಲಾಗುವುದು. ಇದು ನನಗೆ ಸಂತಸದ ಕ್ಷಣ ಎಂದು ಗ್ರಾಮದ ಮುಖಂಡ ಕೋಟ್ ಸುಮನ್ ದೇವಿ ಹೇಳಿದ್ದಾರೆ.

ಇಡೀ ಜಿಲ್ಲೆಯಲ್ಲಿ ತಮ್ಮ ಗ್ರಾಮಸಭೆಯಲ್ಲಿ ನೀರು ಮತ್ತು ಅರಣ್ಯ ಸಂರಕ್ಷಣೆಯ ಕೆಲಸ ಮಾಡಲಾಗುತ್ತಿದೆ. ಎಂಎನ್‌ಆರ್‌ಇಜಿಎ ಯೋಜನೆಗೆ ಧನ್ಯವಾದ ಅರ್ಪಿಸಿದ ಅವರು, ಇದರಿಂದ ಮಹಿಳೆಯರೂ ಉದ್ಯೋಗದಿಂದ ಪ್ರಯೋಜನ ಪಡೆಯುತ್ತಿದ್ದಾರೆ. MNREGA ಯೋಜನೆಯ ಮೂಲಕ, ಅವರ ಗ್ರಾಮ ಸಭೆಯಲ್ಲಿ ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ಸಮಾಜ ಸೇವಕ ಜೈಕೃತ್ ಸಿಂಗ್ ಚೌಧರಿ ಮಾತನಾಡಿ, ''ಕಳೆದ ಒಂದು ತಿಂಗಳಿನಿಂದ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಬೆಂಬಲ ನೀಡುತ್ತಿರುವುದು ಅವರ ಗ್ರಾಮ ಸಭೆಗೆ ಹೆಮ್ಮೆಯ ಸಂಗತಿ. ಜಲಸಂರಕ್ಷಣಾ ಕಾರ್ಯವು ಯಶಸ್ವಿಯಾಗಿರುವುದರಿಂದ, ಅವರ ಗ್ರಾಮಗಳ ಸುತ್ತಮುತ್ತಲಿನ ನೀರಿನ ಮೂಲಗಳು ಪುನಶ್ಚೇತನಗೊಳ್ಳಲು ಪ್ರಾರಂಭಿಸಿವೆ. ಈ ಕಾರ್ಯದಿಂದ ಸ್ಫೂರ್ತಿ ಪಡೆದು ಇತರೆ ಗ್ರಾಮಸಭೆಗಳಲ್ಲೂ ಜಲಸಂರಕ್ಷಣಾ ಕಾರ್ಯ ಆರಂಭವಾಗಿದೆ.

ಜಲ ಸಂರಕ್ಷಣೆಯತ್ತ ವಿದ್ಯಾರ್ಥಿಗಳ ಒಲವು - ಪ್ರೊ.ಭಾರತಿ: ಈ ಮಹಿಳಾ ಜಲ ಮತ್ತು ಮಿಶ್ರ ಅರಣ್ಯ ಸಂರಕ್ಷಣಾ ಅಭಿಯಾನಕ್ಕೆ ಸಂಬಂಧಿಸಿದ ಪ್ರೊ.ಡಾ.ಬಿಕ್ರಂ ವೀರ ಭಾರತಿ ಮಾತನಾಡಿ, ''ಕೋಟ್ ಗ್ರಾಮದ ಮಹಿಳೆಯರು ಮಾದರಿಯಾಗಿದ್ದಾರೆ. ನೀರಿನ ಸಂರಕ್ಷಣೆಯಲ್ಲಿ ತಮ್ಮ ರುದ್ರಪ್ರಯಾಗದ ಕಾಲೇಜು ವಿದ್ಯಾರ್ಥಿಗಳು ಸಹ ಮಹಿಳೆಯರ ಕೆಲಸವನ್ನು ವೀಕ್ಷಿಸಲು ಬರುತ್ತಿದ್ದಾರೆ. ಸಾಂಪ್ರದಾಯಿಕ ನೀರಿನ ಸಂರಕ್ಷಣೆಯ ತಂತ್ರಗಳನ್ನು ಮಹಿಳೆಯರಿಂದ ಕಲಿತು ತಮ್ಮ ತಮ್ಮ ಹಳ್ಳಿಗಳಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಮಾಡಿರುವ ಈ ಜಲ ಸಂರಕ್ಷಣೆಯ ಪ್ರಯೋಗ ಹೊಸ ಪೀಳಿಗೆಗೆ ಮಾರ್ಗದರ್ಶಕವಾಗಿದೆ'' ಎಂದರು. ಭವಿಷ್ಯದಲ್ಲಿಯೂ ಮಹಿಳೆಯರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವ ಬಗ್ಗೆ ಅವರು ತಿಳಿಸಿದರು.

ಮಳೆ ನೀರು ಸಂಗ್ರಹಿಸಲು ಗುಂಡಿ ತೋಡಿರುವ ದೃಶ್ಯ (ETV Bharat)

ಸಿಂಗಳೀಕ ದೇವರ ವನ:ಅರಣ್ಯ ರಕ್ಷಣೆಗಾಗಿ ಈ ಅರಣ್ಯದಲ್ಲಿ ನೆಲೆಸಿರುವ ಸಿಂಗಳೀಕ ದೇವರ ಹೆಸರಿನಲ್ಲಿ ಕೋಟ್ ಗ್ರಾಮದ ಮಹಿಳಾ ಸಮಿತಿಯನ್ನೂ ರಚಿಸಲಾಗಿದೆ. ಐದು ಹೆಕ್ಟೇರ್ ಅರಣ್ಯ ಹೊಂದಿದ್ದು, ಎಲ್ಲಾ ಮಹಿಳೆಯರು ಸಿಂಗಲಾಸ್ ದೇವತಾ ಮಿಶ್ರ ಅರಣ್ಯ ಮತ್ತು ಜಲ ಸಂರಕ್ಷಣಾ ಮಹಿಳಾ ವನ ಸಮಿತಿಯ ಹೆಸರಿನಲ್ಲಿ ಅರಣ್ಯ ಸಂರಕ್ಷಣೆ ಮಾಡುತ್ತಿದ್ದಾರೆ.

ಈ ಅಭಿಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಹಿಳೆಯರು ತಮ್ಮ ಮಕ್ಕಳಂತೆ ಈ ಅರಣ್ಯವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಮತ್ತು ಭವಿಷ್ಯದ ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನದುದ್ದಕ್ಕೂ ಈ ಅರಣ್ಯದೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ಸಿಂಗಲಾಸ್ ದೇವತಾ ಮಿಶ್ರ ಅರಣ್ಯದ ಸಮಗ್ರ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಎಲ್ಲಾ ಮಹಿಳೆಯರು ಪ್ರಸಿದ್ಧ ಪರಿಸರವಾದಿ ಜಗತ್ ಸಿಂಗ್ ಜಂಗ್ಲಿ ಅವರ ಮಿಶ್ರ ಅರಣ್ಯದಲ್ಲಿ ತರಬೇತಿ ಪಡೆದಿದ್ದಾರೆ.

ಪಾರಂಪರಿಕ ಮಾದರಿಯಲ್ಲಿ ಜಲ ಸಂರಕ್ಷಣೆ:ಅರಣ್ಯ ಪ್ರದೇಶದ ಸುತ್ತಮುತ್ತ ಸುಮಾರು 100 ಕುಟುಂಬಗಳು ವಾಸವಾಗಿವೆ. ಅವುಗಳಲ್ಲಿ ಹೆಚ್ಚಿನವು ನೈಸರ್ಗಿಕ ನೀರಿನ ಮೂಲಗಳನ್ನು ಅವಲಂಬಿಸಿವೆ. ಆ ಜಲಮೂಲಗಳ ನೀರಿನ ಮಟ್ಟ ಹೆಚ್ಚಿಸುವ ದೃಷ್ಟಿಯಿಂದಲೂ ಈ ಕೆಲಸ ಮಾಡಲಾಗುತ್ತಿದೆ. ನೀರಿನ ಸಂರಕ್ಷಣೆಯನ್ನು ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಇದರಲ್ಲಿ ಇಳಿಜಾರಾದ ಸ್ಥಳಗಳು ಮತ್ತು ನೀರಿನ ಮೂಲಗಳ ಸುತ್ತಲೂ ಕಚ್ಚಿ ಚಾಲ್ ಖಲ್, ಖಂತಿಯಾ ಗುಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ಮಳೆ ನೀರನ್ನು ನಿಲ್ಲಿಸಲಾಗುತ್ತದೆ. ಮಳೆ ನೀರನ್ನು ಭೂಮಿ ಇಂಗುವಂತೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ, ಮಣ್ಣಿನ ಸವೆತವೂ ನಿಲ್ಲುತ್ತದೆ. ಮತ್ತು ನೈಸರ್ಗಿಕ ನೀರಿನ ಮೂಲಗಳು ಮರುಪೂರಣಗೊಳ್ಳುತ್ತವೆ. ಸುತ್ತಲೂ ತೇವಾಂಶ ಇರುವುದರಿಂದ ಜೀವವೈವಿಧ್ಯವು ಸೃಷ್ಟಿಯಾಗುತ್ತದೆ.

ಈ ಪ್ರಯೋಗದಿಂದ ಭವಿಷ್ಯಕ್ಕೆ ವರದಾನ- ಜಂಗಲಿ:ಜಲ ಮತ್ತು ಅರಣ್ಯ ಸಂರಕ್ಷಣೆಯ ಈ ಕಾರ್ಯ ಮಹಿಳೆಯರಿಂದ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ವಿಶ್ವವಿಖ್ಯಾತ ಪರಿಸರವಾದಿ ಜಗತ್ ಸಿಂಗ್ ಜಂಗಲಿ ಸಂತಸ ವ್ಯಕ್ತಪಡಿಸಿದರು. ''ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಈ ನೀರಿನ ಸಂರಕ್ಷಣೆ ಪ್ರಯೋಗ ಅನುಷ್ಠಾನ ಮಾಡಲಾಗುತ್ತದೆ. ಗ್ರಾಮದ ಮುಖಂಡರನ್ನೂ ಶ್ಲಾಘಿಸಿದರು. ಎಂಎನ್‌ಆರ್‌ಇಜಿಎ ಮೂಲಕ ಪರಿಸರದ ಜತೆಗೆ ಗ್ರಾಮೀಣ ಮಹಿಳೆಯರಿಗೂ ಉದ್ಯೋಗ ಕಲ್ಪಿಸಿ, ಜಲಸಂರಕ್ಷಣೆ ಕಾರ್ಯದಲ್ಲಿ ಈ ಹಣಕಾಸು ಸದ್ಬಳಕೆಯಾಗುತ್ತಿದ್ದು, ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಗೆ ಮಾದರಿಯಾಗಬಹುದು'' ಎಂದರು.

ಜಲಸಂರಕ್ಷಣಾ ಕಾರ್ಯದಲ್ಲಿ ನಿರತರಾದ ಮಹಿಳೆಯರು: ಮೀನು ದೇವಿ, ಮಮತಾದೇವಿ, ಸರೋಜಿನಿ ದೇವಿ, ಪೂಜಾದೇವಿ, ರಿತಿಕಾ, ಬೀನಾದೇವಿ, ಊರ್ಮಿಳಾ ದೇವಿ, ಪೂನಂ ದೇವಿ, ರಜನಿ ದೇವಿ ಮತ್ತು ಶಾಕುಂಬರಿ ದೇವಿ ಸೇರಿದಂತೆ 30 ಮಹಿಳೆಯರು ಕೋಟ್‌ ಗ್ರಾಮದಲ್ಲಿ ನೀರು ಮತ್ತು ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ರುದ್ರಪ್ರಯಾಗ ಜಿಲ್ಲೆಯ ರಾಣಿಗಢ್ ಬೆಲ್ಟ್ ಅರಣ್ಯ ಸಂರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ:ಇಂದು ಬಹುದಾ ಯಾತ್ರೆ: 9 ದಿನಗಳ ನಂತರ ನಿವಾಸಕ್ಕೆ ಮರಳಲಿರುವ ಜಗನ್ನಾಥ, ಬಲಭದ್ರ, ದೇವಿ ಸುಭದ್ರಾ - Bahuda Yatra

ABOUT THE AUTHOR

...view details