ಕರ್ನಾಟಕ

karnataka

ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೆ ಯತ್ನ: ಸಮುದ್ರದಲ್ಲಿ ಮುಳುಗಿದ ತಮಿಳುನಾಡು ದೋಣಿ, ಓರ್ವ ಸಾವು - Tamil Nadu fisherman killed

By ETV Bharat Karnataka Team

Published : Aug 1, 2024, 1:24 PM IST

ಶ್ರೀಲಂಕಾ ನೌಕಾಪಡೆಯ ದೋಣಿಯು ತಮಿಳುನಾಡು ಮೀನುಗಾರರ ದೋಣಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ದೋಣಿ ಮಗುಚಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶ್ರೀಲಂಕಾ ನೌಕಾಪಡೆಯ ದೋಣಿ ತಮಿಳುನಾಡು ದೋಣಿಗೆ ಡಿಕ್ಕಿ
ಶ್ರೀಲಂಕಾ ನೌಕಾಪಡೆಯ ದೋಣಿ ತಮಿಳುನಾಡು ದೋಣಿಗೆ ಡಿಕ್ಕಿ (ETV Bharat)

ತಮಿಳುನಾಡು:ಶ್ರೀಲಂಕಾ ನೌಕಾಪಡೆಯ ದೋಣಿಯು ಮೀನುಗಾರರ ದೋಣಿಯನ್ನು ವಶಪಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ತಮಿಳುನಾಡು ದೋಣಿ ಸಮುದ್ರದಲ್ಲಿ ಮಗುಚಿ ಓರ್ವ ಮೀನುಗಾರ ಸಾವನ್ನಪ್ಪಿ, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಇಲ್ಲಿನ ರಾಮನಾಥಪುರಂನಲ್ಲಿ ನಡೆದಿದೆ.

ರಾಮೇಶ್ವರಂ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆ ಪರವಾನಗಿ ಪಡೆಯಲು 359 ದೋಣಿಗಳಲ್ಲಿ ಮೀನುಗಾರರು ನಿನ್ನೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ನೆಡುಂತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆಯ ದೋಣಿ ಅಕ್ರಮ ಮೀನುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ಮೀನುಗಾರರ ದೋಣಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದೆ. ಈ ವೇಳೆ ನೌಕಾಪಡೆಯ ದೋಣಿ ಹಾಗೂ ಮೀನುಗಾರರ ದೋಣಿ ನಡುವೆ ಘರ್ಷಣೆಯಾಗಿ ಮೀನುಗಾರರ ದೋಣಿ ಸಮುದ್ರದಲ್ಲಿ ಮಗುಚಿ ಬಿದ್ದಿದೆ.

ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿದ್ದರಿಂದ ದೋಣಿಯಲ್ಲಿದ್ದ ವಿರುದುನಗರ ಜಿಲ್ಲೆಯ ನಲ್ಲಂಕುಳಂ ಪ್ರದೇಶದ ಮೂಖಯ್ಯ (54), ರಾಮೇಶ್ವರಂ ನಿವಾಸಿ ಮುತ್ತು ಮುನಿಯಾಂಡಿ (57), ಮಲೈಚಾಮಿ (59), ರಾಮಚಂದ್ರನ್ (64) ಮೀನುಗಾರರು ನಾಪತ್ತೆಯಾಗಿದ್ದರು. ಮೀನುಗಾರರು ದಡಕ್ಕೆ ಮರಳದ ಕಾರಣ ಸಹ ಮೀನುಗಾರರು ನಾಪತ್ತೆಯಾಗಿರುವ ಮೀನುಗಾರರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಿದ್ರು. ಬಳಿಕ ಮೀನುಗಾರರು ಮೀನುಗಾರಿಕೆ ಇಲಾಖೆ ಕಚೇರಿಗೆ ದೂರು ನೀಡಿದ್ದರು.

ಸಂತ್ರಸ್ತರ ಕುಟುಂಬ (ETV Bharat)

ನಂತರ ಕಾರ್ಯಾಚರಣೆ ನಡೆಸಿದಾಗ ನಾಲ್ವರು ಮೀನುಗಾರರ ಪೈಕಿ ಮೂವರನ್ನು ರಕ್ಷಿಸಲಾಗಿದೆ. ಇವರಲ್ಲಿ ಒಬ್ಬರು ಜಾಫ್ನಾ ಆಸ್ಪತ್ರೆಗೆ ದಾಖಲಾಗುವ ವೇಳೆ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೋರ್ವ ಮೀನುಗಾರನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಘಟನೆಯಿಂದ ಸಂತ್ರಸ್ತರ ಕುಟುಂಬ ಶ್ರೀಲಂಕಾ ನೌಕಾಪಡೆಯ ನಡೆಯನ್ನು ಖಂಡಿಸಿ ರಾಮೇಶ್ವರಂ ಬಂದರು ಪ್ರದೇಶದಲ್ಲಿ ರಸ್ತೆ ತಡೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಸಮಾಧಾನಪಡಿಸುತ್ತಿದ್ದಾರೆ.

ಇದನ್ನೂ ಓದಿ:ಜಮ್ಮು ಮತ್ತು ಕಾಶ್ಮೀರ: ಪಾಕಿಸ್ತಾನಿ ಒಳನುಸುಳುಕೋರನನ್ನು ಬೇಟೆಯಾಡಿದ ಬಿಎಸ್‌ಎಫ್ - Pakistani infiltrator shot dead

ABOUT THE AUTHOR

...view details