ಕರ್ನಾಟಕ

karnataka

ETV Bharat / bharat

ಬೆಂಗಳೂರಿನಿಂದ ವಿಜಯವಾಡಕ್ಕೆ ಮರಳಿದ ಜಗನ್ ಮೋಹನ್ ರೆಡ್ಡಿ - jagan returned to vijayawada

ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಬೆಂಗಳೂರಿನಿಂದ ವಿಜಯವಾಡಕ್ಕೆ ತಲುಪಿದ್ದಾರೆ.

By ETV Bharat Karnataka Team

Published : Jul 3, 2024, 8:15 PM IST

Jagan Mohan reddy
ಜಗನ್ ಮೋಹನ್ ರೆಡ್ಡಿ (ETV Bharat)

ಹೈದರಾಬಾದ್​ :ಬೆಂಗಳೂರಿನ ಯಲಹಂಕದಲ್ಲಿರುವ ತಮ್ಮ ಬಂಗಲೆಗೆ ತೆರಳಿದ್ದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಚುನಾವಣಾ ಸೋಲಿನ ಬಳಿಕ ವಿಜಯವಾಡಕ್ಕೆ ವಾಪಸ್​ ಆಗಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಗನ್ನವರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಗನ್‌ ಅವರನ್ನು ವೈಎಸ್‌ಆರ್‌ಸಿಪಿ ಮುಖಂಡರು ಸ್ವಾಗತಿಸಿದರು. ಜಗನ್ ಅವರನ್ನು ಸ್ವಾಗತಿಸಲು ಪೇರ್ಣಿ ನಾಣಿ, ವೆಲ್ಲಂಪಲ್ಲಿ ಶ್ರೀನಿವಾಸ್, ದೇವಿನೇನಿ ಅವಿನಾಶ್ ಸೇರಿದಂತೆ ಪ್ರಮುಖರು ಆಗಮಿಸಿದ್ದರು.

ಎನ್‌ಟಿಆರ್ ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುವ ಮಾಜಿ ಸಚಿವರಾದ ಕೊಡಾಲಿ ನಾನಿ, ಜೋಗಿ ರಮೇಶ್, ಮಲ್ಲಾಡಿ ವಿಷ್ಣು ಸೇರಿದಂತೆ ವೈಎಸ್‌ಆರ್‌ಸಿಪಿಯ ಪರಾಜಿತ ನಾಯಕರು ವಿಮಾನ ನಿಲ್ದಾಣಕ್ಕೆ ಬರದಿರುವುದು ಗಮನಾರ್ಹ.

ಸಾರ್ವತ್ರಿಕ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಸೋಲಿನ ನಂತರ, ಜಗನ್ ಜೂನ್ 22 ರಂದು ಮೊದಲ ಬಾರಿಗೆ ತಾಡೆಪಲ್ಲಿಯಿಂದ ಪುಲಿವೆಂದುಲಗೆ ತೆರಳಿದರು. ಕಳೆದ ಐದು ವರ್ಷಗಳಲ್ಲಿ, ಪುಲಿವೆಂದುಲದ ನಿವಾಸದಲ್ಲಿ ಮೂರು ದಿನಗಳನ್ನು ಕಳೆದ ಅವರು ಜನರಿಗೆ ನೇರವಾಗಿ ಭೇಟಿ ಮಾಡುವ ಅವಕಾಶವನ್ನು ನೀಡಿದ್ದರು.

ಇದರಿಂದಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಾಕಿ ಬಿಲ್‌ಗಳ ಬಗ್ಗೆ ಅನೇಕರು ಅವರ ಬಳಿ ಪ್ರಸ್ತಾಪಿಸಿದ್ದರು. ಇತ್ಯರ್ಥಕ್ಕೆ ಬಿಲ್​ಗಳು ಮುಂದೂಡಲ್ಪಟ್ಟಿದ್ದರಿಂದ ಬೆಂಗಳೂರಿಗೆ ತೆರಳಿದ್ದರು ಎಂದು ಗೊತ್ತಾಗಿದೆ.

ಇದನ್ನೂ ಓದಿ :ಜಗನ್​ ಕಟ್ಟಿಸಿದ್ದ 'ಸಿಎಂ ಕ್ಯಾಂಪ್​ ಕಚೇರಿ'ಯಲ್ಲಿ ಕನ್ನಡಿಯಿಂದ ಹಿಡಿದು ಬಾತ್ ಟಬ್‌​ವರೆಗೂ ವಿದೇಶಿ ವಸ್ತುಗಳೇ! ₹452 ಕೋಟಿ ವೆಚ್ಚ! - YS Jagan Luxurious Camp Office

ABOUT THE AUTHOR

...view details