ಕರ್ನಾಟಕ

karnataka

By PTI

Published : Jul 19, 2024, 2:57 PM IST

ETV Bharat / bharat

ಪ್ರಯಾಣಿಕರ ರಕ್ಷಣೆಗಾಗಿ ರಷ್ಯಾಕ್ಕೆ ಏರ್​ ಇಂಡಿಯಾ ರಿಲೀಫ್​ ಫ್ಲೈಟ್​ - AI relief flight from Mumbai

ದೆಹಲಿಯಿಂದ ಸ್ಯಾನ್​ಫ್ರಾನ್ಸಿಸ್ಕೋಗೆ ಹೋಗಬೇಕಿದ್ದ ವಿಮಾನ ತಾಂತ್ರಿಕ ದೋಷದಿಂದ ರಷ್ಯಾದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು.

air-india-operates-relief-flight-from-mumbai-to-fly-passengers-stranded-in-russia
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಮುಂಬೈ:ತಾಂತ್ರಿಕ ದೋಷದಿಂದ ರಷ್ಯಾದ ಕ್ರಾಸ್ನಾಯಾರ್ಕ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ದೆಹಲಿ - ಸ್ಯಾನ್​​ಪ್ರಾನ್ಸಿಸ್ಕೊ ವಿಮಾನ ಪ್ರಯಾಣಿಕರಿಗಾಗಿ ಏರ್​ ಇಂಡಿಯಾ ಸಂಸ್ಥೆ ರಿಲೀಫ್​ (ಪರ್ಯಾಯ) ವಿಮಾನ ಕಾರ್ಯಾಚರಣೆ ನಡೆಸಿದೆ.

ಈ ರಿಲೀಫ್​ ವಿಮಾವೂ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.52ಕ್ಕೆ ಟೇಕ್​ ಆಫ್​ ಆಗಿದ್ದು, ರಷ್ಯಾದ ಕ್ರಾಸ್ನಾಯಾರ್ಕ್​ನ ವಿಮಾ ನಿಲ್ದಾಣಕ್ಕೆ ಸಂಜೆ 7ಗಂಟೆಗೆ ತಲುಪಲಿದೆ ಎಂದು ಏರ್​ಲೈನ್ಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ 225 ಪ್ರಯಾಣಿಕರು, 19 ಸಿಬ್ಬಂದಿ ಸದಸ್ಯರನ್ನು ಹೊಂದಿದ್ದ ಎಐ 183 ದೆಹಲಿ - ಸ್ಯಾನ್​ ಪ್ರಾನ್ಸಿಸ್ಕೋ ವಿಮಾನ ಬೋಯಿಂಗ್​​ 777 ಏರ್​ಕ್ರಾಫ್ಟ್​ನ ಕಾರ್ಗೋ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಕಾಕ್​ಪಿಟ್​ ಸಿಬ್ಬಂದಿ ಪತ್ತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವೂ ರಷ್ಯಾದಲ್ಲಿ ಭೂ ಸ್ಪರ್ಶ ಮಾಡಿತ್ತು.

ರಿಲೀಫ್​ ಫ್ಲೈಟ್​ಗೆ ನಿಯಂತ್ರಣ ಪರವಾನಗಿ ಸಿಕ್ಕಿದ್ದು, ಮುಂಬೈನಿಂದ ಹಾರಾಟ ನಡೆಸಲಿದೆ ಎಂದು ಇಂದು ಬೆಳಗ್ಗೆ ಏರ್​ ಇಂಡಿಯಾ ತಿಳಿಸಿತು. ಅದರಂತೆ ಇದೀಗ ವಿಮಾನ ಹಾರಾಟ ನಡೆಸಿದ್ದು, ಪ್ರಯಾಣಿಕರ ನೆರವಿಗೆ ಏರ್​ ಇಂಡಿಯಾ ಮುಂದಾಗಿದೆ.

ಸ್ಯಾನ್​​ ಫ್ರಾನ್ಸಿಸ್ಕೋ ಬದಲಾಗಿ ರಷ್ಯಾದಲ್ಲಿ ಇಳಿದಿರುವ ಪ್ರಯಾಣಿಕರಿಗೆ ಅಲ್ಲಿನ ನಮ್ಮ ಏರ್​ ಇಂಡಿಯಾ ಸ್ಥಳೀಯ ಸಹಾಯಕರು ನೆರವು ನೀಡುತ್ತಿದ್ದಾರೆ. ರಷ್ಯಾ ವೀಸಾ ಇಲ್ಲದೇ ಇಳಿದಿರುವ ಅವರನ್ನು ಟರ್ಮಿನಲ್​ ಬಿಲ್ಡಿಂಗ್​ನಲ್ಲಿ ಉಳಿಯಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ವಿಮಾನ ರಷ್ಯಾಗೆ ಇಳಿದಾಗ ಅಲ್ಲಿನ ಆಹಾರ ಮತ್ತು ಸೇವೆ ಸೌಲಭ್ಯಗಳು ಸಂಜೆ ಬಂದ್​ ಆಗಿದ್ದವು. ಮನವಿ ಮೇರೆಗೆ ಅವುಗಳನ್ನು ತೆಗೆಸಿ, ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಅವರ ಸುರಕ್ಷತೆ ನಡೆಸಲಾಗಿದೆ ಎಂದರು.

ಇದನ್ನೂ ಓದಿ: ಲಖನೌಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನ ದುಬೈನಲ್ಲಿ ತುರ್ತು ಭೂಸ್ಪರ್ಶ

ABOUT THE AUTHOR

...view details