ಜವಾಬ್ದಾರಿಯನ್ನು ಎಚ್ಚರದಿಂದ ನಿರ್ವಹಿಸುವಂತೆ ವೈದ್ಯ ವಿದ್ಯಾರ್ಥಿಗಳಿಗೆ ನ್ಯಾ. ಸಂತೋಷ್ ಹೆಗ್ಡೆ ಸಲಹೆ
Published : Mar 4, 2020, 8:06 AM IST
Published : Mar 4, 2020, 8:06 AM IST
|Updated : Mar 4, 2020, 8:56 AM IST
ಹಾಸನ: ಜಿಲ್ಲೆಯ ವೈದ್ಯಕೀಯ ಕಾಲೇಜಿನ 9ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಮಾಹಿತಿ ಮಾತ್ರ ಒದಗಿಸುತ್ತವೆ. ಅಲ್ಲಿ ಲಭಿಸಿದ ಮೌಲ್ಯಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಪರಿಶ್ರಮ ಹಾಗೂ ಪೋಷಕರ ತ್ಯಾಗದ ಫಲವಾಗಿ ಎಂಬಿಬಿಎಸ್ ಪದವಿ ಪಡೆದಿದ್ದೀರಿ. ನಿಮ್ಮ ಮೇಲೆ ಸಮಾಜದ ಜವಾಬ್ದಾರಿ ಇದ್ದು, ಅದನ್ನು ಎಚ್ಚರದಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದ್ರು.
Last Updated : Mar 4, 2020, 8:56 AM IST