ಶಿವಾಜಿನಗರ ಬೈ ಎಲೆಕ್ಷನ್.. ಮತದಾರರ ಮನದಾಳ ಬಿಚ್ಚಿಟ್ಟ ಈಟಿವಿ ಭಾರತ..
ಬೆಂಗಳೂರು:ಶಿವಾಜಿನಗರ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಈಗಾಗಲೇ ಮತಬೇಟೆ ಆರಂಭಿಸಿದ್ದಾರೆ.ಆದರೆ, ಮತದಾರ ಪ್ರಭುಗಳು ರಾಜಕೀಯ ನಾಯಕರ ಚಳಿ ಬಿಡಿಸೋಕೆ ರೆಡಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಾಯಕರು ಕೈಮುಗಿದುಕೊಂಡು ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಬಳಿಕ ಯಾವುದೇ ನಾಯಕರು ಇತ್ತ ಸುಳಿಯುವುದಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಜನ.