ಸ್ಕೂಟರ್ ಡಿಕ್ಕಿಯಲ್ಲಿದ್ದ ನಾಗರ ಹಾವಿನ ಮರಿ, ರಕ್ಷಣೆ - ಮೈಸೂರು ಹಾವು ರಕ್ಷಣೆ ನ್ಯೂಸ್
🎬 Watch Now: Feature Video
ಸ್ಕೂಟರ್ ಡಿಕ್ಕಿಯಲ್ಲಿದ್ದ ನಾಗರಹಾವಿನ ಮರಿಯನ್ನು ಸ್ನೇಕ್ ಸೂರ್ಯಕೀರ್ತಿ ರಕ್ಷಣೆ ಮಾಡಿ ಜೋಪಾನವಾಗಿ ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಮನೆಯಿಂದ ಹೊರಟ ಸ್ಕೂಟರ್ ಸವಾರ ತಮ್ಮ ಸ್ಕೂಟರ್ ಡಿಕ್ಕಿಯಲ್ಲಿ ಬುಸುಗುಟ್ಟುತ್ತಿದ್ದ ಹಾವಿನ ಶಬ್ಧ ಕೇಳಿ ದಿವಾನ್ಸ್ ರಸ್ತೆಯಲ್ಲಿ ಗಾಡಿ ನಿಲ್ಲಿಸಿ, ಕೂಡಲೇ ಸ್ನೇಕ್ ಸೂರ್ಯಕೀರ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸ್ನೇಕ್ ಸೂರ್ಯಕೀರ್ತಿ, ಡಿಕ್ಕಿಯಲ್ಲಿದ್ದ ನಾಗರಹಾವಿನ ಮರಿಯನ್ನು ಹಿಡಿದು ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
Last Updated : Sep 6, 2020, 10:45 AM IST