ಸಂಪೂರ್ಣ ನಿಬಂಧನೆ ಹಾಕಿ ಯಾರಿಗೂ ಪ್ರವೇಶವಿಲ್ಲ ಅಂದ್ರೂ ಜನರ ಓಡಾಟ...ಏನ್ ಮಾಡೋದ್ ಇವರಿಗೆ
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಈಗಾಗಲೇ ಕೋವಿಡ್ - 19 ನ ಆರನೇ ಕೇಸ್ ದೃಢಪಟ್ಟಿದೆ. ಆದ್ದರಿಂದ ಜಿಲ್ಲಾಡಳಿತ ನಗರದ ಹೊರವಲಯದ ಗುಗ್ಗುರಟ್ಟಿ, ಕಾಕಲತೋಟ, ವೆಂಕಟಮ್ಮ ಕಾಲೋನಿಯಲ್ಲಿ ಪ್ರದೇಶಗಳನ್ನು ಸಂಪೂರ್ಣವಾಗಿ 5 ಕೀಲೋ ಮೀಟರ್ ನಿಬಂಧನೆ ಹಾಕಲಾಗಿದೆ. ಯಾರಿಗೂ ಪ್ರವೇಶವಿಲ್ಲ ಎಂದು ನಾಮಫಲಕವನ್ನು ಸಹ ಹಾಕಿದೆ. ಅಲ್ಲಲ್ಲಿ ಖಾಕಿ ಸರ್ಪಗಾವಲು ಕೂಡ ಹಾಕಲಾಗಿದೆ.ಆದ್ರೂ ಸಹ ಜನರ ಓಡಾಟ ಮಾತ್ರನಿಂತಿಲ್ಲ.