ಒಂದು ದೇಶ, ಒಂದೇ ಚುನಾವಣೆ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ : ಸ್ಪೀಕರ್ ಕಾಗೇರಿ
ಶಿರಸಿ: ಒಂದು ದೇಶ, ಒಂದೇ ಚುನಾವಣೆ ಅನ್ನೋ ವಿಷಯದ ಬಗ್ಗೆ 2 ದಿನಗಳ ಕಾಲ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಗೆ ಕಾಲಾವಕಾಶ ನೀಡಲಾಗುತ್ತೆ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಾಗೇರಿ, ರಾಷ್ಟ್ರಪತಿಗಳೂ ಕೂಡ ಈ ವಿಷಯವನ್ನ ಚರ್ಚೆ ಮಾಡುವಂತೆ ಸೂಚಿಸಿದ್ದಾರೆ ಎಂದರು.