ಕರ್ನಾಟಕ

karnataka

ನಾವು ಕಾಂಗ್ರೆಸ್​​​​ನಲ್ಲಿದ್ದಾಗ ಭಾರತ್ ಮಾತಾಕಿ ಜೈ ಅನ್ನೋದು ಕಲಿಸಲಿಲ್ಲ.. ಮಾಲೀಕಯ್ಯ ಗುತ್ತೇದಾರ್​​

By

Published : Jan 13, 2021, 9:05 PM IST

Published : Jan 13, 2021, 9:05 PM IST

ಕೊಪ್ಪಳ : ನಾವು ಕಾಂಗ್ರೆಸ್​​​ನಲ್ಲಿದ್ದಾಗ ಭಾರತ್ ಮಾತಾಕಿ ಜೈ ಎನ್ನುವುದನ್ನು ಕಲಿಸಲಿಲ್ಲ. ಅಲ್ಲಿ ಬರೀ ಗಾಂಧಿ ಕುಟುಂಬಕ್ಕೆ ಜೈ ಎನ್ನುವುದನ್ನು ಕಲಿಸಿದರು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ. ನಗರದ ಶಿವಶಾಂತವೀರ ಮಂಗಲಭವನದ ಆವರಣದಲ್ಲಿ ನಡೆದ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು 6 ಬಾರಿ ಶಾಸಕನಾಗಿದ್ದೆ. ನಾವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಮಗೆ ಇಂದಿರಾ ಗಾಂಧಿ ಕಿ ಜೈ, ರಾಜೀವ್ ಗಾಂಧಿಕಿ ಜೈ, ಸೋನಿಯಾ ಗಾಂಧಿಕಿ ಜೈ, ರಾಹುಲ್ ಗಾಂಧಿಕಿ ಜೈ ಅನ್ನಿಸ್ತಿದ್ದರು. ಈಗ ಅದು ಪ್ರಿಯಾಂಕ ಗಾಂಧಿ ಕಿ ಜೈ ಎಂಬುದನ್ನು ಕಲಿಸುತ್ತಾರೆ. ಆದರೆ, ಬಿಜೆಪಿಯಲ್ಲಿ ಭಾರತ್ ಮಾತಾ ಕಿ ಜೈ ಎಂದು ಹೇಳುತ್ತಾರೆ. ಕೊನೆ ಕ್ಷಣದಲ್ಲಾದರೂ ಇಂತಹ ಪಕ್ಷ ಸೇರಿದೆವಲ್ಲ ಎಂಬ ತೃಪ್ತಿ ಇದೆ ಎಂದಿದ್ದಾರೆ.

ABOUT THE AUTHOR

...view details